ಸೀರಿಯಲ್​ ನಾಯಕಿಯರು ಭಾರಿ ಸಂಕಷ್ಟದಲ್ಲಿ! ದೀಪಾ, ನಿಧಿ ಆಯ್ತು ಈಗ ಭಾರ್ಗವಿಯೂ ಜೈಲಿಗೆ- ಏನಾಗ್ತಿದೆ ಇಲ್ಲಿ? ​ | Deepa Nidhi And Now Bhagavi Arrested In Kannada Serials Suc

ಸೀರಿಯಲ್​ ನಾಯಕಿಯರು ಭಾರಿ ಸಂಕಷ್ಟದಲ್ಲಿ! ದೀಪಾ, ನಿಧಿ ಆಯ್ತು ಈಗ ಭಾರ್ಗವಿಯೂ ಜೈಲಿಗೆ- ಏನಾಗ್ತಿದೆ ಇಲ್ಲಿ? ​ | Deepa Nidhi And Now Bhagavi Arrested In Kannada Serials Suc


17

ಭಾರ್ಗವಿ ಅರೆಸ್ಟ್​!

Image Credit : Instagram

ಭಾರ್ಗವಿ ಅರೆಸ್ಟ್​!

ಸದ್ಯ ಕಲರ್ಸ್​ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಭಾರ್ಗವಿ ಎಲ್​ಎಲ್​ಬಿ (Bhargavi LLB) ಸೀರಿಯಲ್​ನಲ್ಲಿ ಕೊ*ಲೆಯಾಗಿರುವ ಸಂಧ್ಯಾಗೆ ನ್ಯಾಯ ಕೊಡಿಸಲು ಹೋಗಿ ಭಾರ್ಗವಿನೇ ಜೈಲುಪಾಲಾಗಿದ್ದಾಳೆ. ಸಂಧ್ಯಾ ಕೋರ್ಟ್​ ಮುಂದೆ ಪ್ರತ್ಯಕ್ಷಳಾಗಿ ಭಾರ್ಗವಿ ವಿರುದ್ಧವೇ ಸುಳ್ಳು ಆರೋಪ ಮಾಡಿರುವ ಕಾರಣ, ಭಾರ್ಗವಿಯನ್ನು ಜೈಲಿಗೆ ಸೇರಿಸಲಾಗಿದೆ.

27

ಭಾರ್ಗವಿ ಅಲ್ಲೋಲ ಕಲ್ಲೋಲ

Image Credit : Instagram

ಭಾರ್ಗವಿ ಅಲ್ಲೋಲ ಕಲ್ಲೋಲ

ಈಕೆ ಫೇಕ್​ ಸಂಧ್ಯಾ ಎನ್ನುವುದು ವೀಕ್ಷಕರಿಗೆ ತಿಳಿದಿದೆ. ಅದನ್ನು ಸಾಬೀತು ಮಾಡಲು ಇನ್ನಷ್ಟು ವರ್ಷಗಳು ಬೇಕಾಗುವ ಕಾರಣ, ಸದ್ಯ ಭಾರ್ಗವಿ ಸ್ಥಿತಿ ಅಲ್ಲೋಲ ಕಲ್ಲೋಲವಾಗಿದೆ. ವಿಲನ್​ ಆಗಿರೋ ಅಕ್ಕ ಬೃಂದಾ ಮತ್ತು ಮಾವ ಪಾಟೀಲನ ಕೈ ಮೇಲಾಗಿದೆ.

37

ನಿಧಿ ಜೈಲುಪಾಲು

Image Credit : Instagram

ನಿಧಿ ಜೈಲುಪಾಲು

ಇದು ಭಾರ್ಗವಿ ಸ್ಟೋರಿಯಾದರೆ, ಅತ್ತ ಜೀ ಕನ್ನಡದ ಕರ್ಣ ಸೀರಿಯಲ್​​ (Karna Serial) ನಲ್ಲಿ ನಿಧಿ ಜೈಲುಪಾಲಾಗಿದ್ದಾಳೆ. ಕುರುಡಿಯೊಬ್ಬಳಿಗೆ ಸಹಾಯ ಮಾಡಲು ಹೋಗಿ ಟ್ರ್ಯಾಪ್​ ಆಗಿದ್ದಾಳೆ. ಕುರುಡಿ ವೇಷದಲ್ಲಿ ಬಂದಿದ್ದ ಮೋಸಗಾತಿಯಿಂದಾಗಿ ನಿಧಿ ಪೊಲೀಸರ ಕೈಯಲ್ಲಿ ರೆಡ್​ಲೈಟ್​ ಏರಿಯಾದಲ್ಲಿ ಸಿಕ್ಕಿಬಿದ್ದಿದ್ದಾಳೆ.

47

ರಮೇಶ್​ ಕುತಂತ್ರ

Image Credit : Instagram

ರಮೇಶ್​ ಕುತಂತ್ರ

ಇದು ವಿಲನ್​ಗಳಾದ ರಮೇಶ್​ ಮತ್ತು ಸಂಜಯ್​ ಮಾಡಿಸಿರುವುದು ಎಲ್ಲರಿಗೂ ತಿಳಿದಿದ್ದರೂ ಸದ್ಯ ನಿಧಿಯನ್ನು ಕಾಪಾಡಲು ಕರ್ಣ ಬಂದಿಲ್ಲ. ಅವಳ ಸ್ಥಿತಿ ಜೈಲಿನಲ್ಲಿ ಶೋಚನೀಯವಾಗಿದೆ.

57

ಅಕ್ಕನಿಂದ ಅರೆಸ್ಟ್​

Image Credit : Instagram

ಅಕ್ಕನಿಂದ ಅರೆಸ್ಟ್​

ಅದಕ್ಕೂ ಮುನ್ನ ಬ್ರಹ್ಮಗಂಟು (Brahmagantu) ಸೀರಿಯಲ್​ನಲ್ಲಿ ದೀಪಾ ಅರೆಸ್ಟ್​ ಆಗಿ ಜೈಲಿಗೆ ಹೋಗಿದ್ದಳು. ಅಲ್ಲಿಯೂ ಮೋಸದಿಂದ ಅವಳನ್ನು ಅರೆಸ್ಟ್​ ಮಾಡಿಸಲಾಗಿತ್ತು.

67

ಸಹಾಯಕ್ಕೆ ಬಂದ ಶ್ರಾವಣಿ

Image Credit : Instagram

ಸಹಾಯಕ್ಕೆ ಬಂದ ಶ್ರಾವಣಿ

ದೀಪಾ ಮತ್ತು ದಿಶಾ ಇಬ್ಬರೂ ಒಬ್ಬರೇ ಎನ್ನೋದನ್ನು ಅರಿತಿರುವ ಆಕೆಯ ಅಕ್ಕ ರೂಪಾ, ಹಣದ ಕಳ್ಳತನದ ಆರೋಪ ಹೊರಿಸಿ ಪೊಲೀಸರಿಗೆ ಕಂಪ್ಲೇಂಟ್​ ಕೊಟ್ಟು ಅರೆಸ್ಟ್ ಮಾಡಿಸಿದ್ದಳು. ಅವಳನ್ನು ಬಿಡಿಸಿಕೊಂಡು ಹೋಗಲು ಶ್ರಾವಣಿ ಸುಬ್ರಹ್ಮಣ್ಯ (Shravani Subrahmanya Serial) ಸೀರಿಯಲ್​ ಶ್ರಾವಣಿ ಬಂದು ಬಿಡಿಸಿಕೊಂಡು ಹೋಗಿದ್ದಾಳೆ.

77

ಗ್ರಹಗತಿ ಚೆನ್ನಾಗಿಲ್ಲ

Image Credit : Instagram

ಗ್ರಹಗತಿ ಚೆನ್ನಾಗಿಲ್ಲ

ಒಟ್ಟಿನಲ್ಲಿ ಚಾನೆಲ್​ಗಳು ಬೇರೆ ಬೇರೆಯಾದರೂ ನಾಯಕಿಯರು ಮಾತ್ರ ಸುಳ್ಳು ಆರೋಪಗಳ ಮೇಲೆ ಅರೆಸ್ಟ್ ಆಗ್ತಿದ್ದಾರೆ. ಯಾಕೋ ನಾಯಕರಿಗೆ ಸದ್ಯ ಗ್ರಹಗತಿ ಚೆನ್ನಾಗಿಲ್ಲ ಎನ್ನಿಸುತ್ತಿದೆ ಎನ್ನುತ್ತಿದ್ದಾರೆ ನೆಟ್ಟಿಗರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.



Source link

Leave a Reply

Your email address will not be published. Required fields are marked *