Headlines

ಆ ವ್ಯಕ್ತಿ ಇಲ್ಲದೆ ಸಿನಿಮಾ ಅಪೂರ್ಣ; ‘ಧುರಂಧರ್ 2’ ಬಗ್ಗೆ ವೀಕ್ಷಕರ ಅಸಮಾಧಾನ ಏನು?

ಆ ವ್ಯಕ್ತಿ ಇಲ್ಲದೆ ಸಿನಿಮಾ ಅಪೂರ್ಣ; ‘ಧುರಂಧರ್ 2’ ಬಗ್ಗೆ ವೀಕ್ಷಕರ ಅಸಮಾಧಾನ ಏನು?


ಆ ವ್ಯಕ್ತಿ ಇಲ್ಲದೆ ಸಿನಿಮಾ ಅಪೂರ್ಣ; 'ಧುರಂಧರ 2' ಬಗ್ಗೆ ವೀಕ್ಷಕರ ಅಸಮಾಧಾನ ಏನು?

‘ಧುರಂಧರ 2’ ಸಿನಿಮಾ (ಧುರಂಧರ 2 ವಿಮರ್ಶೆ) ವಿಶ್ವಾದ್ಯಂತ ತೆರೆಗೆ ಬಂದಿದೆ. ಮಾರ್ಚ್ 19 ರಂದು ಸಿನಿಮಾ ರಿಲೀಸ್ ಆದರೂ, ಮಾರ್ಚ್ 18 ರಂದು ಚಿತ್ರಕ್ಕೆ ಪ್ರೀಮಿಯರ್ ಶೋಗಳನ್ನು ಇಡಲಾಗಿದೆ. ಈ ಸಿನಿಮಾ ಅಬ್ಬರಿಸಿದೆ. ಈ ಚಿತ್ರವನ್ನು ನೋಡಿದ ಅನೇಕರು ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ. ಈ ಚಿತ್ರದಲ್ಲಿ ಪ್ರಮುಖ ವ್ಯಕ್ತಿ ಕಾಣಿಸಿಕೊಂಡಿಲ್ಲ. ಇದಕ್ಕೆ ವೀಕ್ಷಕರು ಸಾಕಷ್ಟು ಅಸಮಾಧನ ಹೊರಹಾಕಿದ್ದಾರೆ. ಉಳಿದಂತೆ ಸಿನಿಮಾದ ಆ್ಯಕ್ಷನ್ ವಿಷಯ ವೀಕ್ಷಕರಿಗೆ ಇಷ್ಟ ಆಗಿದೆ.

‘ಧುರಂಧರ 2’ ಸಿನಿಮಾ ವಿಶ್ವ ಮಟ್ಟದಲ್ಲಿ ಏಕಕಾಲಕ್ಕೆ ರಿಲೀಸ್ ಆಗಿದೆ. ಆದರೆ, ಕನ್ನಡ, ತೆಲುಗು, ತಮಿಳು ಮೊದಲಾದ ಭಾಷೆಗಳಲ್ಲಿ ಸಿನಿಮಾದ ಪ್ರೀಮಿಯರ್ ಆಗಿಲ್ಲ. ಹಿಂದಿ ವರ್ಷನ್ ನೋಡಿದ ಜನರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ರಣವೀರ್ ಸಿಂಗ್ ಅವರನ್ನು ಬಹುವಾಗಿ ಮೆಚ್ಚಿದ್ದಾರೆ. ಅವರ ಆ್ಯಕ್ಷನ್ ದೃಶ್ಯಗಳು ಗಮನ ಸೆಳೆದಿವೆ.

‘ಧುರಂಧರ’ ಸಿನಿಮಾದಲ್ಲಿ ಅಕ್ಷಯ್ ಖನ್ನಾ ನಟಿಸಿದ್ದರು. ಎರಡನೇ ಭಾಗದಲ್ಲಿ ಅವರು ಫ್ಲ್ಯಾಶ್ ಬ್ಯಾಕ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಅವರು ಒಂದೇ ಒಂದು ದೃಶ್ಯದಲ್ಲಿ ಕಾಣಿಸುವುದಿಲ್ಲ. ಕೇವಲ ಪೋಸ್ಟರ್‌ಗೆ ಮಾತ್ರ ಸೀಮಿತವಾಗಿದೆ. ಇದು ಅಭಿಮಾನಿಗಳಿಗೆ ಬೇಸರ ತರಿಸುತ್ತದೆ. ಅವರು ಇರಬೇಕಿತ್ತು ಎಂದು ಅನೇಕರು ಹೇಳಿದ್ದಾರೆ. ಇನ್ನೂ ಕೆಲವರಿಗೆ ಅಕ್ಷಯ್ ಖನ್ನಾ ಅವರ ಸ್ಥಾನವನ್ನು ಅರ್ಜುನ್ ರಾಮ್ ಪಾಲ್ ತುಂಬಿದ್ದಾರೆ ಎಂದೆನಿಸಿದೆ.

ಇದನ್ನೂ ಓದಿ: ಒಂದು ಸೇಡಿನ ಕಥೆ; ‘ಧುರಂಧರ 2’ ಸಿನಿಮಾ ವಿಮರ್ಶೆ

ರಣವೀರ್ ಸಿಂಗ್ ಅವರ ಆ್ಯಕ್ಷನ್ ಇಷ್ಟ ಆಗಿದೆ. ಹಿಂಸಾತ್ಮಕ ದೃಶ್ಯವನ್ನು ಸಾಕಷ್ಟು ರಾ ಎಂದು ತೋರಿಸಲಾಗಿದೆ ಎಂದು ಕೆಲವರಿಗೆ ಹೇಳಿದ್ದಾರೆ. ಆ್ಯಕ್ಷನ್ ದೃಶ್ಯಗಳನ್ನು ಇಷ್ಟಪಡೋರಿಗೆ ಸಿನಿಮಾ ಹೆಚ್ಚು ಇಷ್ಟ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *