Headlines

ಭಾರತದ ಬಗ್ಗೆ ಇಲಾನ್ ಮಸ್ಕ್ ಟ್ವೀಟ್; ರಾಹುಲ್ ಮತ್ತು ವಿಪಕ್ಷಗಳನ್ನು ಝಾಡಿಸಿದ ಕೇಂದ್ರ ಸಚಿವರು

ಭಾರತದ ಬಗ್ಗೆ ಇಲಾನ್ ಮಸ್ಕ್ ಟ್ವೀಟ್; ರಾಹುಲ್ ಮತ್ತು ವಿಪಕ್ಷಗಳನ್ನು ಝಾಡಿಸಿದ ಕೇಂದ್ರ ಸಚಿವರು


ನವದೆಹಲಿ, ಫೆಬ್ರುವರಿ 2: ದೇಶದ ಆರ್ಥಿಕ ಪರಿಸ್ಥಿತಿ ಹಾಗೂ ಸರ್ಕಾರದ ಆರ್ಥಿಕ ನೀತಿಗಳ ಬಗ್ಗೆ ಕಳವಳ ಮತ್ತು ಟೀಕೆ ಮಾಡುತ್ತಲೇ ಬಂದಿರುವ ರಾಹುಲ್ ಗಾಂಧಿ ಹಾಗೂ ವಿಪಕ್ಷಗಳ ವಿರುದ್ಧ ಸರ್ಕಾರ ಹರಿಹಾಯಲು ಹೊಸ ಅಸ್ತ್ರ ಸಿಕ್ಕಿದೆ. ವಿಶ್ವದ ನಂಬರ್ ಒನ್ ಶ್ರೀಮಂತ ಇಲಾನ್ ಮಾಸ್ಕ್ (ಎಲಾನ್ ಮಸ್ಕ್) ಅವರು ಭಾರತದ ಆರ್ಥಿಕ ಉನ್ನತಿಯನ್ನು ಪುಷ್ಟೀಕರಿಸಿ ಟ್ವೀಟ್ ಮಾಡಿದ್ದಾರೆ ಈಗ ಸರ್ಕಾರಕ್ಕೆ ಹೊಸ ಶಸ್ತ್ರಾಸ್ತ್ರವಾಗಿದೆ.

‘ಭಾರತೀಯರಲ್ಲದವರು ನೀಡುವ ಹೇಳಿಕೆ ಬಗ್ಗೆ ನಾನು ಹೇಳಿಕೆ ನೀಡುವುದಿಲ್ಲ. ರಾಹುಲ್ ಗಾಂಧಿಗೆ ತಿಳಿಹೇಳಲು ಇಲಾನ್ ಮಾಸ್ಕ್ ಅವರ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ. ಸರ್ಕಾರವನ್ನು ಟೀಕಿಸುವುದು ಪ್ರಜಾತಾಂತ್ರಿಕ ಹಕ್ಕು ಹೌದಾದರೂ ಭಾರತವನ್ನು ಹಿಯಾಳಿಸುವುದು ತರವಲ್ಲ. ಭಾರತದ ಸಾಧನೆಯನ್ನು ಯಾವತ್ತೂ ಹಂಗಿಸಬೇಡಿ’ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕೀರೆನ್ ರೀಜಿಜು ಟ್ವೀಟ್ ಮಾಡಿದ್ದಾರೆ.

ಕಿರಣ್ ರಿಜಿಜು ಅವರ ಟ್ವೀಟ್

ನಿನ್ನೆ ಬಜೆಟ್ ಮಂಡಿಸಿದ ಬಳಿಕ ನಿರ್ಮಲಾ ಸೀತಾರಾಮನ್ ಅವರು ವಿದ್ಯಾರ್ಥಿಗಳ ಗುಂಪಿನೊಂದಿಗೆ ಸಂವಾದ ನಡೆಸುತ್ತಿದ್ದಾಗ ಇಲಾನ್ ಮಾಸ್ಕ್ ಅವರ ಟ್ವೀಟ್ ಅನ್ನು ಪ್ರಸ್ತಾಪಿಸಿದರು. ಆರ್ಥಿಕ ಶಕ್ತಿಯು ಇಲಾನ್ ಮಾಸ್ಕ್ ಅವರ ಗಮನ ಸೆಳೆದ ಭಾರತದ ಸಂಗತಿಯನ್ನು ಅವರು ಎತ್ತಿತೋರಿಸಿದರು.

ಇದನ್ನೂ ಓದಿ: ಬಜೆಟ್ ಬಗ್ಗೆ ನನಗೆ ಅರ್ಥವಾಗ್ತಿಲ್ಲ, ಆದ್ರೂ ಕೇಳೋಕೆ ಚೆನ್ನಾಗಿದೆ: ಸೋಶಿಯಲ್ ಮೀಡಿಯಾದಲ್ಲಿ ಮೀಮ್ಸ್ ಹವಾ

ಇಲಾನ್ ಮಾಸ್ಕ್ ಹೇಳಿದ್ದೇನು?

206ರಲ್ಲಿ ಜಾಗತಿಕ ಜಿಡಿಪಿಯಲ್ಲಿ ಅತಿಹೆಚ್ಚು ಕೊಡುಗೆ ನೀಡಲಾಗಿರುವ ದೇಶಗಳ ಪಟ್ಟಿಯು ವರ್ಲ್ಡ್ ಆಫ್ ಸ್ಟಾಟಿಸ್ಟಿಕ್ಸ್ ಅಕೌಂಟ್ ನಿಮ್ ಟ್ವೀಟ್ ಮಾಡಿದೆ. ಚೀನಾ ಶೇ. 26.6 ಕೊಡುಗೆಯೊಂದಿಗೆ ಅಗ್ರಸ್ಥಾನದಲ್ಲಿದೆ. ಭಾರತ ಶೇ. 17 ಕೊಡುಗೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಅಮೆರಿಕ ಶೇ. 9.9ರಷ್ಟು ಮಾತ್ರ ಕೊಡುಗೆ ನೀಡಲಿದೆ, ಮೂರನೇ ಸ್ಥಾನದಲ್ಲಿದೆ. ಐಎಂಎಫ್ನ ಡಾಟಾ ಆಧರಿಸಿ ಈ ಪಟ್ಟಿಯನ್ನು ಮಾಡಲಾಗಿದೆ.

ವರ್ಲ್ಡ್ ಆಫ್ ಸ್ಟಾಟಿಸ್ಟಿಕ್ಸ್ ನ ಈ ಟ್ವೀಟ್ ಅನ್ನು ಇಲಾನ್ ಮಾಸ್ಕ್ ಹಂಚಿಕೊಂಡಿದ್ದಾರೆ. ಅಷ್ಟು ಮಟ್ಟಿಗೆ, ‘ಅಧಿಕಾರದ ಸಮತೋಲನ ಬದಲಾಗುತ್ತಿದೆ’ ಎಂದು ನಿಗೂಢವೆನಿಸುವ ಹೇಳಿಕೆಯಿದೆ. ಅಮೆರಿಕದ ಶಕ್ತಿಯನ್ನು ಚೀನಾ ಮತ್ತು ಭಾರತ ಹಿಂದಿಕ್ಕಿರುವುದನ್ನು ಇಲಾನ್ ಮಾಸ್ಕ್ ಗುರುತಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.

‘ಇಂಥದ್ದೊಂದು ಶಕ್ತಿಯನ್ನು ಭಾರತ ಈಗ ಸಂಪಾದಿಸಿದೆ. ಚೀನಾ ನಂತರ ನಾವಿದ್ದೇವೆ. ಸದ್ಯ ಅಂತರ ಹೆಚ್ಚಿರಬಹುದು. ಆದರೆ ನಾವದನ್ನು ತುಂಬುತ್ತೇವೆ’ ಎಂದು ನಿರ್ಮಲಾ ಸೀತಾರಾಮನ್ ಅವರು ವಿಶ್ವಾಸದಿಂದ ಹೇಳಿದ್ದಾರೆ.

ಇಲಾನ್ ಮಾಸ್ಕ್ ಅವರ ಟ್ವೀಟ್

ಇದನ್ನೂ ಓದಿ: ಸೆಮಿಕಂಡಕ್ಟರ್ ಮಿಷನ್‌ಗೆ 40,000 ಕೋಟಿ ರೂ.; ಬಜೆಟ್ ಮಂಡನೆ ಬಳಿಕ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ

ಬಜೆಟ್ ಬಗ್ಗೆ ರಾಹುಲ್ ಟೀಕೆ

ಭಾರತದ್ದು ಸತ್ತ ಆರ್ಥಿಕತೆ ಎಂದು ಡೊನಾಲ್ಡ್ ಟ್ರಂಪ್ ಹೇಳಿಕೆಯನ್ನು ಅನುಮೋದಿಸಿರುವ ರಾಹುಲ್ ಗಾಂಧಿ, ನಿನ್ನೆಯ ಬಜೆಟ್ ಅನ್ನು ಲೇವಡಿ ಮಾಡಿದ್ದಾರೆ. ‘ಹಿಂದಿನ ತಪ್ಪುಗಳನ್ನು ಸರಿಪಡಿಸಿಕೊಳ್ಳುವುದು ಈ ಬಜೆಟ್ ಭಾರತದ ನಿಜವಾದ ಬಿಕ್ಕಟ್ಟುಗಳಿಗೆ ಕುರುಡಾಗಿದೆ’ ಎಂದು ಟೀಕಿಸಿದ್ದಾರೆ. ಇದಕ್ಕೆ ಖಾರವಾಗಿ ಹೇಳುತ್ತಿಲ್ಲ ನಿರ್ಮಲಾ ಸೀತಾರಾಮನ್, ‘ಯಾವ ತಪ್ಪು ಸರಿಪಡಿಸಿಕೊಳ್ಳುವ ಬಗ್ಗೆ ಅವರು ಮಾತನಾಡುತ್ತಿದ್ದಾರೋ. ಆದರೆ, ಆರ್ಥಿಕತೆ ಮತ್ತು ಅದರ ಮೂಲಾಂಶಗಳು ಪ್ರಬಲವಾಗಿವೆ’ ಎಂದು.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *