Headlines

ಸ್ಮೃತಿ ಮಂಧನಾನ ಮಾಜಿ ಲವರ್ ಪಲಾಶ್ ಮುಚ್ಚಲ್‌ಗೆ ಬಿಗ್ ರಿಲೀಫ್! ಸ್ಮೃತಿ ಫ್ರೆಂಡ್‌ಗೆ ಹೈಕೋರ್ಟ್ ಖಡಕ್ ವಾರ್ನಿಂಗ್!

ಸ್ಮೃತಿ ಮಂಧನಾನ ಮಾಜಿ ಲವರ್ ಪಲಾಶ್ ಮುಚ್ಚಲ್‌ಗೆ ಬಿಗ್ ರಿಲೀಫ್! ಸ್ಮೃತಿ ಫ್ರೆಂಡ್‌ಗೆ ಹೈಕೋರ್ಟ್ ಖಡಕ್ ವಾರ್ನಿಂಗ್!



ಸ್ಮೃತಿ ಮಂಧನಾನ ಮಾಜಿ ಲವರ್ ಪಲಾಶ್ ಮುಚ್ಚಲ್‌ಗೆ ಬಿಗ್ ರಿಲೀಫ್! ಸ್ಮೃತಿ ಫ್ರೆಂಡ್‌ಗೆ ಹೈಕೋರ್ಟ್ ಖಡಕ್ ವಾರ್ನಿಂಗ್!
<p>ಪಲಾಶ್ ಮುಚ್ಚಲ್ ವಿರುದ್ಧ ಯಾವುದೇ ಮಾನಹಾನಿಕರ ಹೇಳಿಕೆ ನೀಡದಂತೆ ವಿದ್ಯಾನ್ ಮಾನೆಗೆ ಬಾಂಬೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಇದಕ್ಕೂ ಮುನ್ನ, ಪಲಾಶ್ ತಮ್ಮ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿದ ಸ್ಮೃತಿ ಫ್ರೆಂಡ್ ವಿದ್ಯಾನ್ ಮಾನೆ ವಿರುದ್ದ 11 ಕೋಟಿ ರೂಪಾಯಿ ಪರಿಹಾರ ಕೋರಿ ಮಾನನಷ್ಟ ಮೊಕದ್ದಮೆ ಹೂಡಿದ್ದರು.</p><p>&nbsp;</p><img><p>ಭಾರತೀಯ ಕ್ರಿಕೆಟರ್ ಸ್ಮೃತಿ ಮಂಧನಾ ಅವರ ಆಪ್ತ ಸ್ನೇಹಿತ ಎಂದು ಹೇಳಿಕೊಳ್ಳುವ ವಿದ್ಯಾನ್ ಮಾನೆ ವಿರುದ್ಧ ಪಲಾಶ್ ಮುಚ್ಚಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಇದೀಗ ಬಾಂಬೆ ಹೈಕೋರ್ಟ್‌ನಿಂದ ಪಲಾಶ್‌ಗೆ ಮಧ್ಯಂತರ ರಿಲೀಫ್ ಸಿಕ್ಕಿದೆ. ವಿದ್ಯಾನ್ ಮಾನೆ ಅವರು ಪಲಾಶ್ ವಿರುದ್ಧ ಯಾವುದೇ ರೀತಿಯ ಹೇಳಿಕೆಗಳನ್ನು ನೀಡದಂತೆ ಅಥವಾ ಪ್ರಕಟಿಸದಂತೆ ಕೋರ್ಟ್ ತಕ್ಷಣವೇ ತಡೆಯಾಜ್ಞೆ ನೀಡಿದೆ.</p><img><p>ವಿದ್ಯಾನ್ ಮಾನೆ ಅವರು ಮಾಧ್ಯಮ ಸಂದರ್ಶನಗಳಲ್ಲಿ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಪಲಾಶ್ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್ ಈ ಆದೇಶ ನೀಡಿದೆ. ಪಲಾಶ್ ಮುಚ್ಚಲ್ ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ವಿದ್ಯಾನ್ ಮಾನೆ ತನ್ನನ್ನು ಸ್ಮೃತಿ ಮಂಧನಾ ಅವರ ಆಪ್ತ ಎಂದು ಹೇಳಿಕೊಂಡಿದ್ದಾರೆ.</p><img><p>’ವಿದ್ಯಾನ್ ಮಾನೆಗೆ ಯಾವುದೇ ಹೇಳಿಕೆ ನೀಡದಂತೆ ಕೋರ್ಟ್ ನೀಡಿರುವ ತಡೆಯಾಜ್ಞೆ ಪಲಾಶ್‌ಗೆ ದೊಡ್ಡ ರಿಲೀಫ್ ಆಗಿದೆ. ಸುಳ್ಳು ಆರೋಪಗಳಿಗೆ ನ್ಯಾಯಾಲಯ ತಕ್ಷಣವೇ ತಡೆ ನೀಡಿದೆ. ಯಾರಾದರೂ ಆರೋಪ ಮಾಡಿದರೆ, ಅದಕ್ಕೆ ಸಾಕ್ಷ್ಯ ಇರಬೇಕು. ಸದ್ಯಕ್ಕೆ ಪಲಾಶ್ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ’ ಎಂದು ಸಂಗೀತ ನಿರ್ದೇಶಕ ಪಲಾಶ್ ಅವರ ಪರ ವಕೀಲ ಶ್ರೇಯಾಂಶ್ ಮಿಥಾರೆ ಹೇಳಿದ್ದಾರೆ.</p><img><p>ಈ ಆರೋಪಗಳೆಲ್ಲಾ ಆಧಾರರಹಿತವಾಗಿದ್ದು, ಕೇವಲ ಮಾಧ್ಯಮದ ಗಮನ ಸೆಳೆಯಲು ಮಾಡಲಾಗಿದೆ ಎಂದು ಶ್ರೇಯಾಂಶ್ ಹೇಳಿದ್ದಾರೆ. ‘ಪಲಾಶ್ ಸಂಪೂರ್ಣವಾಗಿ ನಿರಪರಾಧಿ. ಈ ಆರೋಪಗಳನ್ನು ಕೇವಲ ಪ್ರಚಾರಕ್ಕಾಗಿ ಹರಡಲಾಗುತ್ತಿದೆ’ ಎಂದು ಪಲಾಶ್ ಪರ ವಕೀಲರು ಸ್ಪಷ್ಟಪಡಿಸಿದ್ದಾರೆ.</p><img><p>ಪಲಾಶ್ ಮತ್ತು ಸ್ಮೃತಿ ಮಂಧಾನಾ ಅವರ ಮದುವೆ ದಿನಾಂಕ ನಿಗದಿಯಾಗಿತ್ತು ಎನ್ನಲಾಗಿತ್ತು. ಹಲವು ಕಾರ್ಯಕ್ರಮಗಳು ಕೂಡ ನಡೆದಿದ್ದವು. ಆದರೆ, ಇದ್ದಕ್ಕಿದ್ದಂತೆ ಈ ಮದುವೆಯನ್ನು ಮುಂದೂಡಲಾಯಿತು. ಪಲಾಶ್ ಮತ್ತೊಬ್ಬ ಮಹಿಳೆಯೊಂದಿಗೆ ನಡೆಸಿದ ಚಾಟಿಂಗ್ ಇದಕ್ಕೆ ಕಾರಣ ಎಂದು ಹೇಳಲಾಗಿತ್ತು. ಆದರೆ, ಈ ಬಗ್ಗೆ ಸ್ಮೃತಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.</p><img><p>ಇದಷ್ಟೇ ಅಲ್ಲದೇ ಪಲಾಶ್ ಮದುವೆಯ ಹಿಂದಿನ ದಿನ ಬೇರೆ ಯುವತಿಯ ಜತೆ ರೊಮ್ಯಾನ್ಸ್ ಮಾಡುತ್ತಿದ್ದಾಗ, ಭಾರತೀಯ ಆಟಗಾರ್ತಿಯರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು, ಅವರಿಂದ ಪೆಟ್ಟು ತಿಂದಿದ್ದರು ಎಂದು ವಿದ್ಯಾನ್ ಮಾನೆ ಗಂಭೀರ ಆರೋಪ ಮಾಡಿದ್ದರು. ಇದರ ಬೆನ್ನಲ್ಲೇ ಸ್ಮೃತಿ ಹಾಗೂ ಪಲಾಶ್ ಮದುವೆ ಮುರಿದು ಬಿದ್ದಿತ್ತು. ಇನ್ನು ಮಾನೆ ಎದುರು ಪಲಾಶ್ ಕೋರ್ಟ್ ಮೆಟ್ಟಿಲೇರಿದ್ದರು.</p>



Source link

Leave a Reply

Your email address will not be published. Required fields are marked *