ಬಿಗ್ಬಾಸ್ ಕನ್ನಡ ಸೀಸನ್ 12 ರ (ಬಿಗ್ ಬಾಸ್ ಕನ್ನಡ 12) ಶನಿವಾರದ ಎಪಿಸೋಡ್ನಲ್ಲಿ ಇಬ್ಬರು ಒಟ್ಟಿಗೆ ಹೋಗಿದ್ದಾರೆ. ಈ ವಾರ ಮೊದಲ ಫಿನಾಲೆ ನಡೆಯುತ್ತಿತ್ತು, ಈ ವಾರವೇ ಬಿಗ್ಬಾಸ್ ಮನೆಯಿಂದ ಆರು ಮಂದಿ ಹೊರಗೆ ಹೋಗಲಿದ್ದಾರೆ ಎಂಬ ಸುದೀಪ್ ಅವರು ಸುದ್ದಿಗಾರರಿಗೆ ತಿಳಿಸಿದರು. ಅದರಂತೆ ವಾರದ ಪಂಚಾಯಿತಿಯ ಮೊದಲ ದಿನ ಅಂದರೆ ಶನಿವಾರವೇ ಬಿಗ್ಬಾಸ್ ಮನೆಯಿಂದ ಇಬ್ಬರನ್ನು ಎಲಿಮಿನೇಟ್ ಮಾಡಲಾಯ್ತು. ಅಲ್ಲಿಗೆ ಡಾಗ್ ಸತೀಶ್ ಸಹ ವಾರದಲ್ಲಿ ಈ ಒಂದು ದಿನ ಬಾಕಿ ಇರುವಂತೆ ಮೂರು ಮಂದಿಯನ್ನು ಮನೆಯಿಂದ ಹೊರ ಹಾಕಲಾಗಿದೆ.
ಈ ವಾರ ಭರ್ಜರಿ ನಾಮನಿರ್ದೇಶನಗಳು. ಈ ವಾರ ಬರೋಬ್ಬರಿ 11 ಮಂದಿ ನಾಮಿನೇಟ್ ಆಗಿದ್ದರು. ಗಿಲ್ಲಿ, ಕಾವ್ಯ, ಮಲ್ಲಮ್ಮ, ಮಂಜು ಭಾಷಿಣಿ, ಅಶ್ವಿನಿ, ಸ್ಪಂದನಾ, ರಕ್ಷಿತಾ ಶೆಟ್ಟಿ, ಅಭಿಷೇಕ್, ಧ್ರುವಂತ್, ಧನುಷ್, ಚಂದ್ರಪ್ರಭಾ ಅವರಲ್ಲಿ ನಾಮಿನೇಟ್ ಆಗಿದ್ದರು. ಎಲ್ಲ ಸ್ಪರ್ಧಿಗಳಿಂದ ಗೇಮ್ ಒಂದನ್ನು ಸುದೀಪ್ ಆಡಿಸಿದರು. ನಾಮಿನೇಟ್ ಆದ ಸ್ಪರ್ಧಿಗಳ ಫೋಟೊ ಇರಿಸಿ ಅದರ ಮೇಲೆ ಇದ್ದ ಗಾಜಿನ ಹೊದಿಕೆಯನ್ನು ಅವರಿಂದಲೇ ಹೊಡೆಸಲಾಯ್ತು. ಯಾರಿಗೆ ಸೇಫ್ ಎಂದು ಬಂದಿದ್ದಾರೆ ಅವರು ಸೇಫ್, ಯಾರಿಗೆ ಡೇಂಜರ್ ಎಂದು ಬಂದಿದ್ದಾರೆ ಅವರು ಡೇಂಜರ್ ಜೋನ್.
ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಸಂಜನಾ ಬರೆದ ಚಿತ್ರ ನೋಡಿ ನಗುವೋ ನಗು
ಈ ಕ್ರಿಯೆಯಲ್ಲಿ ಚಂದ್ರಪ್ರಭಾ, ಗಿಲ್ಲಿ, ಕಾವ್ಯ, ರಕ್ಷಿತಾ ಶೆಟ್ಟಿ, ಮಲ್ಲಮ್ಮ ಅವರು ಸೇಫ್ ಆಗಿಬಿಟ್ಟರು. ಅಶ್ವಿನಿ, ಸ್ಪಂದನಾ, ಮಂಜು ಭಾಷಿಣಿ, ಅಶ್ವಿನಿ, ಅಭಿಷೇಕ್, ಧ್ರುವಂತ್, ಧನುಶ್ ಅವರುಗಳು ಡೇಂಜರ್ ಜೋನ್ ನಲ್ಲಿ ಉಳಿದಿದ್ದಾರೆ. ಬಳಿಕ ಡೇಂಜರ್ ಜೋನ್ ಅವರನ್ನು ಮಾತ್ರವೇ ಕರೆದು ಮತ್ತೊಂದು ಆಟ ಆಡಿಸಲಾಯ್ತು. ಆ ಆಟದಲ್ಲಿ ಧ್ರುವಂತ್ ಮತ್ತು ಸ್ಪಂದನಾ ಸೇಫ್ ಆದರು.
ಉಳಿದ ಸ್ಪರ್ಧಿಗಳಲ್ಲಿ ಹೊರ ಹೋಗುತ್ತಿರುವವರ ಹೆಸರನ್ನು ಸುದೀಪ್ ಪ್ರಕಟಿಸಿದರು. ಮಂಜು ಭಾಷಿಣಿ ಮತ್ತು ಅಶ್ವಿನಿ ಅವರು ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋದರು. ಮಿಡ್ ವೀಕ್ ಎಲಿಮಿನೇಷನ್ ನಲ್ಲಿ ಡಾಗ್ ಸತೀಶ್ ಹೊರಗೆ ಹೋಗಿದ್ದರು. ಈಗ ಮಂಜು ಭಾಷಿಣಿ ಮತ್ತು ಅಶ್ವಿನಿ ಹೊರ ಹೋಗುವ ಮೂಲಕ ವಾರದಲ್ಲಿ ಈ ಒಂದು ದಿನ ಉಳಿದಿರುವಾಗಲೇ ಮೂವರು ಹೊರ ಹೋಗಿದ್ದಾರೆ. ಅಂದಹಾಗೆ ನಳಿನ ಎಪಿಸೋಡ್ ನಲ್ಲಿ ಕೆಲ ಹೊಸ ಸ್ಪರ್ಧಿಗಳು ಬಿಗ್ಬಾಸ್ ಮನೆ ಸೇರುವ ಸಾಧ್ಯತೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ