
ಇಂದು 25-11-2025 ಮಂಗಳವಾರ, ವಿಶ್ವಾವಸುನಾಮ ಸಂವತ್ಸರದಲ್ಲಿ ಡಾ. ಬಸವರಾಜ ಗುರೂಜಿ ಅವರು ದ್ವಾದಶ ರಾಶಿಗಳ ದೈನಂದಿನ ಭವಿಷ್ಯವನ್ನು ತಿಳಿಸಿದ್ದಾರೆ. ಈ ದಿನವು ಸುಬ್ರಮಣ್ಯ ಪಂಚಮಿ ವಿಶೇಷವಾಗಿದ್ದು, ಸುಬ್ರಮಣ್ಯ ಆರಾಧನೆ ಮತ್ತು ನಾಗಪೂಜೆಗಳು ಕುಜದೋಷ ನಿವಾರಣೆಗೆ ಶುಭಕರ. ರವಿ ವೃಶ್ಚಿಕದಲ್ಲಿ ಮತ್ತು ಚಂದ್ರ ಮಕರ ರಾಶಿಯ ಉತ್ತರಾಷಾಢ ನಕ್ಷತ್ರದಲ್ಲಿ ಸಂಚಾರ ಮಾಡುತ್ತಿದ್ದಾರೆ. ಮೇಷ ರಾಶಿಯವರಿಗೆ ಮಾನಸಿಕ ತೃಪ್ತಿ, ಕಾರ್ಯಗಳಲ್ಲಿ ಯಶಸ್ಸು, ಆದಾಯ ವೃದ್ಧಿ ಮತ್ತು ಹಳೆಯ ಬಾಕಿ ವಸೂಲಿ ಯೋಗವಿದೆ. ವೃಷಭ ರಾಶಿಯವರಿಗೆ ವ್ಯಾಪಾರದಲ್ಲಿ ಶುಭ, ಹೂಡಿಕೆಯಿಂದ ಲಾಭ ಹಾಗೂ ಸರ್ಕಾರಿ ನೌಕರರಿಗೆ ಉತ್ತಮ ದಿನ. ಮಿಥುನ ರಾಶಿಯವರಿಗೆ ಆಕಸ್ಮಿಕ ಧನ ಲಾಭ, ಉದ್ಯೋಗದಲ್ಲಿ ಬಡ್ತಿ, ಉತ್ತಮ ಫಲಿತಾಂಶಗಳು ಗೋಚರಿಸುತ್ತವೆ. ಕರ್ಕಾಟಕ ರಾಶಿಯವರಿಗೆ ಆರೋಗ್ಯ ಮತ್ತು ಆರ್ಥಿಕವಾಗಿ ಉತ್ತಮವಾಗಿದ್ದರೂ, ಚಂಚಲತೆ ಮತ್ತು ಕೋಪ ಹೆಚ್ಚಾಗಿರಬಹುದು.ಸಿಂಹ ರಾಶಿಯವರಿಗೆ ಕುಟುಂಬ ಕಲಹಗಳು, ಖರ್ಚು ಹೆಚ್ಚಾಗುವ ಸಾಧ್ಯತೆಯಿದೆ, ಎಚ್ಚರಿಕೆ ಅಗತ್ಯ.ಕನ್ಯಾಸ ರಾಶಿಯವರಿಗೆ ಆರ್ಥಿಕವಾಗಿ ಉತ್ತಮವಾಗಿದೆ, ಹೊಸ ಯೋಜನೆಗಳಿಗೆ ಮನ್ನಣೆ ಸಿಗಲಿದೆ ಎಂದು ಡಾ. ಬಸವರಾಜ್ ಗುರೂಜಿ.