ಮಂಗಳೂರು, (ಡಿಸೆಂಬರ್ 10): ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಅಂತಾ ಬಂದಿದ್ದ ಚಿನ್ನಯ್ಯ ಬೇಲ್ ಸಿಕ್ಕರೂ ಜೈಲಿನಲ್ಲೇ ಇದ್ದಾನೆ. ಮತ್ತೊಂದ್ಕಡೆ ನವೆಂಬರ್ 20 ರಂದು ಎಸ್ಐಟಿ 3923 ಪುಟಗಳ ತನಿಖಾ ವರದಿಯನ್ನ ಬೆಳ್ತಂಗಡಿಯ ಹೆಚ್ಚುವರಿ ಸಿವಿಲ್ ಕೋರ್ಟ್ಗೆ ಸಲ್ಲಿಸಿದೆ.. ವರದಿಯಲ್ಲಿ ಧರ್ಮಸ್ಥಳದ ವಿರುದ್ಧ ಬುರುಡೆ ಗ್ಯಾಂಗ್ ನಡೆಸಿದ್ದಾರೆ ಅಂತಾ ಷಡ್ಯಂತ್ರ ಬಯಲಾಗಿದೆ. ದೃಢಪಟ್ಟಿದೆ.
ಇನ್ನು ಈ ಬುರಡೆ ಗ್ಯಾಂಗ್, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಭೇಟಿ ಮಾಡಿ ಇದೀಗ ಬಯಲಾಗಿದೆ. ಮಹೇಶ್ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ವಿಠ್ಠಲ ಗೌಡ ಭೇಟಿ ವೇಳೆ ಸ್ವಾಮೀಜಿ ಬಳಿ ಬುರುಡೆ ಕಥೆ ಹೇಳಿದರು. ಜೊತೆಗೆ ಮೇಲೆ ಒತ್ತಡ ಹೇರಲು ಶ್ರೀಗಳಿಗೆ ಮನವಿ ಮಾಡಿರುವುದಾಗಿ ಗೊತ್ತಾಗಿದ್ದು, ಸ್ವಾಮೀಜಿ ಭೇಟಿ ಮಾಡಿರುವ ಫೋಟೋ ಸಹ ಲಭ್ಯವಾಗಿದೆ.