
ವಿಡಿಯೋದಲ್ಲಿ ಕಾಣಿಸಿದ ಪ್ರಮುಖ ಅಂಶಗಳು
ಈ ವಿಡಿಯೋದಲ್ಲಿ ಜಯಂತ್ ಎಂಬಾತನು ಬಂಗ್ಲೆಗುಡ್ಡೆಯ ಮೇಲ್ಬಾಗದಲ್ಲೇ ಬಿದ್ದಿದ್ದ ಬುರುಡೆಯನ್ನು ಎತ್ತಿ ತರುತ್ತಿರುವುದು ಕಾಣಿಸಿದೆ.
ವಿಡಿಯೋವನ್ನು ಕಾಡು ಪ್ರದೇಶದಲ್ಲಿ ಶೂಟ್ ಮಾಡಲಾಗಿದ್ದು, ಮರಕ್ಕೆ ಸೀರೆ ಬಿಗಿದ ಸ್ಥಳದ ಪಕ್ಕದಲ್ಲೇ ಬುರುಡೆ ಪತ್ತೆಯಾದ ದೃಶ್ಯ ದಾಖಲಾಗಿದೆ.
ಜಯಂತ್ ತನ್ನ ಕೈಯಲ್ಲಿದ್ದ ಕತ್ತಿಯ ಸಹಾಯದಿಂದ ಬುರುಡೆಯನ್ನು ಎತ್ತಿ ತರುತ್ತಿರುವುದು ಸ್ಪಷ್ಟವಾಗಿ ವಿಡಿಯೋದಲ್ಲಿ ಕಾಣುತ್ತದೆ.
ಧರ್ಮಸ್ಥಳ ಭಾಗದಲ್ಲೇ ಈ ಬುರುಡೆ ಸಿಕ್ಕಿರುವ ಸಾಧ್ಯತೆ ಇದೆ ಎಂಬ ಅನುಮಾನಗಳು ಮತ್ತಷ್ಟು ಬಲಗೊಂಡಿವೆ.
ಈ ವಿಡಿಯೋ ಹೊರಬಂದ ನಂತರ, ಬುರುಡೆ ನಿಜವಾಗಿಯೂ ಕಾಡಿನಿಂದಲೇ ತಂದು ಇರಿಸಲಾಗಿದೆ ಎಂಬ ಅಂಶ ತನಿಖೆಗೆ ಹೊಸ ತಿರುವು ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವಾರು ಶಂಕೆಗಳು ವ್ಯಕ್ತವಾಗಿದ್ದರೆ, ಈ ದೃಶ್ಯಾವಳಿ ತನಿಖಾ ಅಧಿಕಾರಿಗಳಿಗೆ ಮತ್ತಷ್ಟು ಆಧಾರ ಒದಗಿಸಿದೆ.