23
Image Credit : Chatgpt
ಅತಿಯಾದ ಒಳ್ಳೆಯತನ
1. ಅತಿಯಾದ ಒಳ್ಳೆಯತನವನ್ನು ಬಿಟ್ಟುಬಿಡಿ: ಚಾಣಕ್ಯನ ಪ್ರಕಾರ, ಅತಿಯಾದ ಒಳ್ಳೆಯತನ ಎಂದಿಗೂ ಒಳ್ಳೆಯದಲ್ಲ. ‘ಕಾಡಿಗೆ ಹೋದರೆ ನೇರವಾಗಿರುವ ಮರಗಳನ್ನೇ ಮೊದಲು ಕಡಿಯುತ್ತಾರೆ. ಡೊಂಕಾಗಿರುವ ಮರಗಳನ್ನು ಬಿಟ್ಟುಬಿಡುತ್ತಾರೆ’. ಅಂದರೆ, ಸಮಾಜದಲ್ಲಿ ನೀವು ತುಂಬಾ ನೇರವಾಗಿ, ಅತಿ ಒಳ್ಳೆಯವರಾಗಿದ್ದರೆ, ಇತರರು ನಿಮ್ಮನ್ನು ಬಳಸಿಕೊಂಡು ಬಿಸಾಡುತ್ತಾರೆ. ಆದ್ದರಿಂದ, ಸಂದರ್ಭಕ್ಕೆ ತಕ್ಕಂತೆ ನಿಮ್ಮ ವ್ಯಕ್ತಿತ್ವವನ್ನು ದೃಢವಾಗಿ ಇಟ್ಟುಕೊಳ್ಳುವುದನ್ನು ಕಲಿಯಬೇಕು.2. ಇತರರನ್ನು ನಂಬುವಾಗ ಜಾಗರೂಕರಾಗಿರಿ: ಯಾರಾದರೂ ನಿಮ್ಮೊಂದಿಗೆ ಅಗತ್ಯಕ್ಕಿಂತ ಹೆಚ್ಚು ವಿನಯದಿಂದ ಮಾತನಾಡುತ್ತಿದ್ದರೆ, ಅವರ ಹಿಂದೆ ಯಾವುದೋ ಸ್ವಾರ್ಥ ಇರಬಹುದು ಎಂದು ಚಾಣಕ್ಯ ಎಚ್ಚರಿಸುತ್ತಾರೆ. ಮುಖಸ್ತುತಿಗೆ ಮರುಳಾಗಿ ಅವರನ್ನು ನಂಬಿ, ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ಇದರಿಂದ ನೀವು ಮೋಸ ಹೋಗುವ ಅಪಾಯದಿಂದ ಪಾರಾಗಬಹುದು.