ಬೆಂಗಳೂರು, ಜನವರಿ 17: ಈ ಅಮಾವಾಸ್ಯೆಯನ್ನು ಮಾಘ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಇದು ಪೂರ್ವಿಕರ ಸ್ಮರಣೆಗೆ ಮತ್ತು ಅವರ ಆಶೀರ್ವಾದಕ್ಕಾಗಿ ಬಹಳ ಪ್ರಶಸ್ತವಾದ ದಿನವಾಗಿದೆ. ಮೌನಿ ಅಮಾವಾಸ್ಯೆಯಂದು ಪೂರ್ವಿಕರು ನಮ್ಮ ಸುತ್ತಲೂ ಇರುತ್ತಾರೆಂದು ನಂಬಲಾಗಿದೆ. ಅವರು ನಮ್ಮನ್ನು ಸರಿಯಾದ ಮಾರ್ಗಕ್ಕೆ ತರಲು, ನಮ್ಮ ಲೋಪದೋಷಗಳನ್ನು ಸರಿಪಡಿಸಲು, ಆಯುರಾರೋಗ್ಯ ಮತ್ತು ದುಷ್ಟ ಶಕ್ತಿಗಳನ್ನು ಹೋಗಲಾಡಿಸಲು ಈ ದಿನ ಬರುತ್ತಾರೆ. ಅವರನ್ನು ತೃಪ್ತಿಪಡಿಸಲು ನಾವು ಮಾಡುವ ದಾನ, ಸಹಾಯ ಮತ್ತು ಒಳ್ಳೆಯ ಕಾರ್ಯಗಳು ಬಹಳ ಮುಖ್ಯ. ಅನಾಥರು, ಅಶಕ್ತರು, ರೋಗಿಗಳು, ವೃದ್ಧರು ಹಾಗೂ ಬಡವರಿಗೆ ನೆರವು ನೀಡುವುದರಿಂದ ಪೂರ್ವಿಕರು ಸಂತೃಪ್ತರಾಗುತ್ತಾರೆ. ಬಸವರಾಜ ಗುರೂಜಿ ಹೇಳಿದ್ದಾರೆ.