ಬೆಂಗಳೂರು, ಅಕ್ಟೋಬರ್ 27: ನಮ್ಮ ಮನೆಯಿರಲಿ, ಅಂಗಡಿಗಳಿರಲಿ, ದೇವಸ್ಥಾನವಿರಲಿ ಅಥವಾ ಫ್ಯಾಕ್ಟರಿಗಳಿರಲಿ, ವಾಸ್ತುವಿಗೆ ನಾವು ಹೆಚ್ಚಿನ ಸ್ಥಾನಮಾನವನ್ನು ಕೊಡುತ್ತೇವೆ. ವಾಸ್ತು ನಮ್ಮ ಜೀವನದ ಮೇಲೆಯೂ ಹೆಚ್ಚಿನ ಪ್ರಭಾವ ಬೀರುವುದರಿಂದ ನಾವು ಅದಕ್ಕೆ ಪ್ರಾಶಸ್ತ್ಯ ನೀಡಲೇಬೇಕು. ನೀವೇನಾದರೂ ಜೀವನೋಪಾಯಕ್ಕಾಗಿ ಅಂಗಡಿಗಳನ್ನು ಮಾಡಿಕೊಂಡಿದ್ದರೆ ವಾಸ್ತು ಪ್ರಕಾರ ಅಂಗಡಿಯಲ್ಲಿ ಯಜಮಾನಯಾವ ದಿಕ್ಕಿಗೆ ಕೂರಬೇಕು ಎನ್ನುವುದನ್ನು ಇಂದಿನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಸಂಸ್ಥೆಯ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.