Muddu Sose Serial: ಏಕಕಾಲಕ್ಕೆ ಮುದ್ದು ಸೊಸೆ ಧಾರಾವಾಹಿಯ ಎರಡು ಘಟಾನುಘಟಿ ಪಾತ್ರಗಳು ಮುಗಿದೋಯ್ತಾ?

Muddu Sose Serial: ಏಕಕಾಲಕ್ಕೆ ಮುದ್ದು ಸೊಸೆ ಧಾರಾವಾಹಿಯ ಎರಡು ಘಟಾನುಘಟಿ ಪಾತ್ರಗಳು ಮುಗಿದೋಯ್ತಾ?



Muddu Sose Serial: ಏಕಕಾಲಕ್ಕೆ ಮುದ್ದು ಸೊಸೆ ಧಾರಾವಾಹಿಯ ಎರಡು ಘಟಾನುಘಟಿ ಪಾತ್ರಗಳು ಮುಗಿದೋಯ್ತಾ?
<p>Muddu Sose Serial: ಮುದ್ದು ಸೊಸೆ ಧಾರಾವಾಹಿಯಲ್ಲಿ ಈಗ ಎರಡು ಪಾತ್ರಗಳು ಅಂತ್ಯ ಆಗಲಿವೆಯಾ ಎಂಬ ಪ್ರಶ್ನೆ ಮೂಡಿದೆ. ಹೌದು, ಭದ್ರ ಹಾಗೂ ವಿನಂತಿ ಮದುವೆ ಆಗುತ್ತೋ ಇಲ್ಲವೋ ಎಂಬ ಪ್ರಶ್ನೆ ನಡುವೆ, ಇನ್ನೊಂದು ಕುತೂಹಲದ ವಿಷಯ ಇದೆ. ಹಾಗಾದರೆ ಏನದು?</p><p>&nbsp;</p><img><p>ಮುದ್ದು ಸೊಸೆ ಧಾರಾವಾಹಿಯಲ್ಲಿ ಭದ್ರೇಗೌಡ ಹಾಗೂ ವಿದ್ಯಾ ಮದುವೆ ನಿಶ್ಚಯ ಆಗಿತ್ತು. ಓದಬೇಕು ಎಂದು ಆಸೆ ಇಟ್ಟುಕೊಂಡಿದ್ದ ವಿದ್ಯಾಗೆ ಈ ಮದುವೆ ಇಷ್ಟ ಇರಲಿಲ್ಲ. ಪೊಲೀಸರಿಗೆ ಫೋನ್‌ ಮಾಡಿ, ಈ ಮದುವೆ ನಿಲ್ಲಿಸುವ ಪ್ಲಾನ್‌ ಮಾಡಿದ್ದಳು. ಆದರೆ ವಿದ್ಯಾ ಫೋನ್‌ ಮಾಡಿದ್ದಕ್ಕೆ ಪೊಲೀಸರು ಮದುವೆ ನಿಲ್ಲಿಸಲು ಬಂದಿರಲಿಲ್ಲ. ಬದಲಾಗಿ ವಿನಂತೆ ಫೋನ್‌ ಮಾಡಿದ್ದಕ್ಕೆ ಪೊಲೀಸರು ಬಂದಿದ್ದರು.</p><img><p>ಬಾಲ್ಯ ವಿವಾಹ ಮಾಡಲು ಮುಂದಾಗಿದ್ದಕ್ಕೆ ಭದ್ರೇಗೌಡನ ತಂದೆ ಶಿವರಾಮೇಗೌಡನನ್ನು ಜೈಲಿಗೆ ಹಾಕಿದ್ದರು. ನನ್ನ ಮನೆಗೆ ಬೆಳಕಾಗಲು ಬಂದ ಸೊಸೆ ವಿದ್ಯಾ ನನ್ನನ್ನು ಜೈಲಿಗೆ ಕಳಿಸಿದಳು ಎಂದು ಅವಳಿಗೆ ಶಿಕ್ಷೆ ಕೊಡಲಾಗಿತ್ತು.</p><img><p>ಭದ್ರೇಗೌಡನ ಜನ್ಮದಿನದಂದು ಕೇಕ್‌ನಲ್ಲಿ ಅಮಲು ಬರುವ ಔಷಧಿ ಮಿಕ್ಸ್‌ ಮಾಡಿದ್ದ ವಿನಂತಿ, ಅವನಿಂದಲೇ ಅತ್ಯಾ*ಚಾರ ಆಯ್ತು ಎಂದು ಹೇಳಿದ್ದಳು. ಮನೆಯವರ ಮುಂದೆ ನಾಟಕ ಮಾಡಿ ಭದ್ರನ ಜೊತೆ ಮದುವೆ ಆಗಲು ರೆಡಿಯಾಗಿದ್ದಳು. ಇದಕ್ಕೆ ಅವಳ ತಾಯಿಯೇ ಸಂಚು ರೂಪಿಸಿದ್ದಳು.</p><img><p>ಭದ್ರ ಹಾಗೂ ವಿನಂತಿ ಮದುವೆಯನ್ನು ತಡೆಯಲು ವಿದ್ಯಾ ತಂದೆ ರೆಡಿಯಾಗಿದ್ದನು. ಆ ಬಳಿಕ ವಿನಂತಿಯು ಲೋಕಿ ಸಹಾಯದಿಂದಲೇ ಪೊಲೀಸರಿಗೆ ಫೋನ್‌ ಮಾಡಿದ್ದಳು. ಇದನ್ನು ಮುಚ್ಚಿಡಲು ಹಣ ಕೊಡುತ್ತಿದ್ದಳು. ಈಗ ಎಲ್ಲರ ಮುಂದೆ ಈ ಸತ್ಯ ಹೊರಬಿದ್ದಿದೆ.</p><img><p>ಭದ್ರೇಗೌಡನನ್ನು ಮದುವೆ ಆಗಬೇಕು ಎಂದು ಅವನ ಅತ್ತೆ ಮಗಳು ವಿನಂತಿ ಪ್ಲ್ಯಾನ್‌ ಮಾಡಿ ವಿದ್ಯಾ-ಭದ್ರನ ಮದುವೆ ತಡೆದಿದ್ದಳು. ಇದು ಈಗ ರಿವೀಲ್‌ ಆಗಿದೆ. ಇದಕ್ಕೆ ಸರಿಯಾಗಿ ಶಿಕ್ಷೆ ಕೂಡ ಸಿಕ್ಕಿದೆ. ವಿನಂತಿ ಹಾಗೂ ಅವಳ ತಾಯಿಯನ್ನು ಮನೆಯಿಂದ ಹೊರಹಾಕಿದ್ದಾರೆ. ಈಗ ಈಗ ಎರಡೂ ಪಾತ್ರಗಳು ಮುಗಿದಂತಿವೆ ಅಥವಾ ಮುಂದಿನ ದಿನಗಳಲ್ಲಿ ಭದ್ರ-ವಿದ್ಯಾ ವಿರುದ್ಧ ಸೇಡು ತೀರಿಸಿಕೊಳ್ಳಲೂಬಹುದು.</p>



Source link

Leave a Reply

Your email address will not be published. Required fields are marked *