Headlines

Brahmagantu: ಸುಕನ್ಯಾ ಕುತಂತ್ರಕ್ಕೆ ಬೆಂಕಿಯಲ್ಲಿ ದೀಪಾ-ಚಿರು! ಹರಿದ ಮಂಗಳಸೂತ್ರ- ಏನಿದು ಅಪಾಯ?

Brahmagantu: ಸುಕನ್ಯಾ ಕುತಂತ್ರಕ್ಕೆ ಬೆಂಕಿಯಲ್ಲಿ ದೀಪಾ-ಚಿರು! ಹರಿದ ಮಂಗಳಸೂತ್ರ- ಏನಿದು ಅಪಾಯ?



Brahmagantu: ಸುಕನ್ಯಾ ಕುತಂತ್ರಕ್ಕೆ ಬೆಂಕಿಯಲ್ಲಿ ದೀಪಾ-ಚಿರು! ಹರಿದ ಮಂಗಳಸೂತ್ರ- ಏನಿದು ಅಪಾಯ?
ಬ್ರಹ್ಮಗಂಟು ಸೀರಿಯಲ್‌ನಲ್ಲಿ ಸುಕನ್ಯಾಳ ಸಂಚಿನಿಂದ ದೀಪಾ ಮತ್ತು ಚಿರು ಗ್ಯಾಸ್ ಬ್ಲಾಸ್ಟ್‌ನಲ್ಲಿ ಸಿಲುಕಿದ್ದಾರೆ. ಬೆಂಕಿಯ ನಡುವೆ ದೀಪಾಳ ಮಾಂಗಲ್ಯ ಸರ ಹರಿದುಹೋಗಿದ್ದು, ಚಿರು ಜೀವಕ್ಕೆ ಅಪಾಯವಿದೆಯೇ ಎಂಬ ಆತಂಕ ಸೃಷ್ಟಿಯಾಗಿದೆ. ಈ ಘಟನೆ ಕಥೆಗೆ ಹೊಸ ತಿರುವು ನೀಡಿದೆ.<img><p>ಬ್ರಹ್ಮಗಂಟು (Brahmagantu) ಸೀರಿಯಲ್​ ಇದೀಗ ಮತ್ತೊಂದು ರೋಚಕ ಟ್ವಿಸ್ಟ್​ನೊಂದಿಗೆ ಸಾಗಿದೆ. ಒಂದೆಡೆ ದೀಪಾ ದಿಶಾ ಆಗಿ ಡಬಲ್​ ರೋಲ್​ನಲ್ಲಿ ಎಲ್ಲರಿಗೂ ಚಮಕ್​ ಕೊಡುತ್ತಿದ್ದರೆ, ಇದೀಗ ಬೇರೆಯದ್ದೇ ರೂಪ ಪಡೆದಿದೆ ಸೀರಿಯಲ್​.</p><img><p>ದೀಪಾ ಮತ್ತು ಚಿರಾಗ್​ ನನ್ನು ದೂರ ಮಾಡುವ ಉದ್ದೇಶದಿಂದ ಸುಕನ್ಯಾ ದೀಪಾ ಹೋಗಬೇಕಿರುವ ಕಟ್ಟಡದ ಗ್ಯಾಸ್​ ಲೀಕ್​ ಮಾಡಿಸಿದ್ದಾಳೆ. ದೀಪಾಳಿಂದ ದೂರ ಮಾಡಲು ಸಾಯಿಸಲೂ ಹೇಸದ ಬುದ್ಧಿ ಇದು.</p><img><p>ಈ ಬಗ್ಗೆ ಹೆಮ್ಮೆಯಿಂದ ಸೌಂದರ್ಯ ಬಳಿ ಹೇಳಿಕೊಂಡಿದ್ದಾಳೆ ಸುಕನ್ಯಾ. ಆದರೆ ದೀಪಾಳ ಜೊತೆ ಚಿರು ಕೂಡ ಹೋಗಿರುವುದು ಸೌಂದರ್ಯಗೆ ತಿಳಿದ ಕಾರಣದಿಂದ ಸುಕನ್ಯಾ ಮೇಲೆ ಕೋಪಗೊಂಡು ಏನು ಮಾಡುವುದು ಎಂದು ತಿಳಿಯದ ಸ್ಥಿತಿಯಲ್ಲಿದ್ದಾಳೆ.</p><img><p>ಇತ್ತ ದೀಪಾ-ಚಿರಾಗ್​ ಕಟ್ಟಡದ ಒಳಗೆ ಹೋಗುತ್ತಿದ್ದಂತೆಯೇ ಗ್ಯಾಸ್​ ವಾಸನೆ ಬಂದಿದೆ. ಏನಾಗಿದೆ ಎಂದು ನೋಡುವಷ್ಟರಲ್ಲಿಯೇ ಗ್ಯಾಸ್​ ಬ್ಲಾಸ್​ ಆಗುತ್ತಿದೆ. ಎಲ್ಲೆಡೆ ಬೆಂಕಿ ಬರುತ್ತಿದೆ.</p><img><p>ದೀಪಾ ಮತ್ತು ಚಿರು ಇಬ್ಬರೂ ಬಿದ್ದಿದ್ದಾರೆ. ಆ ಸಂದರ್ಭದಲ್ಲಿ ದೀಪಾಳ ಮಾಂಗಲ್ಯ ಅಲ್ಲಿರುವ ಗೂಟಕ್ಕೆ ತಗುಲಿ ಹರಿದು ಹೋಗಿದೆ. ಇದನ್ನು ನೋಡಿ ದೀಪಾ ಶಾಕ್​ ಆಗಿದ್ದಾಳೆ.</p><img><p>ಹಾಗಿದ್ದರೆ ಏನಿದರ ಸೂಚನೆ? ಚಿರಾಗ್​ ಜೀವಕ್ಕೆ ಅಪಾಯ ಇದ್ಯಾ? ಅವನನ್ನು ಕಾಪಾಡುವವರು ಯಾರು? ಸ್ಟೋರಿ ಮುಂದೇನಾಗುತ್ತದೆ ಎನ್ನುವ ಟ್ವಿಸ್ಟ್​ ಸದ್ಯಕ್ಕಿದೆ.</p><p>ಇದರ ಪ್ರೊಮೋಗಾಗಿ ಈ ಲಿಂಕ್​ ಮೇಲೆ ಕ್ಲಿಕ್ ​ಮಾಡಿ</p>



Source link

Leave a Reply

Your email address will not be published. Required fields are marked *