ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಪರಸ್ಪರ ‘ಥುಳಿಯುವ’ ಸಂಸ್ಕೃತಿ ಹೆಚ್ಚಿದೆ. ಹೊಸ ಸಿನಿಮಾ ಬಿಡುಗಡೆಯ ಸಮಯದಲ್ಲಿ ನಡೆಯುವ ಪತ್ರಿಕಾಗೋಷ್ಠಿಗಳಲ್ಲಿ ಈ ರೀತಿಯ ಮಾತುಗಳು ಸಾಮಾನ್ಯ ಆಗಿಬಿಟ್ಟಿವೆ. ‘ನಮ್ಮ ಸಿನಿಮಾದ ವಿರುದ್ಧ ಪಿತೂರಿ ನಡೆಯುತ್ತಿದೆ, ನಮ್ಮನ್ನು ತುಳಿಯುವ ಪ್ರಯತ್ನ ನಡೆಯುತ್ತಿದೆ’ ಎಂಬ ಮಾತುಗಳು ಪದೇ ಪದೇ ಕೇಳಲು ಸಿಗುತ್ತಿವೆ. ಇದು ಸತ್ಯವೋ ಅಥವಾ ತಾವು ಸಂತ್ರಸ್ತರು ಎಂದು ತೋರಿಸಿಕೊಂಡು ಸಿಂಪತಿ ಗಿಟ್ಟಿಸಿಕೊಳ್ಳುವ ಪ್ರಯತ್ನವೋ ತಿಳಿಯದು. ಇದೀಗ ಧನ್ವೀರ್ ಗೌಡ ಅವರು ಸಹ ಇಂಥಹುದೇ ಮಾತುಗಳನ್ನಾಡಿದ್ದಾರೆ.
ಧನ್ವೀರ್ ನಟನೆಯ ‘ಹಯಗ್ರೀವ’ ಸಿನಿಮಾ ನಿನ್ನೆ ಸಂಜೆ ಬಿಡುಗಡೆ ಆಗಿದೆ. ತಾಂತ್ರಿಕ ಕಾರಣಗಳಿಂದ ಸಿನಿಮಾದ ಮೊದಲೆರಡು ಶೋಗಳು ರದ್ದಾಗಿದ್ದವು, ಸಂಜೆ ವೇಳೆಗೆ ಸಿನಿಮಾ ರಿಲೀಸ್ ಆಯ್ತು. ಮೊದಲ ದಿನ ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ನಿನ್ನೆ ಚಿತ್ರಮಂದಿರದ ಭೇಟಿ ವೇಳೆ ಮಾತನಾಡಿದ ಧನ್ವೀರ್ ಗೌಡ, ತಮ್ಮ ಸಿನಿಮಾದ ವಿರುದ್ಧ ಪಿತೂರಿ ಕಾಣಿಸಿಕೊಂಡಿದ್ದಾರೆ, ಅಂಥಹವರಿಂದಲೇ ತಮ್ಮ ಸಿನಿಮಾದ ಮೊದಲ ಎರಡು ಶೋಗಳು ರದ್ದಾಗಿವೆ ಎಂದು ಹೇಳಿದರು.
‘ಹಯಗ್ರೀವ’ ಸಿನಿಮಾದ ನಿರ್ಮಾಪಕರು ಇತ್ತೀಚೆಗೆ ಮಾತನಾಡಿ, ತಮ್ಮ ಸಿನಿಮಾದ ವಿರುದ್ಧ ನೆಗೆಟಿವ್ ಪ್ರಚಾರ ಮಾಡಲೇಬೇಕು ವಾಟ್ಸ್ ಆಫ್ ಗ್ರೂಪ್ ರಚಿಸಲಾಗಿದೆ ಎಂದಿದ್ದರು. ಈ ಬಗ್ಗೆಯೂ ಮಾತನಾಡಿದ ಧನ್ವೀರ್, ಪರೋಕ್ಷವಾಗಿ ಟಾಂಗ್ ನೀಡುತ್ತಾ, ‘ನಮ್ಮ ಮೇಲೆ ಲವ್ ಜಾಸ್ತಿ ಆಗಿದೆ. ಆದರೆ ನಮ್ಮ ಪ್ರೀತಿಯನ್ನು ನಾವು ಮುಂದಿನ ದಿನಗಳಲ್ಲಿ ತೋರಿಸ್ತೀವಿ’ ಎಂದು ಡೈಲಾಗ್ ಹೊಡೆದರು.
ಇದನ್ನೂ ಓದಿ:’ದರ್ಶನ್ ಕೇಸಲ್ಲಿ ನೀನು ತಲೆ ತೂರಿಸಬೇಡ’: ಧನ್ವೀರ್ ಗೌಡಗೆ ಪೊಲೀಸ್ ವಾರ್ನಿಂಗ್
‘ಥುಳಿಯುವ ಪ್ರಯತ್ನ ಮಾಡುತ್ತಿದ್ದಾರೆ, ಆದರೆ ಆ ದೇವರು ನಮ್ಮನ್ನು ಬಿಟ್ಟರೆ ಇನ್ಯಾರೂ ಸಹ ತುಳಿಯಲು ಆಗಲ್ಲ’ ಎಂದ ಧನ್ವೀರ್ ಗೌಡ, ಮುಂದಿನ ದಿನಗಳಲ್ಲಿ ವಿಶೇಷ ಪತ್ರಿಕಾಗೋಷ್ಠಿ ಮಾಡಿ, ತಮ್ಮ ಸಿನಿಮಾದ ವಿರುದ್ಧ ತಮ್ಮ ವಿರುದ್ಧ ನಡೆದ ಪಿತೂರಿಯ ಪೂರ್ಣ ಮಾಹಿತಿ ಹಂಚಿಕೊಳ್ಳಲು ಸಹ ಹೇಳಿದರು.
‘ಹಯಗ್ರೀವ’ ಸಿನಿಮಾದಲ್ಲಿ ಧನ್ವೀರ್ ಜೊತೆಗೆ ಸಂಜನಾ ಆನಂದ್ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾದಲ್ಲಿ ಗಿಲ್ಲಿ ನಟ ಹಾಸ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ರಘುಕುಮಾರ್, ಸಿನಿಮಾದಲ್ಲಿ ಧನ್ವೀರ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ಪಾತ್ರಕ್ಕಾಗಿ ಅವರು ಸಿಕ್ಸ್ಪ್ಯಾಕ್ ಸಹ ಮಾಡಿದ್ದರಂತೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ