‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಲ್ಲಿ ಧ್ರುವಂತ್ (ಧ್ರುವಂತ್) ಅವರು ಅನೇಕರ ವಿರೋಧ ಕಟ್ಟಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಅವರು ಅಶ್ವಿನಿ ಗೌಡ ಮತ್ತು ಜಾಹ್ನವಿ ಹೆಚ್ಚು ಕಾಲ ಕಳೆಯುತ್ತಿದ್ದರು. ಆದರೆ ಕಳೆದ ವಾರದಿಂದ ಅಶ್ವಿನಿ ಗೌಡ (ಅಶ್ವಿನಿ ಗೌಡ) ಜೊತೆ ಧ್ರುವಂತ್ ಕಿರಿಕ್ ಶುರುವಾಗಿದೆ. ಈಗ ಅವರು ಗಿಲ್ಲಿ ನಟರೊಂದಿಗೆ ಒಂದು ವಿಷಯವನ್ನು ಚರ್ಚಿಸಿದ್ದಾರೆ. ಎಷ್ಟು ಜಗಳ ಆದರೂ ಅಶ್ವಿನಿ ಗೌಡ ಅವರನ್ನು ಜಾಹ್ನವಿ ಯಾಕೆ ಬಿಟ್ಟುಕೊಡುತ್ತಿಲ್ಲ ಎಂದು ಧ್ರುವಂತ್ ವಿವರಿಸಿದ್ದಾರೆ. ಅಶ್ವಿನಿ ಗೌಡ ಅವರ ದುಡ್ಡಿಗಾಗಿ ಜಾಹ್ನವಿ (ಗಿಲ್ಲಿ ನಾಟಾ) ಈ ರೀತಿ ಮಾಡುತ್ತಿದ್ದಾರೆ ಎಂಬ ಅರ್ಥ ಬರುವ ರೀತಿಯಲ್ಲಿ ಧ್ರುವಂತ್ ಮಾತನಾಡುತ್ತಾರೆ.
ಬಿಗ್ ಬಾಸ್ ಮನೆಯಲ್ಲಿ 56ನೇ ದಿನ ಗಿಲ್ಲಿ ನಟನ ಜೊತೆ ಧ್ರುವಂತ್ ಈ ರೀತಿ ಚರ್ಚಿಸಿದ್ದಾರೆ. ‘ಜಾಹ್ನವಿ ಅವರಷ್ಟು ಸ್ಮಾರ್ಟ್ ಯಾರೂ ಇಲ್ಲ. ನಾವು ಆಲೋಚನೆ ಮಾಡುತ್ತಿರುವುದು ಬರೀ ಮನೆಯ ಒಳಗಿನ ವಿಷಯ. ಜಾಹ್ನವಿ ದಡ್ಡರಲ್ಲ. ವಿಷಯ ಗೊತ್ತಾಯ್ತಾ ನಿಮಗೆ? ಜಾಹ್ನವಿ ಜಾಣರು, ನಾವು ದಡ್ಡರು’ ಎಂದು ಜಾಹ್ನವಿ ಬಗ್ಗೆ ಧ್ರುವಂತ್ ಅವರ ಮಾತು ಶುರುವಾಯಿತು.
‘ಅಶ್ವಿನಿ ಮೇಡಂ ಸಿಕ್ಕಾಪಟ್ಟೆ ರಾಯಲ್ ಬಿಲ್ಡಪ್ ಕೊಟ್ಟಿದ್ದಾರೆ. ನಾನು ಅಂಥ ದೊಡ್ಡಗಾರ್ತಿ, ನಾನು ಗೋಲ್ಡ ಸ್ಪೂನ್, ನನಗೆ ಅಪ್ಪ ಸಾಕಷ್ಟು ಮಾಡಿ ಇಟ್ಟಿದ್ದೇನೆ, ನನಗೆ ಕಷ್ಟ ಎಂಬುದೇ ಗೊತ್ತಿಲ್ಲ ಅಂತ ಹೇಳಿದ್ದಾರೆ. ಅಲ್ಲೇ ಜಾಹ್ನವಿ ಅವರು ಲೆಕ್ಕಾಚಾರ ಹಾಕಿದ್ದಾರೆ. ಬಿಗ್ ಬಾಸ್ ಇನ್ನು ಒಂದು ತಿಂಗಳು ಇರುತ್ತೆ. ತಾನು ಯಾವಾಗ ಬೇಕಾದರೂ ಹೋಗಬಹುದು. ಹೊರಗೆ ಹೋದಮೇಲೆ ಕಷ್ಟ-ಸುಖಕ್ಕೆ ಒಬ್ಬರು ಬಿಗ್ ಬಾಸ್ ಬೇಕಲ್ಲವಾ? ಇಲ್ಲದೇ ಇದ್ದರೆ ನನಗೆ ಗೊತ್ತಿರುವ ಹಾಗೆ ಅವರು ಅಷ್ಟು ದಡ್ಡರಲ್ಲ’ ಎಂದು ಧ್ರುವಂತ್ ಹೇಳಿದ್ದಾರೆ.
ಜಾಹ್ನವಿ ಅವರ ಬಗ್ಗೆ ಧ್ರುವಂತ್ ಅವರು ಈ ರೀತಿ ಮಾತನಾಡಿದ್ದಾರೆ ಎಂಬುದು ಒಂದು ವೇಳೆ ಬಹಿರಂಗ ಆದರೆ ದೊಡ್ಡ ರಂಪಾಟ ಆಗುವ ಸಾಧ್ಯತೆ ಇದೆ. ಇದೆ. ಮೊದಲಿನಿಂದಲೂ ಜಾಹ್ನವಿ ಮತ್ತು ಅಶ್ವಿನಿ ಗೌಡ ಅವರು ಕ್ಲೋಸ್ ಆಗಿಯೇ ಇಬ್ಬರು. ಒಮ್ಮೆ ತಾವೇ ಪ್ಲ್ಯಾನ್ ಮಾಡಿಕೊಂಡು ಜಗಳ ಆಡಿದ್ದರು. ಆಮಾ ಡ್ರಾ ಹೆಚ್ಚು ದಿನ ನಡೆಯಲಿಲ್ಲ. ಈಗ ಮತ್ತೆ ಜಾಹ್ನವಿ ಮತ್ತು ಅಶ್ವಿನಿ ಗೌಡ ಒಂದಾಗಿದ್ದಾರೆ. ಅವರಿಬ್ಬರ ಸ್ನೇಹವನ್ನು ಧ್ರುವಂತ ಅವರು ಸಮರ್ಥರಾಗಿದ್ದಾರೆ.
ಇದನ್ನೂ ಓದಿ: ಸುದೀಪ್ ಇಲ್ಲದಿದ್ದಾಗ ಬಣ್ಣ ಬದಲಿಸುವ ಅಶ್ವಿನಿ ಗೌಡ: ಮುಖವಾಡ ಕಳಚಿದ ಗಿಲ್ಲಿ ನಟ
ಇನ್ನು, ಧ್ರುವಂತ್ ಬಗ್ಗೆ ಅಶ್ವಿನಿ ಗೌಡ ಬಳಿ ಜಾಹ್ನವಿ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ಎಲ್ಲರ ಬಗ್ಗೆ ಧ್ರುವಂತ ಗ್ರಹಿಕೆ ಸರಿಯಾಗಿದೆ. ಅವನು ಮಾಸ್ಟರ್ ಮೈಂಡ್. ಬೇರೆಯವರಿಗೆ ಅವನು ಭಿನ್ನವಾಗಿದ್ದಾನೆ. ಬೇರೆಯವರೆಲ್ಲ ಸೇಫ್ ಆಗಿ ಆಡುತ್ತಿದ್ದಾರೆ. ಅವನು ಎಲ್ಲರನ್ನೂ ಎದುರು ಹಾಕಿಕೊಂಡೇ ಆಡುತ್ತಿದ್ದಾನೆ’ ಎಂದು ಜಾಹ್ನವಿ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.