
<p>Darshan Wife Vijayalakshmi: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಈಗ ಜೈಲಿನಲ್ಲಿದ್ದಾರೆ. ಇತ್ತ ಇವರ ಪತ್ನಿ ವಿಜಯಲಕ್ಷ್ಮೀ ಅವರು ಪತಿಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಇಂದು ಅವರು ಮೈಸೂರಿನಲ್ಲಿ ಕುಟುಂಬದ ಜೊತೆ ಸಮಯ ಕಳೆದಿದ್ದಾರೆ. ಇದಕ್ಕೂ ಕೂಡ ನಿಖರವಾದ ಕಾರಣವಿದೆ.</p><p> </p><img><p>ನಟ ದರ್ಶನ್ ತೂಗುದೀಪ ಅವರು ಪರಪ್ಪನ ಅಗ್ರಹಾರದಲ್ಲಿದ್ದಾರೆ. ಪತಿಯ ಅನುಪಸ್ಥಿತಿಯಲ್ಲಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಇತ್ತ ಇವರ ಸಹೋದರ ದಿನಕರ್ ತೂಗುದೀಪ ಜನ್ಮದಿನವನ್ನು ಆಚರಿಸಿದ್ದಾರೆ.</p><img><p>ಹೌದು, ಇಂದು ನಿರ್ದೇಶಕ ದಿನಕರ್ ತೂಗುದೀಪ ಅವರ ಜನ್ಮದಿನ. ದರ್ಶನ್ ಅವರು ಜೈಲಿನಲ್ಲಿದ್ದಾರೆ, ಈಗ ದಿನಕರ್ ಮನೆಗೆ ಬಂದು ವಿಜಯಲಕ್ಷ್ಮೀ ಅವರು ಜನ್ಮದಿನ ಆಚರಿಸಿದ್ದಾರೆ ಎಂದು ಕಾಣುತ್ತಿದೆ.</p><img><p>ಈ ಸಂದರ್ಭದಲ್ಲಿ ಮೀನಾ ತೂಗುದೀಪ, ದಿನಕರ್ ತೂಗುದೀಪ ಹಾಗೂ ಅವರ ಪತ್ನಿ ಕೂಡ ಇದ್ದರು. ಬಹುಶಃ ಮೈಸೂರಿನಲ್ಲಿರುವ ಮೀನಾ ಮನೆಯಲ್ಲಿ ಈ ಜನ್ಮದಿನ ಆಚರಣೆ ಆದಂತಿದೆ.</p><img><p>ಸದ್ಯ ನಟ ದರ್ಶನ್ ಅವರನ್ನು ಹೊರಗಡೆ ಕರೆದುಕೊಂಡು ಬರುವಲ್ಲಿ, ‘ದಿ ಡೆವಿಲ್’ ಸಿನಿಮಾದ ಪ್ರಚಾರ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆಯೂ ಮೈದುನನ ಜನ್ಮದಿನವನ್ನು ಆಚರಿಸಿದ್ದಾರೆ. ಈ ವೇಳೆ ಕುಟುಂಬ ಒಟ್ಟಿಗೆ ಸೇರಿದೆ.</p><img><p>ನಟ ದರ್ಶನ್ ಅವರು ಜೈಲಿನಿಂದ ಹೊರಗಡೆ ಇದ್ದಿದ್ದರೆ, ದಿನಕರ್ ಜನ್ಮದಿನಕ್ಕೆ ಶುಭಾಶಯ ತಿಳಿಸುತ್ತಿದ್ದರು, ಈಗ ಅವರ ಅನುಪಸ್ಥಿತಿಯಲ್ಲಿ ಅತ್ತಿಗೆಯಾಗಿ ವಿಜಯಲಕ್ಷ್ಮೀ ಅವರು ಬರ್ತ್ಡೇ ಸೆಲೆಬ್ರೇಟ್ ಮಾಡಿರೋದು ವಿಶೇಷ.</p>
Source link
Vijayalakshmi Darshan: ಜೈಲಿನಲ್ಲಿ ನಟ ದರ್ಶನ್; ಇತ್ತ ಕರ್ತವ್ಯ ಮರೆಯದ ಪತ್ನಿ, 'ತೂಗುದೀಪ' ಸೊಸೆ ವಿಜಯಲಕ್ಷ್ಮೀ!