ಆಚಾರ್ಯ ಚಾಣಕ್ಯರು (ಆಚಾರ್ಯ ಚಾಣಕ್ಯ) ತಮ್ಮ ನೀತಿಶಾಸ್ತ್ರದಲ್ಲಿ ರಾಜಕೀಯ ವಿಷಯಗಳ ಬಗ್ಗೆ ಜೀವನಕ್ಕೆ ಸಂಬಂಧಿಸಿದ ಸಾಕಷ್ಟು ವಿಚಾರಗಳ ಬಗ್ಗೆಯೂ ತಿಳಿಸಿಕೊಟ್ಟಿದ್ದಾರೆ. ಹೌದು ಯಶಸ್ಸು, ಶ್ರೀಮಂತಿಕೆ ಗಳಿಸುವುದು ಹೇಗೆ, ದಾಂಪತ್ಯ ಜೀವನ ಸುಖವಾಗಿರಲು ಪತಿಪತ್ನಿಯರು ಹೇಗಿರಬೇಕು ಎಂದು ಕೆಲವರ ಬಗ್ಗೆ ಹೇಳಿದ್ದಾರೆ ಅದೇ ಅವರು ಎಷ್ಟು ಜಾಗರೂಕರಾಗಿರಬೇಕು, ಅವರ ಹತ್ತಿರ ಹೋದರೆ ಅಥವಾ ಅವರಿಗೆ ತಮಾಷೆ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಕೆ ನೀಡಿದ್ದಾರೆ. ಹಾಗಿದ್ರೆ ಯಾವ ವಿಷಯಗಳ ಬಗ್ಗೆ ಆದಷ್ಟು ಜಾಗರೂಕರಾಗಿದ್ದರೆ ನೋಡೋಣ ಬನ್ನಿ.
ಈ ವಿಷಯಗಳ ಬಗ್ಗೆ ಜಾಗರೂಕರಾಗಿರಿ:
ಹಾವುಗಳು: ಹಾವುಗಳ ಬಗ್ಗೆ ಯಾವಾಗಲೂ ಜಾಗರೂಕರಾಗಿರಬೇಕು ಎಂದು ಆಚಾರ್ಯ ಚಾಣಕ್ಯರು ಎಚ್ಚರಿಕೆ ನೀಡಿದ್ದಾರೆ. ಈ ಬಾರಿಯ ಹಾಗೆ ಸೆಹಪರವಾಗಿ ಕಂಡರೂ ಮತ್ತು ಅಪಾಯವನ್ನು ತಂದೊಡ್ಡುತ್ತವೆ. ಹೌದು ಹಾವುಗಳು ಯಾವಾಗ ಕಚ್ಚುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಯಾವುಗಳ ಜೊತೆ ತಮಾಷೆ ಬೇಡ, ಅವುಗಳಿಂದ ದೂರವಿರುವುದೇ ಸೂಕ್ತ.
ಬೆಂಕಿ: ಬೆಂಕಿಯ ಜೊತೆ ಸರಸ ಬೇಡ್ವೇ ಬೇಡ ಎನ್ನುತ್ತಾರೆ ಚಾಣಕ್ಯ. ಬೆಂಕಿಯೊಂದಿಗೆ ತಮಾಷೆ ಮಾಡಲು ಹೋದರೆ ಅಥವಾ ಅದರೊಂದಿಗೆ ಹುಚ್ಚಾಟ ಆಡಿದರೆ ಬೆಂಕಿ ಕ್ಷಣ ಮಾತ್ರ ನಮ್ಮನ್ನು ಸುಟ್ಟು ಬೂದಿ ಮಾಡಬಹುದು. ಯಾವುದೇ ಬೆಂಕಿಯಿಂದ ಯಾವಾಗಲೂ ದೂರವಿರಿ.
ಇದನ್ನೂ ಓದಿ: ದಾಂಪತ್ಯ ಜೀವನದಲ್ಲಿ ಬಿರುಕು ಮೂಡಲು ಈ ಅಂಶಗಳೇ ಮುಖ್ಯ ಕಾರಣ
ನೀರು: ಕೆಲವು ನೀರನ್ನು ಕಂಡರೆ ಹುಚ್ಚಾಟಗಳನ್ನು ಆಡುತ್ತಾರೆ. ಹೀಗೆ ನೀರಿನಲ್ಲಿ ಆಟವಾಡಲು ಹೋಗಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಅದಕ್ಕಾಗಿ ಆಚಾರ್ಯ ಚಾಣಕ್ಯರು ಎಷ್ಟು ದೂರವಿರಿ, ಸಮುದ್ರ, ನದಿ ನೀರಿನ ಬಳಿ ಜಾಗರೂಕರಾಗಿರಿ ಎಂದು ಎಚ್ಚರಿಕೆ ನೀಡಿದ್ದರು. ಹೀಗೆ ಹಾವು, ನೀರು, ಬೆಂಕಿ ಈ ಅಂಶಗಳು ಇರುವ ಸ್ಥಳದಲ್ಲಿ ಕೊಂಚ ಎಚ್ಚರಿಕೆಯನ್ನು ತೋರಿದರೂ ಅದು ನಮ್ಮ ಪ್ರಾಣಕ್ಕೆ ಕುತ್ತಾಗಬಹುದು. ಈ ಮೂರು ವಿಷಯಗಳ ಬಗ್ಗೆ ತಮಾಷೆ ಬೇಡ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ