17

Image Credit : Asianet News
ಹುಲಿ ಉಗುರು
ಬಿಗ್ಬಾಸ್ 10ರಲ್ಲಿ ಹವಾ ಸೃಷ್ಟಿಸಿದವರ ಪೈಕಿ ವರ್ತೂರು ಸಂತೋಷ್ ಒಬ್ಬರು. ನಾಲ್ಕನೆಯ ರನ್ನರ್ ಅಪ್ ಆಗಿ ಹೊರಬಂದವರು ಇವರು. ಆದರೆ ವರ್ತೂರು ಧರಿಸಿದ್ದ ಹುಲಿಯ ಉರುಗಿನ ಪೆಂಡೆಂಟ್ ಅಲ್ಲೋಲ ಕಲ್ಲೋಲ ಸೃಷ್ಟಿಸಿ, ಬಿಗ್ಬಾಸ್ 10ರ ಟಿಆರ್ಪಿ ಕೂಡ ಹೆಚ್ಚಿಸಿದ್ದವರಲ್ಲಿ ಇವರೂ ಒಬ್ಬರಾಗಿದ್ದರು! ಕಾನೂನು ಮೀರಿ ಹುಲಿಯ ಉಗುರು ಧರಿಸಿದ್ದು ಗಲಾಟೆಗೆ ಕಾರಣವಾಗಿ ಕೊನೆಗೆ ಏನೇನೋ ತಿರುವುಗಳನ್ನೂ ಪಡೆದುಕೊಂಡು ಜೈಲಿಗೂ ಹೋಗಿ ಬಂದರು ವರ್ತೂರು.
27
Image Credit : Asianet News
10 ಲಕ್ಷ ಘೋಷಣೆ
ಇದಾಗಲೇ ಬಿಗ್ಬಾಸ್ ಸೀಸನ್ 12ರಲ್ಲಿ ಎರಡನೆಯ ರನ್ನರ್ ಅಪ್ ಗೆ ಹತ್ತು ಲಕ್ಷ ರೂಪಾಯಿ ಕೊಡುವುದಾಗಿ ಘೋಷಣೆ ಮಾಡಿದ್ದರು. ಬಳಿಕ ಸುದೀಪ್ ಅವರು ಇರುವವರೆಗೂ ಈ ಬಹುಮಾನ ಕೊಡುವುದಾಗಿ ಹೇಳಿದ್ದಾರೆ.
37
Image Credit : Asianet News
ಸ್ಪರ್ಧಿ ಬಗ್ಗೆ ಕಿಡಿ
ಇದೀಗ ವರ್ತೂರು ಸಂತೋಷ್ ಅವರು, ಬಿಗ್ಬಾಸ್ ಷೋ ಬಗ್ಗೆ ಮಾತನಾಡುತ್ತಲೇ ಸ್ಪರ್ಧಿಯ ವಿರುದ್ಧ ಕಿಡಿ ಕಾರಿದ್ದಾರೆ. ಬಿಗ್ಬಾಸ್ನಿಂದ ಹೊರಕ್ಕೆ ಬಂದ ಮೇಲೆ ಕೆಲವರು ಆ ಷೋ ಬಗ್ಗೆ ಕೆಟ್ಟದ್ದಾಗಿ ಮಾತನಾಡುತ್ತಿದ್ದಾರೆ. ಬಿಗ್ಬಾಸ್ನಲ್ಲಿ ಊಟ ಸರಿಯಾಗಿ ಕೊಡ್ತಾ ಇರಲಿಲ್ಲ, ಅಲ್ಲಿ ಸ್ವಲ್ಪ ದಿನ ಇದ್ದರೆ ಸತ್ತೇ ಹೋಗುತ್ತಿದ್ದೆ ಇತ್ಯಾದಿ ಇತ್ಯಾದಿಯಾಗಿ ಮೀಡಿಯಾಗಳಲ್ಲಿ ಹೇಳುತ್ತಿದ್ದಾರೆ.
47
Image Credit : Asianet News
ಅನ್ನ ತಿಂದು…
ಇವರ ವಿರುದ್ಧ ಕಿಡಿ ಕಾರಿರುವ ವರ್ತೂರು ಸಂತೋಷ್ (Bigg Boss Varthur Santosh) ಬಿಗ್ಬಾಸ್ ಮನೆಯ ಅನ್ನ ತಿಂದು ಕನ್ನ ಹಾಕುವ ಜಾತಿ ಇವರದ್ದು ಎಂದು ಬೈದಿದ್ದಾರೆ. ಬಿಗ್ಬಾಸ್ ಮನೆಯಲ್ಲಿ ಯಾವತ್ತೂ ಊಟಕ್ಕೆ ಕೊರತೆ ಮಾಡುತ್ತಿರಲಿಲ್ಲ. ಒಂದು ವೇಳೆ ಏನೋ ಕಾರಣಕ್ಕೆ ಊಟ ಕಡಿಮೆ ಆದರೂ ಟಾಸ್ಕ್ ಹೆಸರಿನಲ್ಲಿ ಊಟ ಕೊಡುತ್ತಾರೆ. ಸುಮ್ಮನೇ ಹೊರಕ್ಕೆ ಬಂದು ಸುಳ್ಳು ಸುದ್ದಿ ಹರಡುತ್ತಾರೆ ಎಂದು ಉಗಿದಿದ್ದಾರೆ.
57
Image Credit : Asianet News
ಸ್ಕ್ರಿಪ್ಟೆಡ್ ವಿಷ್ಯ…
ಅದೇ ರೀತಿ ಅಲ್ಲಿ ಸ್ಕ್ರಿಪ್ಟೆಡ್ ಅದೂ ಇದೂ ಏನೂ ಇಲ್ಲ. ಎಲ್ಲವೂ ತಂತಾನೇ ಆಗುತ್ತದೆ. ಸುಖಾ ಸುಮ್ಮನೆ ಇಲ್ಲಸಲ್ಲದನ್ನು ಹರಡುತ್ತಿರುವುದಾಗಿ ಸಂತೋಷ್ ಅವರು ನ್ಯೂಸ್ಬೀಟ್ಕನ್ನಡ ಇನ್ಸ್ಟಾಗ್ರಾಮ್ಗೆ ನೀಡಿರುವ ಸಂದರ್ಶನದಲ್ಲಿ ವಿವರಿಸಿದ್ದಾರೆ.
67
Image Credit : Instagram
ವೈಯಕ್ತಿಯ ಚರ್ಚೆ
ಇನ್ನು ವರ್ತೂರು ಸಂತೋಷ್ ಅವರ ವಿಷ್ಯ ಹೇಳುವುದಾದರೆ, ಇವರು ಫೇಮಸ್ ಆಗ್ತಿದ್ದಂತೆಯೇ ಅವರ ವೈಯಕ್ತಿಯ ಜೀವನದ ಬಗ್ಗೆಯೂ ಸಾಕಷ್ಟು ಚರ್ಚೆ, ಸುದ್ದಿ, ಗುಲ್ಲುಗಳು ಹರಡಿದ್ದವು. ಯುವತಿಯೊಬ್ಬರ ಜೊತೆ ವರ್ತೂರು ಸಂತೋಷ್ ಇರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿ ವರ್ತೂರು ಅವರಿಗೆ ಮದುವೆಯಾಗಿದ್ದರೂ ಆ ವಿಷಯವನ್ನು ಮುಚ್ಚಿಟ್ಟಿದ್ದಾರೆ ಎಂದೇ ಸದ್ದು ಮಾಡಿತು.
77
Image Credit : Instagram
ವಿವಾದ
ಅಲ್ಲಿಯವರೆಗೆ, ಹಳ್ಳಿಕಾರ್ ಹಸು ತಳಿಯನ್ನು ಪ್ರಚಾರ ಮಾಡಿ ಹೀರೋ ಆಗಿದ್ದ ವರ್ತೂರು ಅವರ ಸುತ್ತ ಮದುವೆಯ ವಿವಾದ ಹುಟ್ಟಿಕೊಂಡಿತ್ತು. ಹೀಗೆ ವಿವಾದಗಳಿಂದಲೇ ವರ್ತೂರು ಸಂತೋಷ್ ಅವರು ಸುತ್ತುವರೆದಿದ್ದರೂ, ಅವರ ಖ್ಯಾತಿಗೆ ಏನೂ ಕುಂದು ಬರಲಿಲ್ಲ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.