Brahmagantu Serial: ಮರಳಿ ಬಂದಳು ದಿಶಾ- ಮಕ್ಕಳಾಗದಂತೆ ಅವಳಿಗೆ ಏನ್​ ಮಾಡ್ತಾಳೆ ಸೌಂದರ್ಯ?

Brahmagantu Serial: ಮರಳಿ ಬಂದಳು ದಿಶಾ- ಮಕ್ಕಳಾಗದಂತೆ ಅವಳಿಗೆ ಏನ್​ ಮಾಡ್ತಾಳೆ ಸೌಂದರ್ಯ?



Brahmagantu Serial: ಮರಳಿ ಬಂದಳು ದಿಶಾ- ಮಕ್ಕಳಾಗದಂತೆ ಅವಳಿಗೆ ಏನ್​ ಮಾಡ್ತಾಳೆ ಸೌಂದರ್ಯ?
<p>ಬ್ರಹ್ಮಗಂಟು ಸೀರಿಯಲ್​ನಲ್ಲಿ ಸೌಂದರ್ಯಳ ಕುತಂತ್ರದಿಂದ ದೀಪಾ ಮತ್ತು ಚಿರು ದೂರವಾಗಿದ್ದಾರೆ. ಸೌಂದರ್ಯಳಿಗೆ ಬುದ್ಧಿ ಕಲಿಸಲು ದೀಪಾ ಈಗ ದಿಶಾಳಾಗಿ ಮರಳಿದ್ದು, ದಿಶಾ ಜೊತೆ ಚಿರು ಮದುವೆ ಮಾಡಿಸಲು ಸೌಂದರ್ಯ ಮುಂದಾಗಿದ್ದಾಳೆ. ಆದರೆ, ದಿಶಾಗೆ ಮಕ್ಕಳಾಗದಂತೆ ತಡೆಯಲು ಯೋಜನೆ ಏನು?</p><img><p>ಬ್ರಹ್ಮಗಂಟು ಸೀರಿಯಲ್​ (Brahmagantu Serial)ನಲ್ಲಿ ದೀಪಾ ಮತ್ತು ಚಿರು ಒಂದಾಗುವ ಹೊತ್ತಿನಲ್ಲಿಯೇ, ಸೌಂದರ್ಯ ಕುತಂತ್ರದಿಂದ ಇಬ್ಬರೂ ಮತ್ತೆ ದೂರ ದೂರ ಆಗಿದ್ದಾರೆ. ಬಹುತೇಕ ಎಲ್ಲಾ ಸೀರಿಯಲ್​ಗಳ ನಾಯಕ ಪೆದ್ದು ಇರುವಂತೆ ಇಲ್ಲಿ ಕೂಡ ನಾಯಕ ಚಿರು, ವಿಲನ್​ ಆಗಿರೋ ಅತ್ತಿಗೆ ಸೌಂದರ್ಯಳನ್ನು ಬಲವಾಗಿ ನಂಬಿದ್ದು, ದೀಪಾಳಿಂದಲೇ ದೂರ ಹೋಗುವ ನಿರ್ಧಾರ ಮಾಡಿದ್ದಾನೆ.</p><img><p>ಅದೇ ಇನ್ನೊಂದೆಡೆ, ಸೌಂದರ್ಯನೇ ಮೇಲು- ಗುಣ ಎನ್ನುವುದು ಏನೂ ಅಲ್ಲ ಎನ್ನುವ ಸೌಂದರ್ಯಳಿಗೆ ಸೌಂದರ್ಯದಿಂದಲೇ ಬುದ್ಧಿ ಕಲಿಸಬೇಕು ಎಂದು ದೀಪಾ ಮತ್ತೆ ದಿಶಾ ಆಗಿ ಬಂದು ಸೌಂದರ್ಯಳ ಎದುರು ನಿಂತಿದ್ದಾಳೆ.</p><img><p>ಎಷ್ಟೋ ದಿವಸ ಕಾಣೆಯಾಗಿದ್ದ ದಿಶಾಳನ್ನು ನೋಡಿ ಸೌಂದರ್ಯಳಿಗೆ ಹೋದ ಜೀವ ಬಂದಂತಾಗುತ್ತದೆ. ದೀಪಾ ಮತ್ತು ಚಿರುಗೆ ಡಿವೋರ್ಸ್ ಕೊಡಿಸಿ ನಿನ್ನ ಜೊತೆ ಮದುವೆ ಮಾಡಿಸುತ್ತೇನೆ ಎಂದು ದಿಶಾಗೆ ವಾಗ್ದಾನ ಮಾಡಿದ್ದಾಳೆ ಸೌಂದರ್ಯ.</p><img><p>ಇದಕ್ಕೆ ಚಿರು ಒಪ್ಪಲ್ಲ ಎನ್ನುವುದು ಸತ್ಯವಾದರೂ, ಅತ್ತಿಗೆ ಹೇಳಿದ್ದನ್ನು ಕಣ್ಮುಚ್ಚಿಕೊಂಡು ಕೇಳುವ ಚಿರು, ಅತ್ತಿಗೆಯ ಎಮೋಷನಲ್​ ಬ್ಲ್ಯಾಕ್​ಮೇಲ್​ಗೆ ಬಗ್ಗಿದರೂ ಅಚ್ಚರಿ ಏನಿಲ್ಲ.</p><img><p>ಆದರೆ ಇದರ ನಡುವೆಯೇ ವೀಕ್ಷಕರಿಗೆ ಇನ್ನೊಂದು ಪ್ರಶ್ನೆ ಕಾಡಿದೆ. ಅದೇನೆಂದರೆ, ಚಿರುಗೆ ಯಾವುದೇ ಕಾರಣಕ್ಕೂ ಮಕ್ಕಳಾಗಬಾರದು ಎಂದು ದೀಪಾಳ ಅಕ್ಕ ರೂಪಾಗೆ ಮಕ್ಕಳಾಗಲ್ಲ ಎನ್ನುವ ಕಾರಣಕ್ಕೆ ಮದುವೆಗೆ ಮುಂದಾದವಳು ಸೌಂದರ್ಯ. ಈಗ ಅದಕ್ಕಾಗಿಯೇ ಚಿರು ಮತ್ತು ದೀಪಾ ಕೂಡಬಾರದು ಎಂದು ಸರ್ಕಸ್​ ಮಾಡುತ್ತಿದ್ದಾಳೆ.</p><img><p>ಹಾಗಾದರೆ ದಿಶಾ ಜೊತೆ ಚಿರುನ ಮದುವೆ ಮಾಡಿಸಹೊರಟಿದ್ದಾಳೆ ಸೌಂದರ್ಯ. ಹೀಗೊಂದು ವೇಳೆ ಮದುವೆ ಮಾಡಿಸಿದ್ರೆ ದಿಶಾಗೆ ಮಕ್ಕಳಾಗದಂತೆ ಏನು ಮಾಡುತ್ತಾಳೆ ಎನ್ನುವ ದೊಡ್ಡ ಪ್ರಶ್ನೆ ನೆಟ್ಟಿಗರನ್ನು ಕಾಡ್ತಿದೆ. ಇದಕ್ಕೆ ನಿರ್ದೇಶಕರೇ ಉತ್ತರ ಹೇಳಿ ಎನ್ನುತ್ತಿದ್ದಾರೆ!</p>



Source link

Leave a Reply

Your email address will not be published. Required fields are marked *