ಪಾಪರಾಜಿಗಳ ವರ್ತನೆ ವಿರುದ್ಧ ಕನ್ನಡ ಚಿತ್ರರಂಗ (ಕನ್ನಡ ಚಲನಚಿತ್ರೋದ್ಯಮ) ಗರಂ ಆಗಿದೆ. ನಟಿಯರ ದೇಹದ ಭಾಗಗಳನ್ನು ಅಸಭ್ಯ ರೀತಿಯಲ್ಲಿ ಚಿತ್ರಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವವರಿಗೆ ಎಚ್ಚರಿಕೆ ನೀಡಲಾಗಿದೆ. ಈ ಬಗ್ಗೆ ಅನೇಕ ಸೆಲೆಬ್ರಿಟಿಗಳು ಧ್ವನಿ ಎತ್ತಿದ್ದಾರೆ. ಹಿರಿಯ ನಿರ್ದೇಶಕ ಎಸ್. ನಾರಾಯಣ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಕಲಾವಿದರನ್ನು ಗೌರವದಿಂದ ಕಾಣಬೇಕು. ಚೌಕಟ್ಟನ್ನು ಮೀರಿ ಯಾರೂ ಹೊರಗೆ ಬರಬಾರದು. ಸೋಶಿಯಲ್ ಮೀಡಿಯಾ ಅತಿರೇಕಕ್ಕೆ ಹೋಗುತ್ತಿದೆ. ಪ್ರತಿಯೊಬ್ಬರಿಗೂ ಮಾನ, ಮರ್ಯಾದೆ, ಗೌರವ ಇರುತ್ತದೆ. ಅದನ್ನು ಅವರು ಗಳಿಸಿದ್ದಾರೆ, ಕೊಂಡುಕೊಂಡಿರಲ್ಲ. ಅದನ್ನು ಗಳಿಸಲು ಪರಿಶ್ರಮ, ತ್ಯಾಗ ಇರುತ್ತದೆ. ಅದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು’ ಎಂದು ಎಸ್. ನಾರಾಯಣ್ (ಎಸ್ ನಾರಾಯಣ) ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.