
<p>Bhagyalakshmi Serial Episode Update: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಈಗ ಭಾಗ್ಯ ಮನೆಗೆ ಬಂದ ತಾಂಡವ್ ಧರಣಿ ಕೂತಿದ್ದಾನೆ. ಅವನಿಗೆ ಭಾಗ್ಯ ಒಪ್ಪುತ್ತಾಳಾ? ಇಲ್ಲವಾ ಎನ್ನುವ ಚಿಂತೆ ಶುರುವಾಗಿದೆ. ಈಗ ಸಕಲೇಶಪುರದಲ್ಲಿ ಕೊನೆಯ ಸಂಚಿಕೆ ಶೂಟಿಂಗ್ ನಡೆದಿದೆಯಾ ಎಂಬ ಪ್ರಶ್ನೆ ಶುರುವಾಗಿದೆ.</p><p> </p><img><p>ಇನ್ನೊಂದು ಕಡೆ ಭಾಗ್ಯಳಿಗೆ ಪ್ರಪೋಸ್ ಮಾಡಬೇಕು ಎಂದು ಆದಿ ಕಾಯುತ್ತಿದ್ದಾನೆ. ಹೌದು, ಈ ಧಾರಾವಾಹಿಯಲ್ಲಿ ಆದಿಯನ್ನು ಭಾಗ್ಯ ಒಪ್ಪುತ್ತಾಳಾ? ಅಥವಾ ತಾಂಡವ್ನನ್ನು ಕ್ಷಮಿಸಿ ಅವನ ಜೊತೆ ಇರುತ್ತಾಳಾ ಎಂಬ ಪ್ರಶ್ನೆ ಎದ್ದಿದೆ. ಈ ಪ್ರಶ್ನೆಗೆ ಉತ್ತರ ಸಿಕ್ಕಿದರೆ ಸೀರಿಯಲ್ ಅಂತ್ಯ ಎಂದು ವೀಕ್ಷಕರು ಅಂದುಕೊಂಡಿದ್ದಾರೆ.</p><img><p>ಇಷ್ಟುದಿನ ಮಾಡಿದ್ದೆಲ್ಲವೂ ತಪ್ಪು, ನಾನು ಹೀಗೆ ಮಾಡಬಾರದಿತ್ತು, ನನ್ನಿಂದ ಅನ್ಯಾಯ ಆಗಿದೆ. ಇನ್ಮೇಲಾದರೂ ನಾನು ಮಕ್ಕಳು, ಪತ್ನಿ ಜೊತೆ ಖುಷಿಯಿಂದ ಬಾಳಬೇಕು ಎಂದು ತಾಂಡವ್ ಅಂದುಕೊಂಡಿದ್ದಾನೆ. ಈಗ ಭಾಗ್ಯ ಒಪ್ಪಿಕೊಳ್ಳಬೇಕು.</p><img><p>ನನ್ನ ಜೀವನವನ್ನು ಹಾಳು ಮಾಡಿರೋ, ಲೆಕ್ಕವಿಲ್ಲದಷ್ಟು ತಪ್ಪು ಮಾಡಿರೋ ತಾಂಡವ್ನನ್ನು ಭಾಗ್ಯ ಒಪ್ಪಿಕೊಳ್ಳೋದಿಲ್ಲವಂತೆ. ಈಗ ಏನಾಗಲಿದೆ ಎಂದು ಕಾದು ನೋಡೇಕಿದೆ.</p><img><p>ಸಕಲೇಶಪುರದಲ್ಲಿ ಶೂಟಿಂಗ್ ನಡೆದಿದ್ದು, ನಟ ಹರೀಶ್ ರಾಜ್ ಅವರು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಬಹುಶಃ ಸಕಲೇಶಪುರದಲ್ಲಿ ಆದಿ, ಭಾಗ್ಯಗೆ ಪ್ರಪೋಸ್ ಮಾಡಬಹುದಾ ಎಂಬ ಅನುಮಾನ ಶುರುವಾಗಿದೆ.</p><img><p>ತನ್ವಿಗೆ ತನ್ನ ತಂದೆ-ತಾಯಿ ಜೊತೆಗೆ ಇರಬೇಕು ಎನ್ನುವ ಆಸೆ ಇದೆ. ಹೀಗಾಗಿ ಅವಳು ಕೂಡ ತಾಯಿ ಹಿಂದೆ ಹೋಗಲೂಬಹುದು, ಆದಿ-ಭಾಗ್ಯ ಒಂದಾಗಬಾರದು ಎಂದು ಅವಳು ಹೇಳಲೂಬಹುದು. ಒಟ್ಟಿನಲ್ಲಿ ಮುಂದಿನ ಸಂಚಿಕೆಗಳು ಕುತೂಹಲದಿಂದ ಕೂಡಿವೆ.</p><img><p>ಹರೀಶ್ ರಾಜ್ ಅವರ ರಿಯಲ್ ಪತ್ನಿ, ಮಕ್ಕಳು ಕೂಡ ಸೆಟ್ಗೆ ಭೇಟಿ ಕೊಟ್ಟಿದ್ದಾರೆ.</p>
Source link
Bhagyalakshmi Serial ಕೊನೇ ಸಂಚಿಕೆಯಲ್ಲಿ ಆದಿ ಭಾಗ್ಯ ಒಂದಾಗ್ತಾರಾ? ಸಕಲೇಶಪುರದಲ್ಲಿ ಸಿಕ್ಕ ಸಾಕ್ಷಿಯಿದು