
ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಫೆಬ್ರವರಿ 11, ಬುಧವಾರದ ದ್ವಾದಶ ರಾಶಿಗಳ ಫಲಗಳನ್ನು ವಿವರಿಸಿದ್ದಾರೆ. ಈ ದಿನ ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಮಾಘ ಮಾಸ, ಶಿಶಿರ ಋತು, ಕೃಷ್ಣ ಪಕ್ಷ, ನವಮಿ, ಅನುರಾಧ ನಕ್ಷತ್ರ, ವ್ಯಾಗತ ಯೋಗ ಮತ್ತು ಗರಜ ಕರಣ ಇರತಕ್ಕಂತಹ ಈ ದಿನದ ಗ್ರಹಗಳ ಸ್ಥಿತಿ ಹಾಗೂ ರಾಹು ಕಾಲ ಮತ್ತು ಶುಭಕಾಲದ ವಿವರಗಳನ್ನು ತಿಳಿಸಲಾಗಿದೆ.
ಈ ದಿನ ರವಿ ಗ್ರಹವು ಮಕರ ರಾಶಿಯಲ್ಲಿ ಮತ್ತು ಚಂದ್ರ ಗ್ರಹವು ವೃಶ್ಚಿಕ ರಾಶಿಯಲ್ಲಿ ಸಂಚರಿಸುತ್ತಿದೆ. ಮೇಷ ರಾಶಿಯವರಿಗೆ ನಾಲ್ಕು ಗ್ರಹಗಳ ಶುಭಫಲವಿದ್ದು, ಕೌಶಲ್ಯದಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಆರ್ಥಿಕ ಪ್ರಗತಿ, ವ್ಯಾಪಾರದಲ್ಲಿ ಲಾಭ, ಗಣ್ಯರ ಹಾಗೂ ಸಹಕಾರ ದೊರೆಯಲಿದೆ. ರಾಜಕೀಯ ಪ್ರಗತಿ, ಅನಿರೀಕ್ಷಿತ ಧನಯೋಗ ಹಾಗೂ ಆಕಸ್ಮಿಕ ಪ್ರಯಾಣ ಯೋಗವಿರುತ್ತದೆ. ಮಹಿಳೆಯರು, ರೈತರು, ವಿದ್ಯಾರ್ಥಿಗಳು ಮತ್ತು ಸಾರಿಗೆ ವ್ಯವಹಾರದವರಿಗೆ ಶುಭ ದಿನ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.