ಬೆಂಗಳೂರು, ಅಕ್ಟೋಬರ್ 25: ಮನೆಯೇ ಮಂತ್ರಾಲಯ ಎಂದು ಹೇಳುತ್ತೇವೆ. ಅಂತೆಯೇ ಋಣಾನುಬಂಧ ರೂಪೇಣ ಪಶುಪತ್ನಿ ಸುತಾಲಯ ಎಂದೂ ಹೇಳುತ್ತೇವೆ. ನಮ್ಮ ಪೂರ್ವಜರು ನಾವು ವಾಸಿಸುವ ಮನೆಗಳಿಗೆ ಪೂಜ್ಯ ಸ್ಥಾನವಿದೆ. ಹೀಗಿರುವಾಗ ಮನೆಯ ಹೊಸ್ತಿಲೂ ಸಹ ಅಷ್ಟೇ ಪೂಜ್ಯನೀಯವಾಗಿದೆ. ಮನೆಯ ಹೊಸ್ತಿಲನ್ನು ಹೇಗೆ ನೋಡಿಕೊಳ್ಳಬೇಕು, ಹೊಸ್ತಿಲಿನ ಮೇಲೆ ಏಕೆ ಕೂರಬಾರದು ಎನ್ನುವುದನ್ನು ಇಂದಿನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಸಂಸ್ಥೆ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.