
‘ಧುರಂಧರ 2’ ಸಿನಿಮಾನ ಎಲ್ಲರೂ ಹಾಡಿ ಹೊಗಳುತ್ತಿದ್ದಾರೆ. ರಣವೀರ್ ಸಿಂಗ್ ನಟನೆಯ, ಆದಿತ್ಯ ಧಾರ್ (ಆದಿತ್ಯ ಧರ್) ನಿರ್ದೇಶನದ ಈ ಚಿತ್ರದಲ್ಲಿ ಸಣ್ಣ ವಿಷಯಕ್ಕೂ ಆದಿತ್ಯಧರ್ ಅವರು ಸಾಕಷ್ಟು ಪ್ರಾಮುಖ್ಯತೆ ನೀಡಿದ್ದಾರೆ. ಇದು ಸಿನಿಮಾದಲ್ಲಿ ಸ್ಪಷ್ಟವಾಗಿದೆ. ಈ ಕಾರಣಕ್ಕೆ ಎಲ್ಲರೂ ಆದಿತ್ಯಧರ್ ಅವರನ್ನು ಹೊಗಳುತ್ತಿದ್ದಾರೆ. ಆದರೆ, ಈಗ ಅವರು ಮಾಡಿದ ತಪ್ಪೊಂದು ಎದ್ದು ಕಾಣಿಸಿದೆ.
ಆದಿತ್ಯಧರ್ ಅವರು ಸಣ್ಣ ಸಣ್ಣ ವಿಷಯಗಳನ್ನೂ ಗಮನ ಇಟ್ಟು ಸಿನಿಮಾ ಮಾಡುತ್ತಾರೆ. ಇದೇ ಕಾರಣಕ್ಕೆ ‘ಪೀಕ್ ಡೀಟೇಲಿಂಗ್ ಆಫ್ ಆದಿತ್ಯಧಾರ್’ ಎಂಬ ಚರ್ಚೆ ಆಗುತ್ತಿದೆ. ಅಂದರೆ ಆದಿತ್ಯ ಧಾರ್ ಅವರು ಸಣ್ಣ ಸಣ್ಣ ವಿಷಯವನ್ನು ಹೆಚ್ಚು ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡುತ್ತಾರೆ ಎಂಬುದು ಇದರ ಅರ್ಥ. ಆದಾಗ್ಯೂ ‘ಧುರಂಧರ 2’ ಚಿತ್ರದಲ್ಲಿ ಒಂದು ದೊಡ್ಡ ಎಡವಟ್ಟು ನಡೆದು ಹೋಗಿದೆ. ಈ ವಿಡಿಯೋನ ಸಿನಿಮಾ ನೋಡಿದವರು ವೈರಲ್ ಆಗುತ್ತಿದ್ದಾರೆ.
ಇದನ್ನೂ ಓದಿ: ಕ್ರಿಕೆಟರ್ ಆಗಬೇಕಿದ್ದ ‘ಧುರಂಧರ’ ನಿರ್ದೇಶಕ ಆದಿತ್ಯ ಸಿನಿಮಾ ರಂಗಕ್ಕೆ ಬಂದಿದ್ದು ಹೇಗೆ?
ಹಮ್ಜಾ ಹಾಗೂ ಅವನ ಗೆಳೆಯನ ಮಧ್ಯೆ ಕಿತ್ತಾಟ ನಡೆಯೋ ದೃಶ್ಯ ಇದೆ. ಈ ದೃಶ್ಯ ಪ್ರಸಾರ ಕಾಣುವಾಗ ಕನ್ನಡಿಯಲ್ಲಿ ಕ್ಯಾಮೆರಾಮೆನ್ ಕೂಡ ಕಾಣುತ್ತಾರೆ. ಇದನ್ನು ಆದಿತ್ಯ ಧಾರ್ ನೋಡದೇ ಹೇಗೆ ಮಿಸ್ ಮಾಡಿದರು ಎಂಬ ಪ್ರಶ್ನೆಯನ್ನು ಅನೇಕರು ಕೇಳುತ್ತಿದ್ದರು. ಇನ್ನೂ ಕೆಲವು ಆದಿತ್ಯ ಅವರನ್ನು ಬೆಂಬಲಿಸಿದ್ದಾರೆ.
ಹೌದು, ಗುರುತಿಸಿದೆ!
ಧುರಂಧರ್ನಲ್ಲಿ ಆ ಕನ್ನಡಿ ಪ್ರತಿಫಲನ ಬ್ಲೂಪರ್: ರಿವೆಂಜ್ ಹೊಲಿಗೆಗಳಲ್ಲಿ ಅಭಿಮಾನಿಗಳನ್ನು ಹೊಂದಿದೆ – ಹಂಜಾ ಮತ್ತು ಪಿಂಡು ನಡುವಿನ ತೀವ್ರವಾದ ಹೋರಾಟದ ದೃಶ್ಯದಲ್ಲಿ, ಕ್ಯಾಮರಾಮನ್ (ಅಥವಾ ಸಿಬ್ಬಂದಿ) ಒಂದು ಸೆಕೆಂಡ್ಗೆ ಕನ್ನಡಿಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಾನೆ, “ಬ್ರೋ, ನಾನು… pic.twitter.com/4303Pq5JpJ
– ನಗರ ರಹಸ್ಯಗಳು
(@stiwari1510) ಮಾರ್ಚ್ 21, 2026
ಆದಿತ್ಯ ಧಾರ್ ಅವರಿಂದ ಪೀಕ್ ವಿವರ
ಕ್ಯಾಮರಾಮೆನ್ ಎಂದಿಗೂ ಸಹಾಯ ಮಾಡುವುದಿಲ್ಲ
#ಧುರಂಧರ್2 #ಧುರಂಧರ್ ದ ರಿವೇಂಜ್ pic.twitter.com/jE75M3ry2K
— ಸುನಿಲ್ ಗೋರಿಯಾ (@Sunil_Goriya) ಮಾರ್ಚ್ 21, 2026
‘ಇದು ಆದಿತ್ಯ ಧಾರ್ ಅವರ ಪೀಕ್ ಡೀಟೇಲಿಂಗ್. ಅವರ ತಂಡ ಬಹುಶಃ ಆ್ಯಕ್ಷನ್ ಮೇಲೆ ಗಮನ ಹರಿಸಿತ್ತು’ ಎಂದು ಅವರು ಹೇಳಿದ್ದಾರೆ. ಇನ್ನೂ ಕೆಲವು ಕ್ರಿಸ್ಟೋಫರ್ ನೋಲನ್ ಕೂಡ ತಪ್ಪು ಮಾಡಿದ್ದೆ ಎಂದಿದ್ದರು. ‘ಆದಿತ್ಯ ಧಾರ ಕೂಡ ಮನುಷ್ಯ. ಅವರಿಂದಲೂ ತಪ್ಪಾಗುತ್ತದೆ’ ಎಂದು ಆದಿತ್ಯ ಧಾರ್ ಪರ ಬ್ಯಾಟ್ ಬೀಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.

ಧುರಂಧರ್ನಲ್ಲಿ ಆ ಕನ್ನಡಿ ಪ್ರತಿಫಲನ ಬ್ಲೂಪರ್: ರಿವೆಂಜ್ ಹೊಲಿಗೆಗಳಲ್ಲಿ ಅಭಿಮಾನಿಗಳನ್ನು ಹೊಂದಿದೆ – ಹಂಜಾ ಮತ್ತು ಪಿಂಡು ನಡುವಿನ ತೀವ್ರವಾದ ಹೋರಾಟದ ದೃಶ್ಯದಲ್ಲಿ, ಕ್ಯಾಮರಾಮನ್ (ಅಥವಾ ಸಿಬ್ಬಂದಿ) ಒಂದು ಸೆಕೆಂಡ್ಗೆ ಕನ್ನಡಿಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಾನೆ, “ಬ್ರೋ, ನಾನು…
(@stiwari1510)