BBK 12: ಗಿಲ್ಲಿ ನಟ ನನ್ನ ಪಾಲಿಗೆ ಹಾವು- ಕಿಚ್ಚ ಸುದೀಪ್‌ ಮುಂದೆಯೇ ತಿರುಗಿ ಬಿದ್ದ ಕಾವ್ಯ ಶೈವ | Bigg Boss Kannada Season 12 Kavya Shaiva Calls Snake To Gilli Nata

BBK 12: ಗಿಲ್ಲಿ ನಟ ನನ್ನ ಪಾಲಿಗೆ ಹಾವು- ಕಿಚ್ಚ ಸುದೀಪ್‌ ಮುಂದೆಯೇ ತಿರುಗಿ ಬಿದ್ದ ಕಾವ್ಯ ಶೈವ | Bigg Boss Kannada Season 12 Kavya Shaiva Calls Snake To Gilli Nata


15

ಹಾವು ಎಂದ ಅಶ್ವಿನಿ ಗೌಡ

Image Credit : colors kannada instagram

ಹಾವು ಎಂದ ಅಶ್ವಿನಿ ಗೌಡ

ಅಶ್ವಿನಿ ಗೌಡ ಅವರು ಗಿಲ್ಲಿ ನಟನಿಗೆ ಹಾವು ಎಂದು ಕರೆದಿದ್ದಾರೆ. ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ ಮಧ್ಯೆ ಸಾಕಷ್ಟು ಜಗಳ ಆಗಿದೆ. ಆರಂಭದ ದಿನಗಳಿಂದಲೂ ಇವರು ಜಗಳ ಆಡಿಕೊಂಡಿದ್ದಾರೆ. ಗಿಲ್ಲಿ ನನಗೆ ತೇಜೋವಧೆ ಮಾಡಿದ್ದಾನೆ, ನನಗೆ ಏಕವಚನದಲ್ಲಿ ಮಾತನಾಡಿಸಿದರು, ನನ್ನ ವ್ಯಕ್ತಿತ್ವ ತಿರುಚಿದರು ಎಂದು ಅಶ್ವಿನಿ ಆರೋಪ ಮಾಡಿದ್ದರು.

25

ನನ್ನ ವ್ಯಕ್ತಿತ್ವ ಬದಲಾಯಿಸುತ್ತಿದ್ದಾನೆ

Image Credit : colors kannada instagram

ನನ್ನ ವ್ಯಕ್ತಿತ್ವ ಬದಲಾಯಿಸುತ್ತಿದ್ದಾನೆ

ನಾನು ಬಂದಾಗಿನಿಂದ ಗಿಲ್ಲಿ ನಟ, ನನ್ನ ವ್ಯಕ್ತಿತ್ವವನ್ನು ಬದಲಾಯಿಸೋಕೆ ಟ್ರೈ ಮಾಡ್ತಿದ್ದಾನೆ ಎಂದು ರಘು ಅವರು ಹೇಳಿದ್ದಾರೆ. ಈ ಹಿಂದೆ ಕ್ವಾಟ್ಲೆ ಕಿಚನ್‌ ಶೋನಲ್ಲಿ ರಘು, ಗಿಲ್ಲಿ ನಟ ಭಾಗಿಯಾಗಿದ್ದರು. ಈಗ ಈ ಮನೆಯಲ್ಲಿ ರಘು ಅಣ್ಣ ಎಂದು ಯಾವಾಗಲೂ ಅವರ ಜೊತೆ ಇರುತ್ತ, ಗೇಲಿ ಮಾಡುತ್ತ, ತಮಾಷೆ ಮಾಡುತ್ತಿದ್ದ ಗಿಲ್ಲಿ ಕಂಡ್ರೆ ಈಗ ರಘುಗೆ ಆಗುತ್ತಿಲ್ಲ. ಇವರಿಬ್ಬರು ದೂರ ದೂರ ಆಗಿದ್ದಾರೆ.

35

ನನ್ನ ಕಾವು ಅಂತ ಕರೆಯುತ್ತಾನೆ

Image Credit : colors kannada instagram

ನನ್ನ ಕಾವು ಅಂತ ಕರೆಯುತ್ತಾನೆ

ಕಾವ್ಯ ಶೈವ ಅವರು ಗಿಲ್ಲಿ ನಟನಿಗೆ ಹಾವು ಪಟ್ಟ ಕೊಟ್ಟಿದ್ದಾರೆ. “ಪದೇ ಪದೇ ನನ್ನ ಕಾವು ಅಂತ ಕರೆಯೋದು, ಬೇರೆಯವರ ಕಣ್ಣಿಗೆ ಬೇರೆ ಥರ ಕಾಣಿಸ್ತಿದೆ. ಇದರಿಂದ ನನಗೆ ಹರ್ಟ್‌ ಆಗ್ತಿದೆ ಎಂದಾಗ ಅರ್ಥ ಮಾಡಿಕೊಂಡು ನಿಲ್ಲಿಸುತ್ತಾನೆ ಎಂದುಕೊಂಡಿದ್ದೆ. ಆ ರೀತಿ ಮಾಡಿಲ್ಲ” ಎಂದು ಹೇಳಿದ್ದಾರೆ.

45

ಗಿಲ್ಲಿ ಅಂದ್ರೆ ಕಾವ್ಯ ಜೀರೋನಾ?

Image Credit : colors kannada instagram

ಗಿಲ್ಲಿ ಅಂದ್ರೆ ಕಾವ್ಯ ಜೀರೋನಾ?

ಕಾವ್ಯ ಶೈವ ಹಾಗೂ ಗಿಲ್ಲಿ ನಟ ಈ ಹಿಂದೆ ಡ್ಯಾನ್ಸ್‌ ಶೋವೊಂದರಲ್ಲಿ ಭಾಗಿಯಾಗಿದ್ದರು. ಈ ಮನೆಯಲ್ಲಿ ಜಂಟಿಯಾಗಿ ಆಟ ಶುರು ಮಾಡಿದ ಇವರ ಮಧ್ಯೆ ಸ್ನೇಹ ಇದೆ. ಗಿಲ್ಲಿ ನಟನಿಂದಲೇ ಕಾವ್ಯ ಇಲ್ಲಿರೋದು ಎಂದು ರಿಷಾ ಗೌಡ ಕೂಡ ಹೇಳಿದ್ದುಂಟು. ಗಿಲ್ಲಿ ಇಲ್ಲ ಅಂದರೆ ಕಾವ್ಯ ಜೀರೋ ಎಂದು ಕೂಡ ಹೇಳಿದ್ದರು.

55

ಅಣ್ಣಾ ಎಂದ ಕಾವ್ಯ

Image Credit : colors kannada

ಅಣ್ಣಾ ಎಂದ ಕಾವ್ಯ

ಗಿಲ್ಲಿ ನಟ ಅವರು ಕಾವ್ಯ ಶೈವ ಅಂಥ ಹುಡುಗಿಯೇ ಬೇಕು, ಇವರನ್ನು ಮದುವೆ ಆಗ್ತೀನಿ ಎಂದು ಕಿಚ್ಚ ಸುದೀಪ್‌ ಮುಂದೆ ಹೇಳಿದ್ದುಂಟು. ಪದೇ ಪದೇ ಕಾವ್ಯ ಅವರು ಗಿಲ್ಲಿಗೆ ಅಣ್ಣಾ ಎಂದು ಕರೆದಿದ್ದುಂಟು. ಈ ಸ್ನೇಹ ಮುಂದಿನ ದಿನಗಳಲ್ಲಿ ಏನಾಗಲಿದೆ ಎಂದು ಕಾದು ನೋಡಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

Padmashree Bhat

ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.



Source link

Leave a Reply

Your email address will not be published. Required fields are marked *