Headlines

BBK 12: ಮಂಜು ಪರ್ಸನಲ್‌ ಲೈಫ್‌ಗೆ ಡ್ಯಾಮೇಜಿಂಗ್‌ ಹೇಳಿಕೆ ಕೊಟ್ಟ ಗಿಲ್ಲಿ ನಟ; ತಿರುಗಿಬಿದ್ದ ಬುಜ್ಜಿ | Bigg Boss Kannada Season 12 Gilli Nata On Max Manju Marriage

BBK 12: ಮಂಜು ಪರ್ಸನಲ್‌ ಲೈಫ್‌ಗೆ ಡ್ಯಾಮೇಜಿಂಗ್‌ ಹೇಳಿಕೆ ಕೊಟ್ಟ ಗಿಲ್ಲಿ ನಟ; ತಿರುಗಿಬಿದ್ದ ಬುಜ್ಜಿ | Bigg Boss Kannada Season 12 Gilli Nata On Max Manju Marriage


15

 ನಾನು ಬೇರೆ ಆಗ್ತೀನಿ

Image Credit : colors kannada

ನಾನು ಬೇರೆ ಆಗ್ತೀನಿ

ಬಿಗ್‌ ಬಾಸ್‌ ಎಲ್ಲರ ಮುಂದೆ ಮ್ಯಾಕ್ಸ್‌ ಮಂಜು ಅವರಿಗೆ ಕಂಕಣ ಭಾಗ್ಯ ಕೂಡಿಬಂದಿದೆ ಎಂದು ಹೇಳಿದ್ದಾರೆ. ಆಗ ಗಿಲ್ಲಿ ನಟ ಅವರು, “ಎರಡನೇಯದೋ, ಮೂರನೆಯದೋ” ಎಂದು ಕೇಳಿದ್ದಾರೆ. ಆಮೇಲೆ ಇದನ್ನು ಪ್ರಶ್ನೆ ಮಾಡಿದಾಗ, ಗಿಲ್ಲಿ ನಟ ಅವರು, “ಯುಟ್ಯೂಬ್‌ನಲ್ಲಿ ಹೋದ ವರ್ಷ ಮದುವೆ ಆಗಿದೆ ಎಂದು ಓದಿದ್ದೆ” ಎಂದಿದ್ದಾರೆ. ಆಗ ಮಂಜು ಅವರು, “ನೀನು ಲಿಮಿಟ್‌ ಮೀರಿ, ಪರ್ಸನಲ್‌ ಆಗಿ ಹೋದರೆ ನಾನು ಬೇರೆ ಆಗ್ತೀನಿ” ಎಂದಿದ್ದಾರೆ.

25

ಕಾಮಿಡಿ ಮಾಡು

Image Credit : colors kannada

ಕಾಮಿಡಿ ಮಾಡು

“ನಾವು ಬಹಳ ಅತಿರೇಕ ನನ್ನ ಮಕ್ಕಳು, ನೀನು ಅತಿರೇಕ ಮಾಡೋಕೆ ಹೋಗಬೇಡ. ನೀನು ಯಾಕೆ ಮಾತಾಡ್ತಿತ್ತಿದ್ಯಾ?” ಎಂದು ಮಂಜು ಹೇಳಿದ್ದಾರೆ. ಈ ಬಗ್ಗೆ ರಜತ್‌ ಕೂಡ ಮಾತನಾಡಿದ್ದು, “ಮಂಜುಗೆ ಎರಡನೇಯದಾ? ಮೂರನೇಯದಾ ಎಂದು ಪ್ರಶ್ನೆ ಮಾಡಿದ್ದರೆ ಬೇಸರ ಆಗುತ್ತದೆ, ಕಾಮಿಡಿ ಮಾಡು, ಆ ಥರ ಮಾಡಬಾರದು” ಎಂದು ಹೇಳಿದ್ದಾರೆ.

35

ಇರಿಟೇಟ್‌ ಆದ ಸ್ಪರ್ಧಿಗಳು

Image Credit : colors kannada

ಇರಿಟೇಟ್‌ ಆದ ಸ್ಪರ್ಧಿಗಳು

ಗಿಲ್ಲಿ ನಟ ಅವರ ಕಾಮಿಡಿ, ಉಳಿದ ಸ್ಪರ್ಧಿಗಳಿಗೆ ಇರಿಟೇಟ್‌ ಆಗಿದೆ. ಇದನ್ನು ತ್ರಿವಿಕ್ರಮ್‌, ಮಂಜು, ರಜತ್‌ ಅವರು ಮಾತನಾಡಿಕೊಂಡಿದ್ದಾರೆ. ಉಳಿದ ಎಲ್ಲ ಸ್ಪರ್ಧಿಗಳು ಸೈಲೆಂಟ್‌ ಆಗಿದ್ದು, ಸಪ್ಲೈಯರ್‌ ಆಗಿದ್ದರು. ಇನ್ನೊಂದು ಕಡೆ ಗಿಲ್ಲಿ ಬಿಟ್ಟು ಉಳಿದವರು ಯಾರೂ ಅಗತ್ಯಕ್ಕಿಂತ ಜಾಸ್ತಿ ಮಾತನಾಡಿಲ್ಲ. 

45

ಯುಟ್ಯೂಬ್‌ನಲ್ಲಿ ಬಂದಿದ್ದೆಲ್ಲವೂ ಸತ್ಯಾನಾ?

Image Credit : colors kannada

ಯುಟ್ಯೂಬ್‌ನಲ್ಲಿ ಬಂದಿದ್ದೆಲ್ಲವೂ ಸತ್ಯಾನಾ?

“ಎಲ್ಲರದ್ದು ಒಂದು ಸ್ಪೇಸ್‌ ಅಂತ ಇರುತ್ತದೆ, ಚೆನ್ನಾಗಿ ಆಡುತ್ತಿದ್ದೀಯಾ, ಎಲ್ಲರ ಪೇಮೆಂಟ್‌ನ್ನು ನೀನೇ ತಗೋತಿದ್ಯಾ? ಮಾತು ಲಿಮಿಟ್‌ ಇರುತ್ತದೆ. ನನ್ನ ಮದುವೆಗೆ ನೀನು ಬಂದಿದ್ಯಾ? ಯುಟ್ಯೂಬ್‌ನಲ್ಲಿ ಬಂದಿದ್ದೆಲ್ಲವೂ ಸತ್ಯಾನಾ? ಮಾತು ಲಿಮಿಟ್‌ ಅಲ್ಲಿ ಇರಬೇಕು” ಎಂದು ಗಿಲ್ಲಿ ನಟನಿಗೆ ಮಂಜು ಬುದ್ಧಿ ಹೇಳಿದ್ದರು.

55

ಕ್ಷಮೆ ಕೇಳಿದ ಗಿಲ್ಲಿ ನಟ

Image Credit : colors kannada

ಕ್ಷಮೆ ಕೇಳಿದ ಗಿಲ್ಲಿ ನಟ

ಗಿಲ್ಲಿ ನಟ ಅವರು ತಾವು ಆಡಿದ ಮಾತಿಗೆ ಪದೇ ಪದೇ ಕ್ಷಮೆ ಕೇಳಿದ್ದಾರೆ. ಆದರೂ ಕೂಡ ಪದೇ ಪದೇ ಈ ವಿಷಯವು ಚರ್ಚೆ ಆಗಿದೆ. ಹಾಗಾದರೆ ಮುಂದೆ ಏನಾಗುವುದು ಎಂದು ಕಾದು ನೋಡಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

Padmashree Bhat

ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.



Source link

Leave a Reply

Your email address will not be published. Required fields are marked *