
<p>Bigg Boss Kannada 12 Elimination: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಟಾಪ್ 6 ಸ್ಪರ್ಧಿಗಳ ಆಯ್ಕೆ ಆಗಬೇಕು. ಹೀಗಿರುವಾಗ ಮಿಡ್ ವೀಕ್ ಎಲಿಮಿನೇಶನ್ ಆಗಿದೆ. ಧ್ರುವಂತ್ ಮನೆಯಿಂದ ಹೊರಬಂದಿದ್ದಾರೆ. ಹಾಗಾದರೆ ಯಾರದು?</p><p> </p><img><p>ಹೌದು, ಧನುಷ್ ಗೌಡ ಈಗಾಗಲೇ ಟಾಪ್ 6 ಸ್ಥಾನಕ್ಕೆ ಅವಕಾಶ ಪಡೆದಿದ್ದರು. ಅಶ್ವಿನಿ ಗೌಡ, ಧ್ರುವಂತ್, ಗಿಲ್ಲಿ ನಟ, ರಘು, ರಕ್ಷಿತಾ ಶೆಟ್ಟಿ, ಕಾವ್ಯ ಶೈವ ಅವರ ಮಧ್ಯೆ ಯಾರು ಔಟ್ ಆಗುತ್ತಾರೆ ಎಂಬ ಪ್ರಶ್ನೆ ಇತ್ತು.</p><img><p>ಅಂದಹಾಗೆ ಧ್ರುವಂತ್ ಅವರು ಎಲಿಮಿನೇಟ್ ಆಗಿದ್ದಾರೆ. ಧ್ರುವಂತ್ ಅವರು ಇಡೀ ಸೀಸನ್ನಲ್ಲಿ ಮನರಂಜನೆ ನೀಡಿದ ಸ್ಪರ್ಧಿ ಎಂದು ಹೇಳಿ ಕಿಚ್ಚ ಸುದೀಪ್ ಅವರು ಇಡೀ ಸೀಸನ್ಗೆ ಕಿಚ್ಚನ ಚಪ್ಪಾಳೆ ನೀಡಿದ್ದರು. ಈ ಬಗ್ಗೆ ವ್ಯಾಪಕ ವಿರೋಧ ಬಂದಿತ್ತು.</p><img><p>ಧ್ರುವಂತ್ ಅವರಿಗೆ ಇಡೀ ಸೀಸನ್ಗೆ ಸಂಬಂಧಪಟ್ಟಂತೆ ಚಪ್ಪಾಳೆ ಕೊಡ್ತಿದ್ದಾರೆ, ಗಿಲ್ಲಿ ನಟನಿಗೆ ಸಿಗಬೇಕಿತ್ತು ಎಂದು ಅನೇಕರು ಹೇಳಿದ್ದುಂಟು. ಅಂದಹಾಗೆ ಧ್ರುವಂತ್ ಅವರು ಭ್ರಮೆಯಲ್ಲಿ ಬದುಕುತ್ತಿದ್ದಾರೆ ಎಂದು ರಾಶಿಕಾ ಹೇಳಿದ್ದರು.</p><img><p>ಇನ್ನು ಧ್ರುವಂತ್ ಅವರು ದೊಡ್ಮನೆಯೊಳಗಡೆ ಅಭಿಮಾನಿಗಳ ಜೊತೆ ಮಾತನಾಡಿದ್ದು ಕೂಡ ಟ್ರೋಲ್ ಆಗಿತ್ತು. “ಒನ್ ಮ್ಯಾನ್ ಆರ್ಮಿಯಾಗಿ ಆಡಿದ್ದೇನೆ, ನೀವೆಲ್ಲ ನನ್ನ ಮೇಲೆ ನಂಬಿಕೆ ಇಟ್ಟು ಇಲ್ಲಿಗೆ ಕಳಿಸಿದ್ದೀರಿ, ನಾನು ಆಟ ಆಡಿ, ಎಲ್ಲರನ್ನು ಹೊರಗಡೆ ಕಳಿಸಿದ್ದೇನೆ” ಎಂದು ಹೇಳಿದ್ದರು.</p><img><p>ಧ್ರುವಂತ್ ಅವರು ಅತಿಯಾಗಿ, ಆತ್ಮವಿಶ್ವಾಸದಿಂದ ಮಾತನಾಡಿದ್ದಾರೆ ಎಂದು ಅನೇಕರು ಹೇಳಿದ್ದರು. ಕಿಚ್ಚನ ಚಪ್ಪಾಳೆ ಪಡೆದವರು ಯಾಕೆ ದೊಡ್ಮನೆಯಲ್ಲಿ ಇಲ್ಲ ಎಂಬ ಪ್ರಶ್ನೆ ಕೂಡ ಕೇಳಿ ಬಂದಿದೆ. ಇನ್ನೂ ಕೆಲವರು ಕಾವ್ಯ ಅವರಿಗಿಂತ ಧ್ರುವಂತ್ ಅವರು ಆ ಮನೆಯಲ್ಲಿ ಇರಲು ಅರ್ಹರು ಎಂದು ಕೂಡ ಕಲರ್ಸ್ ಕನ್ನಡ ಪೇಜ್ನಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.</p>
Source link
ಇಡೀ ಸೀಸನ್ಗೆ ಕಿಚ್ಚನ ಚಪ್ಪಾಳೆ ಪಡೆದು BBK 12 ಶೋಗೆ ಗುಡ್ಬೈ ಹೇಳಿದ Dhruvanth; ವೀಕ್ಷಕರಿಗೆ ಅದೇ ಡೌಟ್!