15

Image Credit : colors kannada instagram
PR Team ಬಗ್ಗೆ ಸುದೀಪ್ ಮಾತಾಡಿದ್ರು
ಬಿಗ್ ಬಾಸ್ ಎಂದಕೂಡಲೇ ಸ್ಪರ್ಧಿಗಳ ಪಿಆರ್ ಟೀಂ ದೊಡ್ಡ ಮಟ್ಟದಲ್ಲಿ ಕೆಲಸ ಮಾಡುವುದು. ಈ ಪಿಆರ್ ಟೀಂಗಳ ಬಗ್ಗೆ ಕಿಚ್ಚ ಸುದೀಪ್ ಕೂಡ ಈ ಬಾರಿ ಇದೇ ವೇದಿಕೆಯಲ್ಲಿ ಮಾತನಾಡಿದ್ದೂ ಇದೆ. ಸ್ಪರ್ಧಿಗಳ ಪ್ರಚಾರ ಮಾಡೋದು ಸರಿ, ಆದರೆ ಬೇರೆ ಸ್ಪರ್ಧಿಗಳ ತೇಜೋವಧೆ ಮಾಡೋದು ಸರಿ ಅಲ್ಲ ಎಂದು ಈ ಹಿಂದಿನ ಸೀಸನ್ಗಳಲ್ಲಿ ಸ್ಪರ್ಧಿಗಳು ಹೇಳಿದ್ದುಂಟು.
25
Image Credit : colors kannada instagram
ಕಾವ್ಯ ಅಕೌಂಟ್ ಆಕ್ಟಿವ್ ಇಲ್ಲ
ಈ ಸೀಸನ್ ಸ್ಪರ್ಧಿಗಳ ಕೆಲ ಅಕೌಂಟ್ಗಳಲ್ಲಿ ಮಾತ್ರ ಪೋಸ್ಟ್ಗಳು ಕಾಣುತ್ತಿವೆ. ಈ ಹಿಂದಿನ ಸೀಸನ್ಗಳಿಗೆ ಹೋಲಿಸಿದರೆ, ಈ ಬಾರಿ ಅಷ್ಟಾಗಿ ಪಿಆರ್ ಟೀಂ ವರ್ಕ್ ಮಾಡುತ್ತಿಲ್ಲ ಎಂದು ಕಾಣುತ್ತಿದೆ. ಎಷ್ಟೋ ಸ್ಪರ್ಧಿಗಳ ಅಕೌಂಟ್ನಲ್ಲಿ ಏನೂ ಪೋಸ್ಟ್ ಕೂಡ ಆಗುತ್ತಿಲ್ಲ. ಆದರೆ ಕಾವ್ಯ ಅಕೌಂಟ್ ಮಾತ್ರ ಆಕ್ಟಿವ್ ಆಗಿತ್ತು.
35
Image Credit : colors kannada instagram
ಕ್ಷಮೆ ಕೇಳ್ತೀನಿ ಅನ್ಕೊಂಡಿದ್ದೀರಾ?
“ಕಾವ್ಯ ಶೈವ ಅಕೌಂಟ್ನಲ್ಲಿ ಏನೂ ಪೋಸ್ಟ್ ಮಾಡ್ತಿಲ್ಲ? ಯಾಕೆ ಏನಾಯ್ತು ಎಂದು ಕೆಲವರು ಹೇಳಿದ್ದಿದೆ. ಕಾವ್ಯನಿಗೆ ತುಂಬ ನೆಗೆಟಿವಿಟಿ ಹರಡುತ್ತಿದ್ದಾರೆ. ಪ್ಲೀಸ್, ಕಾವ್ಯನ ಬಗ್ಗೆ ನೆಗೆಟಿವಿಟಿ ಹರಡಬೇಡಿ ಎಂದು ನಿಮ್ಮ ಬಳಿ ಕೇಳಿಕೊಳ್ತಿದೀನಿ, ಅವಳ ಕಡೆಯಿಂದ ನಿಮ್ಮ ಬಳಿ ಕ್ಷಮೆ ಕೇಳ್ತೀನಿ ಎಂದು ಅಂದುಕೊಂಡಿದ್ದೀರಾ?” ಎಂದು ಕಾರ್ತಿಕ್ ಪ್ರಶ್ನೆ ಮಾಡಿದ್ದಾರೆ.
45
Image Credit : colors kannada instagram
ಇನ್ನೂ ಆಟ ಬಾಕಿ ಇದೆ
“ಬಿಗ್ ಬಾಸ್ ಶೋ ಶುರುವಾಗಿ ಐವತ್ತು ದಿನ ಇದೆ. ಇನ್ನೂ ಆಟ ಬಾಕಿ ಇದೆ. ಇನ್ನೂ ನೋಡೋಕೆ ತುಂಬ ಇದೆ, ಏನೂ ಇಲ್ಲದೆ, ಕಾರಣವಿಲ್ಲದೆ, ನೀವು ನೆಗೆಟಿವಿಟಿ ಶುರು ಮಾಡಿದ್ದೀರಾ ಅಂತ ಅಂದ್ರೆ ಕಾವ್ಯ ಯಾವ ರೇಂಜ್ಗೆ ಪಿಆರ್ ಟೀಂಗೆ ಭಯ ಹುಟ್ಟಿಸಿರಬಹುದು?” ಎಂದು ಕಾವ್ಯ ಸಹೋದರ ಹೇಳಿದ್ದಾರೆ.
55
Image Credit : colors kannada instagram
ಕಾವ್ಯಳನ್ನು ತುಳಿದು ಹಾಕಬೇಕು ಅನ್ಕೊಂಡ್ರಾ?
“ಕಾವ್ಯಳನ್ನು ತುಳಿದು ಹಾಕಬೇಕು ಎಂದುಕೊಂಡಿದ್ದೀರಾ? ಅವೆಲ್ಲ ನಡೆಯಲ್ಲ. ಇನ್ನೂ ನೋಡೋಕೆ ತುಂಬ ಇದೆ. ಫಿನಾಲೆ ದಿನ ಕಿಚ್ಚ ಸುದೀಪ್ ಅವರ ಒಂದು ಕೈನಲ್ಲಿ ಕಾವ್ಯ ಶೈವ ಇದ್ದೇ ಇರುತ್ತಾಳೆ, ಬರೆದಿಟ್ಕೋಳಿ” ಎಂದು ಕಾರ್ತಿಕ್ ಚಾಲೆಂಜ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.