
ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮಾರ್ಚ್ 4, ಬುಧವಾರದ ದ್ವಾದಶ ರಾಶಿಗಳ ಫಲಗಳನ್ನು ವಿವರಿಸಿದ್ದಾರೆ. ಈ ದಿನ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಫಾಲ್ಗುಣ ಮಾಸ, ಶಿಶಿರ ಋತು, ಕೃಷ್ಣಪಕ್ಷ, ಪಾಡ್ಯ, ಪುಬ್ಬ ನಕ್ಷತ್ರ, ಧೃತಿ ಯೋಗ ಮತ್ತು ಕವಲವಕರಣ ಇರುತ್ತದೆ. ರವಿ ಕುಂಭ ರಾಶಿಯಲ್ಲಿ ಮತ್ತು ಚಂದ್ರ ಸಿಂಹ ರಾಶಿಯಲ್ಲಿ ಸಂಚಾರ ಮಾಡಲಿದ್ದಾರೆ.
ಇಂದು ಹೋಳಿ, ರಾಷ್ಟ್ರೀಯ ಸುರಕ್ಷತಾ ದಿನ ಹಾಗೂ ವಸಂತೋತ್ಸವದ ಆರಂಭವಾಗಿದೆ. ಬಾಗೂರು ಪ್ರಸನ್ನ ಚನ್ನಕೇಶವರಥ ಮತ್ತು ಹೊಳೆನರಸೀಪುರ ಲಕ್ಷ್ಮೀನರಸಿಂಹ ಸ್ವಾಮಿಗಳ ರಥೋತ್ಸವಗಳು ನಡೆಯಲಿವೆ. ಪ್ರತಿಯೊಂದು ರಾಶಿಗೂ ಗ್ರಹಗಳ ಶುಭಫಲ, ಆರೋಗ್ಯ, ಆರ್ಥಿಕ ಸ್ಥಿತಿ, ವೃತ್ತಿ ಪ್ರಗತಿ, ವೈವಾಹಿಕ ವಿಷಯಗಳು, ಲಾಭ, ಹೂಡಿಕೆ ಹಾಗೂ ಕಾನೂನು ವಿಷಯದ ಕುರಿತು ಗುರುಜಿ ವಿವರಣೆ ನೀಡಲಾಗಿದೆ.