Headlines

Bigg Boss ಕಾವ್ಯಾಗೆ ಧರ್ಮ ಸಂಕಟ- ಆ ಮಾತು ಕೇಳಿದ್ರೆ ಹೊರ ಬರೋದು ಗ್ಯಾರೆಂಟಿ! ಸೂರಜ್​ ಸಿಂಗ್​ ಹೇಳಿದ್ದೇನು?

Bigg Boss ಕಾವ್ಯಾಗೆ ಧರ್ಮ ಸಂಕಟ- ಆ ಮಾತು ಕೇಳಿದ್ರೆ ಹೊರ ಬರೋದು ಗ್ಯಾರೆಂಟಿ! ಸೂರಜ್​ ಸಿಂಗ್​ ಹೇಳಿದ್ದೇನು?



Bigg Boss ಕಾವ್ಯಾಗೆ ಧರ್ಮ ಸಂಕಟ- ಆ ಮಾತು ಕೇಳಿದ್ರೆ ಹೊರ ಬರೋದು ಗ್ಯಾರೆಂಟಿ! ಸೂರಜ್​ ಸಿಂಗ್​ ಹೇಳಿದ್ದೇನು?
<p>ಬಿಗ್​ಬಾಸ್​ ಮನೆಯಿಂದ ಎಲಿಮಿನೇಟ್​ ಆದ ಸೂರಜ್​ ಸಿಂಗ್​, ಕಾವ್ಯಾ ಶೈವ ಅವರ ಆಟದ ಬಗ್ಗೆ ಮಾತನಾಡಿದ್ದಾರೆ. &nbsp;ತಮ್ಮ ಆಟವನ್ನು ಬದಲಿಸಿಕೊಂಡರೆ, ಅದು ಅವರ ಬಿಗ್​ಬಾಸ್​ ಪಯಣಕ್ಕೆ ಕಷ್ಟವಾಗಲಿದೆ ಎಂದು ಸೂರಜ್ ಎಚ್ಚರಿಸಿದ್ದಾರೆ. ಏನದು?</p><img><p>ಬಿಗ್​ಬಾಸ್​ ಸೀಸನ್​ 12 (Bigg Boss 12)ರಲ್ಲಿ ಸದ್ಯ ನಿನ್ನೆ ಸೂರಜ್​ ಸಿಂಗ್​ ಮತ್ತು ಮಾಳು ಅವರು ಎಲಿಮಿನೇಟ್​ ಆಗಿ ಹೊರಕ್ಕೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಅವರು ಕೆಲವೊಂದು ವಿಷಯಗಳ ಚರ್ಚೆ ಮಾಡುತ್ತಿದ್ದಾರೆ.</p><img><p>ಎಲ್ಲರಿಗೂ ತಿಳಿದಿರುವಂತೆ ಕಾವ್ಯಾ ಶೈವ (Bigg Boss Kavya Shaiva) ಅವರ ಕುಟುಂಬಸ್ಥರು ಬಂದಾಗ ಒಂದು ಎಡವಟ್ಟು ನಡೆದಿತ್ತು. ಅದೇನೆಂದರೆ, ಕಾವ್ಯಾಳ ಸಹೋದರ ಕಾವ್ಯಾ ಅವರಿಗೆ ನೀನು ಗಿಲ್ಲಿ ನಟನನ್ನು ನಾಮಿನೇಟ್​ ಮಾಡಬೇಡ. ಆತನಿಂದಲೇ ನೀನು ಉಳಿದುಕೊಂಡಿರೋದು. ಹೊರಗಡೆ ನಿಮ್ಮಿಬ್ಬರ ಬಗ್ಗೆ ಒಳ್ಳೆಯ ಅಭಿಪ್ರಾಯ ಇದೆ ಎಂದಿದ್ದರು.</p><img><p>ಇದು ಬಿಗ್​ಬಾಸ್​ ನಿಮಯದ ಉಲ್ಲಂಘನೆಯಾಗಿತ್ತು. ಏಕೆಂದರೆ, ಇಂಥ ವಿಷಯಗಳನ್ನು ಕುಟುಂಬಸ್ಥರು ಬಂದಾಗ ಮನೆಯಲ್ಲಿ ಮಾತನಾಡುವಂತೆ ಇರಲಿಲ್ಲ. ಈಗ ಇದರ ಬಗ್ಗೆನೇ ಸೂರಜ್​ ಸಿಂಗ್​ ಮಾಧ್ಯಮಗಳ ಎದುರು ಮಾತನಾಡಿದ್ದಾರೆ.</p><img><p>ಇಂಥ ವಿಷಯ ಬಂದಾಗ ಬಿಗ್​ಬಾಸ್​ ವಾರ್ನ್​ ಮಾಡುತ್ತದೆ. ಮೊದಲ ಬಾರಿ ವಾರ್ನ್​ ಮಾಡಿದಾಗಲೇ ಕಾವ್ಯಾ ಅವರು ಹೊರಕ್ಕೆ ಬಂದಿದ್ದರು. ಎರಡನೆಯ ವಾರ್ನಿಂಗ್​ ಬರುವ ಮೊದಲೇ ಅವರು ಹೊರಗಡೆ ಇದ್ದರು. ಮತ್ಯಾಕೆ ವಾರ್ನ್​ ಬಂತೋ ಗೊತ್ತಿಲ್ಲ ಎಂದಿದ್ದಾರೆ.</p><img><p>ಒಂದು ವೇಳೆ ಫ್ಯಾಮಿಲಿ ಹೇಳಿದಂತೆ ಕಾವ್ಯಾ ನಡೆದುಕೊಂಡರೆ ಅದು ಅವರಿಗೆ ಕಷ್ಟವಾಗುತ್ತದೆ. ಗಿಲ್ಲಿ ನಟನ ಬಗ್ಗೆ ಅವರ ಸಹೋದರ ಹೇಳಿದಂತೆ ಎಲಿಮಿನೇಟ್​ ಮಾಡದೇ ಗಿಲ್ಲಿ ಪರ ವಹಿಸಿಕೊಂಡು ಇದ್ದರೆ, ಅದು ಅವರ ಬಿಗ್​ಬಾಸ್​​ ಜರ್ನಿಯ ಅಂತ್ಯಕ್ಕೆ ಕಾರಣವಾಗಲಿದೆ ಎಂದಿದ್ದಾರೆ ಸೂರಜ್​ ಸಿಂಗ್​.</p><img><p>ಇದೇ ಕಾರಣಕ್ಕೆ ಕಾವ್ಯಾ ಅವರ ಫ್ಯಾಮಿಲಿ ಹೇಳಿದಂತೆ ಕೇಳಬಾರದು. ಅವರು ಆ ರೀತಿ ತಮ್ಮ ಆಟ ಬದಲಿಸಿಕೊಳ್ಳಬಾರದು. ಬದಲಿಸಿಕೊಂಡರೆ ಕಷ್ಟವಾಗುತ್ತದೆ ಎಂದಿದ್ದಾರೆ.</p>



Source link

Leave a Reply

Your email address will not be published. Required fields are marked *