
ಬ್ರಹ್ಮಗಂಟು ಸೀರಿಯಲ್ನಲ್ಲಿ ಸುಕನ್ಯಾಳ ಸಂಚಿನಿಂದ ದೀಪಾ ಮತ್ತು ಚಿರು ಗ್ಯಾಸ್ ಬ್ಲಾಸ್ಟ್ನಲ್ಲಿ ಸಿಲುಕಿದ್ದಾರೆ. ಬೆಂಕಿಯ ನಡುವೆ ದೀಪಾಳ ಮಾಂಗಲ್ಯ ಸರ ಹರಿದುಹೋಗಿದ್ದು, ಚಿರು ಜೀವಕ್ಕೆ ಅಪಾಯವಿದೆಯೇ ಎಂಬ ಆತಂಕ ಸೃಷ್ಟಿಯಾಗಿದೆ. ಈ ಘಟನೆ ಕಥೆಗೆ ಹೊಸ ತಿರುವು ನೀಡಿದೆ.<img><p>ಬ್ರಹ್ಮಗಂಟು (Brahmagantu) ಸೀರಿಯಲ್ ಇದೀಗ ಮತ್ತೊಂದು ರೋಚಕ ಟ್ವಿಸ್ಟ್ನೊಂದಿಗೆ ಸಾಗಿದೆ. ಒಂದೆಡೆ ದೀಪಾ ದಿಶಾ ಆಗಿ ಡಬಲ್ ರೋಲ್ನಲ್ಲಿ ಎಲ್ಲರಿಗೂ ಚಮಕ್ ಕೊಡುತ್ತಿದ್ದರೆ, ಇದೀಗ ಬೇರೆಯದ್ದೇ ರೂಪ ಪಡೆದಿದೆ ಸೀರಿಯಲ್.</p><img><p>ದೀಪಾ ಮತ್ತು ಚಿರಾಗ್ ನನ್ನು ದೂರ ಮಾಡುವ ಉದ್ದೇಶದಿಂದ ಸುಕನ್ಯಾ ದೀಪಾ ಹೋಗಬೇಕಿರುವ ಕಟ್ಟಡದ ಗ್ಯಾಸ್ ಲೀಕ್ ಮಾಡಿಸಿದ್ದಾಳೆ. ದೀಪಾಳಿಂದ ದೂರ ಮಾಡಲು ಸಾಯಿಸಲೂ ಹೇಸದ ಬುದ್ಧಿ ಇದು.</p><img><p>ಈ ಬಗ್ಗೆ ಹೆಮ್ಮೆಯಿಂದ ಸೌಂದರ್ಯ ಬಳಿ ಹೇಳಿಕೊಂಡಿದ್ದಾಳೆ ಸುಕನ್ಯಾ. ಆದರೆ ದೀಪಾಳ ಜೊತೆ ಚಿರು ಕೂಡ ಹೋಗಿರುವುದು ಸೌಂದರ್ಯಗೆ ತಿಳಿದ ಕಾರಣದಿಂದ ಸುಕನ್ಯಾ ಮೇಲೆ ಕೋಪಗೊಂಡು ಏನು ಮಾಡುವುದು ಎಂದು ತಿಳಿಯದ ಸ್ಥಿತಿಯಲ್ಲಿದ್ದಾಳೆ.</p><img><p>ಇತ್ತ ದೀಪಾ-ಚಿರಾಗ್ ಕಟ್ಟಡದ ಒಳಗೆ ಹೋಗುತ್ತಿದ್ದಂತೆಯೇ ಗ್ಯಾಸ್ ವಾಸನೆ ಬಂದಿದೆ. ಏನಾಗಿದೆ ಎಂದು ನೋಡುವಷ್ಟರಲ್ಲಿಯೇ ಗ್ಯಾಸ್ ಬ್ಲಾಸ್ ಆಗುತ್ತಿದೆ. ಎಲ್ಲೆಡೆ ಬೆಂಕಿ ಬರುತ್ತಿದೆ.</p><img><p>ದೀಪಾ ಮತ್ತು ಚಿರು ಇಬ್ಬರೂ ಬಿದ್ದಿದ್ದಾರೆ. ಆ ಸಂದರ್ಭದಲ್ಲಿ ದೀಪಾಳ ಮಾಂಗಲ್ಯ ಅಲ್ಲಿರುವ ಗೂಟಕ್ಕೆ ತಗುಲಿ ಹರಿದು ಹೋಗಿದೆ. ಇದನ್ನು ನೋಡಿ ದೀಪಾ ಶಾಕ್ ಆಗಿದ್ದಾಳೆ.</p><img><p>ಹಾಗಿದ್ದರೆ ಏನಿದರ ಸೂಚನೆ? ಚಿರಾಗ್ ಜೀವಕ್ಕೆ ಅಪಾಯ ಇದ್ಯಾ? ಅವನನ್ನು ಕಾಪಾಡುವವರು ಯಾರು? ಸ್ಟೋರಿ ಮುಂದೇನಾಗುತ್ತದೆ ಎನ್ನುವ ಟ್ವಿಸ್ಟ್ ಸದ್ಯಕ್ಕಿದೆ.</p><p>ಇದರ ಪ್ರೊಮೋಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ</p>
Source link
Brahmagantu: ಸುಕನ್ಯಾ ಕುತಂತ್ರಕ್ಕೆ ಬೆಂಕಿಯಲ್ಲಿ ದೀಪಾ-ಚಿರು! ಹರಿದ ಮಂಗಳಸೂತ್ರ- ಏನಿದು ಅಪಾಯ?