
ಚಿಕ್ಕಮಗಳೂರು, (ಏಪ್ರಿಲ್ 13): ಎನ್ ಆರ್ ಪುರ (ಎನ್.ಆರ್. ಪುರ) ಪಟ್ಟಣದ ಹೊರಹೊಲಯದಲ್ಲಿ ನಿರ್ಮಾಣಗೊಂಡಿರುವ ಹೆಚ್ಚಿನ ಹೆಸರಿನ ಸೇತುವೆಯನ್ನು (ಸಿದ್ದರಾಮಯ್ಯ ಸೇತುವೆ) ಸಿಎಂ ಸಿದ್ದರಾಮಯ್ಯ (ಸಿದ್ದರಾಮಯ್ಯ) ಇಂದು (ಏಪ್ರಿಲ್ 13) ಉದ್ಘಾಟಿಸಿದರು. ಭದ್ರಾ ಹಿನ್ನೀರಿನ ಹಂದೂರು ಬಳಿ 38 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಅರ್ಧ ಕಿಲೋ ಉದ್ದ ಮೀಟರ್ ಸೇತುವೆ ಇದಾಗಿದೆ, ಹತ್ತಾರು ಹಳ್ಳಿ ಗ್ರಾಮಸ್ಥರ 6 ಕನಸು ನನಸಾಗಿದೆ. ಈ ಸೇತುವೆ ನಿರ್ಮಾಣದಿಂದ 10ಕ್ಕೂ ಹೆಚ್ಚು ಹಳ್ಳಿಗಳಿಗೆ ವರದಾನವಾಗಿದ್ದು, ಗ್ರಾಮಸ್ಥರು ಪಟ್ಟಣಕ್ಕೆ ಬರಲು ಮೊದಲು 30 ಕಿಮೀ ಸುತ್ತಿ ಬರಬೇಕಿತ್ತು. ಈ ದೂರವನ್ನು ಸೇತುವೆ ಕೇವಲ 3 ಕಿಮೀಗೆ ಇಳಿಸಿದೆ.
ಸೇತುವೆಗೆ ಸಿದ್ದರಾಮಯ್ಯ ಹೆಸರು

504 ಮೀಟರ್ ಉದ್ದದ ಈ ಸೇತುವೆಗೆ ‘ಸಿದ್ದರಾಮಯ್ಯ’ ಎಂದು ಹೆಸರಿಡಲಾಗಿದೆ. ಸುಮಾರು 38 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ಸೇತುಗೆ 2017 ರಲ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ ಸಿದ್ದರಾಮಯ್ಯ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. ಈಗ ಅವರೇ ಈ ಸೇತುವೆಯನ್ನು ಲೋಕಾರ್ಪಣೆ ಮಾಡಿದ್ದಾರೆ. ಈ ಸೇತುವೆಯಿಂದ ಹತ್ತಾರು ಹಳ್ಳಿಗಳಿಗೆ ಜೀವ ಬಂಕ್.
ಇದನ್ನೂ ನೋಡಿ: ಚಿಕ್ಕಮಗಳೂರು: ಎನ್ಆರ್ ಪುರದಲ್ಲಿ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಸೇತುವೆ ಮೇಲೆ ಸಿದ್ದರಾಮಯ್ಯ ಪುತ್ಥಳಿ

ಈ ಸೇತುವೆಯ ಮೇಲೆ ಎರಡು ಅಡಿ ಎತ್ತರದ ಕೃಷ್ಣ ಶಿಲೆಯ ಕಲ್ಲಿನಿಂದ ಸಿದ್ದರಾಮಯ್ಯ ಅವರ ಪುತ್ಥಳಿ ನಿರ್ಮಾಣ ಮಾಡಿದರು. ಸಿದ್ದರಾಮಯ್ಯ ಅವರ ಅಭಿಮಾನಿಗಳು ,MLC ಶ್ರೀನಿವಾಸ್ ಅವರು ಸೇತುವೆಯ ಮೇಲೆ ಸಿದ್ದರಾಮಯ್ಯ ಅವರ ಪುತ್ಥಳಿ ನಿರ್ಮಾಣ ಮಾಡಿದ್ದಾರೆ. ಗ್ರಾಮ ಪಂಚಾಯತಿಯಿಂದ ಸಿದ್ದರಾಮಯ್ಯ ಸೇತುವೆಗೆ ಹೆಸರು ಮತ್ತು ಪುತ್ಥಳಿಗೆ ಅನುಮತಿ ಪಡೆದಿದ್ದು, ಇಂದು ಸಚಿವ ಕೆ.ಜೆ ಜಾರ್ಜ್ ಸಿದ್ದರಾಮಯ್ಯ ಪುತ್ಥಳಿ ಅನಾವರಣ ಮಾಡಿದ್ದಾರೆ.
30 ಕಿಮೀಟರ್ ನಿಂದ 3 ಕಿಮೀಗೆ ಇಳಿಕೆ
ಭದ್ರಾ ಹಿನ್ನೀರಿನಲ್ಲಿ ಸೇತುವೆ ನಿರ್ಮಾಣದಿಂದ NR ಪುರ ನಗರಕ್ಕೆ ಬರಲು ಅನುಕೂಲವಾಗಿದೆ , ಭದ್ರಾ ಹಿನ್ನೀರಿನ ಹಂದೂರು ಬಳಿ 38 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ 58 ಮೀಟರ್ ಉದ್ದ ಸೇತುವೆ ಇದೆ. ಹತ್ತಾರು ಹಳ್ಳಿ ಗ್ರಾಮಸ್ಥರು 6 ಸೇತುವೆಗೆ ಬೇಡಿಕೆ ಇಟ್ಟಿದ್ದರು. ಸೇತುವೆ ನಿರ್ಮಾಣದಿಂದ 10ಕ್ಕೂ ಹೆಚ್ಚು ಹಳ್ಳಿಗಳಿಗೆ ವರದಾನವಾಗಿದೆ. ಗ್ರಾಮಸ್ಥರು ಪಟ್ಟಣಕ್ಕೆ ಬರಲು ಮೊದಲು 30 ಕಿಮೀ ಸುತ್ತಿ ಬರಬೇಕಿತ್ತು. ಈ ದೂರವನ್ನು ಸೇತುವೆ ಕೇವಲ 3 ಕಿಮೀಗೆ ಇಳಿಸಿದೆ.
ಪ್ರವಾಸಿ ತಾಣವಾದ ಸೇತುವೆ
ನೂತನ ಸೇತುವೆ ಈಗ ಸಾವಿರಾರು ಜನರಿಗೆ ಉಪಯೋಗ ಆಗುವ ಜೊತೆಗೆ ಒಂದು ರೀತಿಯ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಭದ್ರಾ ನೀರಿನಲ್ಲಿ ನಿರ್ಮಿಸಲಾಗಿದೆ ಸುತ್ತಲು ಹಚ್ಚ ಹಸಿರು, ನೀರಿನಿಂದ ಕಂಗೊಳಿಸುತ್ತಿದೆ, ಈ ಸೇತುವೆಯನ್ನು ನೋಡಲು ವಿವಿಧ ಭಾಗದಿಂದ ಜನರು ಸಂಜೆ ವೇಳೆ ಆಗಮಿಸುತ್ತಿದ್ದಾರೆ. ಸೇತುವೆ ಮೇಲೆ ನಿಂತು ಅದ್ಭುತ ಪ್ರಕೃತಿ ಸೌದರ್ಯವನ್ನು ಕಣ್ತುಂಬಿಕೊಂಡು ಖುಷಿ ಪಡುತ್ತಿದ್ದಾರೆ.