Headlines

ಚಿರಂಜೀವಿ ಜತೆ ರೊಮ್ಯಾನ್ಸ್ ಅನ್ನು ಎಂಜಾಯ್ ಮಾಡಲು ನನಗೆ ಆಗುತ್ತಿರಲಿಲ್ಲ ಎಂದ ನಟಿ! ಯಾರು ಆ ನಟಿ? ಏನದು ಘಟನೆ?

ಚಿರಂಜೀವಿ ಜತೆ ರೊಮ್ಯಾನ್ಸ್ ಅನ್ನು ಎಂಜಾಯ್ ಮಾಡಲು ನನಗೆ ಆಗುತ್ತಿರಲಿಲ್ಲ ಎಂದ ನಟಿ!  ಯಾರು ಆ ನಟಿ? ಏನದು ಘಟನೆ?



ಚಿರಂಜೀವಿ ಜತೆ ರೊಮ್ಯಾನ್ಸ್ ಅನ್ನು ಎಂಜಾಯ್ ಮಾಡಲು ನನಗೆ ಆಗುತ್ತಿರಲಿಲ್ಲ ಎಂದ ನಟಿ!  ಯಾರು ಆ ನಟಿ? ಏನದು ಘಟನೆ?
ಚಿರಂಜೀವಿ ಜೊತೆ ಡಾನ್ಸ್ ಮಾಡುವಾಗ ಒಬ್ಬ ನಟಿ ಸಖತ್ ಪೈಪೋಟಿ ನೀಡುತ್ತಿದ್ದರಂತೆ. ಇದನ್ನು ಗಮನಿಸಿದ ಚಿರಂಜೀವಿ, ಆಕೆಗೆ ಒಂದು ಸ್ವೀಟ್ ವಾರ್ನಿಂಗ್ ಕೊಟ್ಟಿದ್ದರು. ಅಷ್ಟಕ್ಕೂ ಆ ನಟಿ ಯಾರು? ಏನಿದು ಘಟನೆ? ಇಲ್ಲಿದೆ ವಿವರ.<img>ಮೆಗಾಸ್ಟಾರ್ ಚಿರಂಜೀವಿ ಇತ್ತೀಚೆಗೆ ‘ಮನ ಶಂಕರ ವರ ಪ್ರಸಾದ್ ಗಾರು’ ಚಿತ್ರದ ಮೂಲಕ ಬ್ಲಾಕ್‌ಬಸ್ಟರ್ ಹಿಟ್ ನೀಡಿ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದ್ದಾರೆ. ಈ ಚಿತ್ರ ಸುಮಾರು 290 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಪ್ರಾದೇಶಿಕ ಸಿನಿಮಾಗಳಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ ಒಂದಾಗಿದೆ. ಈಗ ಅವರು ಬಾಬಿ ನಿರ್ದೇಶನದಲ್ಲಿ ಹೊಸ ಸಿನಿಮಾಗೆ ಸಿದ್ಧರಾಗುತ್ತಿದ್ದಾರೆ. ಮಾರ್ಚ್ ಕೊನೆಯಲ್ಲಿ ಅಥವಾ ಏಪ್ರಿಲ್‌ನಲ್ಲಿ ಈ ಸಿನಿಮಾ ಶುರುವಾಗುವ ಸಾಧ್ಯತೆ ಇದೆ.<img>ಇತ್ತೀಚೆಗೆ ಚಿರಂಜೀವಿ ಕೈಗೆ ಬ್ಯಾಂಡೇಜ್ ಹಾಕಿಕೊಂಡು ಕಾಣಿಸಿಕೊಂಡಿದ್ದರು. ಇದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ ಅವರು, ತಮ್ಮ ಭುಜಕ್ಕೆ ಸಣ್ಣ ಕೀಹೋಲ್ ಸರ್ಜರಿ ಆಗಿದೆ, ಈಗ ಚೆನ್ನಾಗಿದ್ದೇನೆ ಎಂದು ತಿಳಿಸಿದ್ದಾರೆ. ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಮತ್ತೆ ದೈನಂದಿನ ಚಟುವಟಿಕೆಗಳಿಗೆ ಮರಳುತ್ತಿರುವುದಾಗಿ ಹೇಳಿದ್ದಾರೆ. ಅತ್ಯುತ್ತಮ ಆರ್ಥ್ರೋಸ್ಕೋಪಿ ಸರ್ಜನ್‌ಗಳಲ್ಲಿ ಒಬ್ಬರಾದ ನಿತಿನ್‌ ಅವರಿಗೆ ಚಿರಂಜೀವಿ ಧನ್ಯವಾದ ತಿಳಿಸಿದ್ದಾರೆ.<img>ಈ ನಡುವೆ ಚಿರಂಜೀವಿಯವರ ಹಳೆಯ ಸಂದರ್ಶನವೊಂದು ವೈರಲ್ ಆಗಿದೆ. ಇದರಲ್ಲಿ ಅವರು ಅಂದಿನ ಸ್ಟಾರ್ ನಟಿ ಭಾನುಪ್ರಿಯಾ ಬಗ್ಗೆ ಮಾತನಾಡಿದ್ದಾರೆ. ಭಾನುಪ್ರಿಯಾ ಅದ್ಭುತ ಡಾನ್ಸರ್, ಭಾರತದ ಅತ್ಯುತ್ತಮ ನೃತ್ಯಗಾರ್ತಿಯರಲ್ಲಿ ಅವರೂ ಒಬ್ಬರು ಎಂದು ಹೇಳಿದ್ದಾರೆ. ಅವರೊಂದಿಗೆ ನಟಿಸಿದ್ದು ಅದ್ಭುತ ಅನುಭವ ಎಂದಿದ್ದಾರೆ. ಉಳಿದ ನಟಿಯರೊಂದಿಗೆ ಸುಲಭವಾಗಿ ಡಾನ್ಸ್ ಮಾಡುತ್ತಿದ್ದೆ, ಆದರೆ ಭಾನುಪ್ರಿಯಾ ಜೊತೆ ಡಾನ್ಸ್ ಮಾಡಲು ತುಂಬಾ ಕಷ್ಟಪಡಬೇಕಾಗಿತ್ತು ಎಂದು ಚಿರಂಜೀವಿ ಹೇಳಿಕೊಂಡಿದ್ದಾರೆ.<img><p>ಭಾನುಪ್ರಿಯಾಗೆ ಕೊಟ್ಟ ಸ್ವೀಟ್ ವಾರ್ನಿಂಗ್ ಬಗ್ಗೆಯೂ ಚಿರು ಆ ಸಂದರ್ಶನದಲ್ಲಿ ಹೇಳಿದ್ದಾರೆ. ಭಾನುಪ್ರಿಯಾ ಡಾನ್ಸ್ ವಿಷಯದಲ್ಲಿ ತುಂಬಾ ಸ್ಪರ್ಧಾತ್ಮಕವಾಗಿದ್ದರಂತೆ. ಈ ಪೈಪೋಟಿಯಿಂದಾಗಿ ಇಬ್ಬರ ನಡುವಿನ ಕೆಮಿಸ್ಟ್ರಿ ಮತ್ತು ರೊಮ್ಯಾನ್ಸ್ ಮಿಸ್ ಆಗುತ್ತಿತ್ತು. ಹಾಡುಗಳಲ್ಲಿ ಡಾನ್ಸ್ ಮಾಡಿದರೆ ಯಾವುದೋ ಸ್ಪರ್ಧೆಯಲ್ಲಿ ಭಾಗವಹಿಸಿದಂತೆ ಇರುತ್ತಿತ್ತು. ಇದೇ ಮಾತನ್ನು ಅವರು ಭಾನುಪ್ರಿಯಾ ಬಳಿ ಹೇಳಿದರಂತೆ.&nbsp;</p><img><p>’ನಾವು ಕಾಂಪಿಟೇಷನ್ ರೀತಿ ಡಾನ್ಸ್ ಮಾಡುತ್ತಿದ್ದೇವೆ, ಆದರೆ ಕೆಮಿಸ್ಟ್ರಿ ವರ್ಕ್ ಆಗುತ್ತಿಲ್ಲ, ತೆರೆ ಮೇಲೆ ಇದು ಚೆನ್ನಾಗಿ ಕಾಣುವುದಿಲ್ಲ’ ಎಂದು ಸಲಹೆ ನೀಡಿದರಂತೆ. ಮಂಚು ಲಕ್ಷ್ಮಿ ಅವರ ಟಾಕ್ ಶೋನಲ್ಲಿ ಚಿರಂಜೀವಿ ಈ ವಿಷಯವನ್ನು ಬಹಿರಂಗಪಡಿಸಿದ್ದರು.</p><img>ಚಿರಂಜೀವಿ ಹೇಳಿದ ಈ ಮಾತನ್ನು ಭಾನುಪ್ರಿಯಾ ಕೂಡ ಒಪ್ಪಿಕೊಂಡಿದ್ದಾರೆ. ‘ಚಿರಂಜೀವಿ ಜೊತೆಗಿನ ರೊಮ್ಯಾನ್ಸ್ ಅನ್ನು ಎಂಜಾಯ್ ಮಾಡಲು ನನಗೆ ಆಗುತ್ತಿರಲಿಲ್ಲ. ನನ್ನ ಸಂಪೂರ್ಣ ಗಮನ ಡಾನ್ಸ್ ಚೆನ್ನಾಗಿ ಮಾಡುವುದರ ಮೇಲೆಯೇ ಇರುತ್ತಿತ್ತು. ಈ ಕಾರಣದಿಂದ ರೊಮ್ಯಾನ್ಸ್ ಮೇಲೆ ಗಮನ ಹರಿಸಲು ಸಾಧ್ಯವಾಗಲಿಲ್ಲ, ಆ ಕೊರಗು ಇರುತ್ತದೆ’ ಎಂದು ಭಾನುಪ್ರಿಯಾ ಹೇಳಿದ್ದರು. ಚಿರಂಜೀವಿ ಕೂಡ ಇದೇ ವಿಷಯವನ್ನು ಹೇಳುತ್ತಿದ್ದರು ಎಂದು ಭಾನುಪ್ರಿಯಾ ಹಿಂದೊಮ್ಮೆ ಸಂದರ್ಶನವೊಂದರಲ್ಲಿ ತಿಳಿಸಿದ್ದರು.



Source link

Leave a Reply

Your email address will not be published. Required fields are marked *