ಬೆಂಗಳೂರು, ನವೆಂಬರ್ 16: ವಿಭೂತಿ ಮತ್ತು ನಾಮಗಳು ಹಿಂದೂ ಸಂಪ್ರದಾಯದ ಮಹತ್ವಪೂರ್ಣವಾದ ಹಣೆಯ ಗುರುತು. ಇವುಗಳನ್ನು ಸಾಮಾನ್ಯವಾಗಿ ಮೂರು ರೇಖೆಗಳಲ್ಲಿ ಧರಿಸಲಾಗುತ್ತದೆ, ಇದು ಕೇವಲ ಸಾಂಪ್ರದಾಯಿಕವಲ್ಲದ, ಆಳವಾದ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಮೂರು ಎಂಬ ಸಂಖ್ಯೆಯು ಬ್ರಹ್ಮ, ವಿಷ್ಣು, ಮಹೇಶ್ವರರ ತ್ರಿಮೂರ್ತಿಗಳು, ಸರಸ್ವತಿ, ಮಹಾಕಾಳಿ, ಮಹಾಲಕ್ಷ್ಮಿಯ ತ್ರಿಶಕ್ತಿಗಳು, ಹಾಗೂ ಸೃಷ್ಟಿ, ಸ್ಥಿತಿ, ಲಯಗಳ ಸಂಕೇತವಾಗಿದೆ.
ವಿಭೂತಿ ಅಥವಾ ನಾಮಗಳನ್ನು ಧರಿಸುವುದರಿಂದ ಅಪಮೃತ್ಯು ನಿವಾರಣೆಯಾಗುತ್ತದೆ, ಜ್ಞಾನ ವೃದ್ಧಿಯಾಗುತ್ತದೆ ಮತ್ತು ಆಧ್ಯಾತ್ಮಿಕ ಜಾಗೃತಿ ಮೂಡುತ್ತದೆ ಎಂದು ನಂಬಲಾಗಿದೆ. 10ನೇ ಶತಮಾನದಿಂದ ಈ ಧಾರ್ಮಿಕ ಆಚರಣೆಗಳು ಪ್ರಚಲಿತದಲ್ಲಿವೆ ಎಂದು ಶಾಸ್ತ್ರಗಳು ತಿಳಿಸುತ್ತವೆ. ರಾಮಾನುಜಾಚಾರ್ಯರು ಪ್ರತಿಪಾದಿಸಿದ ವಿಶಿಷ್ಟಾದ್ವೈತ ಧರ್ಮದಲ್ಲಿ ಜೀವ, ಪ್ರಕೃತಿ, ಪರಮಾತ್ಮ ಎಂಬ ತ್ರಿತ್ವಕ್ಕೂ ಈ ನಾಮಗಳ ಧಾರಣೆಗೂ ಸಂಬಂಧವಿದೆ. ಮಕ್ಕಳಿಗೂ ಈ ಪದ್ಧತಿಯನ್ನು ಕಲಿಸುವುದರಿಂದ ಅವರಲ್ಲಿ ಶಕ್ತಿ, ಕೀರ್ತಿ ಮತ್ತು ಬುದ್ಧಿಶಕ್ತಿ ಬೆಳೆಯುತ್ತದೆ ಎಂದು ಹೇಳಿದರು.