
ನಿರ್ದೇಶಕರು ಸ್ವಲ್ಪ ಗದರಿದ್ದರಿಂದ ಅಮೂಲ್ಯ ಕಣ್ಣೀರು ಹಾಕಿದ್ದಾರೆ. ನಂದಕುಮಾರ್ ಮುಂದೆ ನಿಂತು ಅಮೂಲ್ಯ, ಭಾವುಕಳಾಗಿ ಡೈಲಾಗ್ ಹೇಳುವ ಸನ್ನಿವೇಶ ನಡೆಯುತ್ತಿತ್ತು. ನಿರ್ದೇಶಕರು ಮನಸ್ಸು ಭಾರ ಮಾಡ್ಕೊ, ರಿಲ್ಯಾಕ್ಸ್ ಆಗಬೇಡ. ಭಾರವಾದ ಮನಸ್ಸಿನಿಂದ ಡೈಲಾಗ್ ಹೇಳು ಅಂತ ಹೇಳಿದಾಗ ಅಮೂಲ್ಯ ನಿಜವಾಗಿಯೂ ಕಣ್ಣೀರು ಹಾಕಿದ್ದಾರೆ. ನಂತರ ನಂದಕುಮಾರ್, ಅಮೂಲ್ಯಾಗೆ ಸಮಾಧಾನ ಮಾಡಿದ್ದಾರೆ. ಈ ಎಲ್ಲಾ ದೃಶ್ಯಗಳನ್ನು ವಲ್ಲಭ ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದುಕೊಂಡಿದ್ದು, ವಿಡಿಯೋ ವೈರಲ್ ಆಗ್ತಿದೆ.
ಇದನ್ನೂ ಓದಿ: ನನ್ನ ಜಗತ್ತನ್ನ ನಾನೇ ಸೃಷ್ಟಿಸಿಕೊಳ್ಳುವೆ: ನಟಿ ಮೇಘನಾ ರಾಜ್ ಬದುಕಿನ ಹೊಸ ನಿರ್ಧಾರ