ಹಾಸನ, ನವೆಂಬರ್ 24: ಶಿರಾಡಿ ಘಾಟ್ (ಶಿರಾಡಿ ಘಾಟ್) ರಾಷ್ಟ್ರೀಯ ಹೆದ್ದಾರಿ 75 ರ ಪ್ರಯಾಣಿಕರ ಸಂಕಷ್ಟ, ಗೋಳು ಮುಗಿಯುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಮಳೆಗಾಲದಲ್ಲಿ ಭೂ ಕುಸಿತದ ಭಯ, ಬೇಸಿಗೆಯಲ್ಲಿ ಹೊಂಡ ಗುಂಡಿಗಳ ಆತಂಕ. ಎಂಟು ವರ್ಷ ಕಳೆದರೂ ಪೂರ್ಣಗೊಳ್ಳದ ಕಾಮಗಾರಿ. ಸಹಾಯಕ ಧೂಳುಮಯ ರಸ್ತೆಯಲ್ಲಿ ವಾಹನ ಸವಾರರು ಪರದಾಡಿದ್ದಾರೆ. ರಾಜ್ಯದ ರಾಜಧಾನಿ ಬೆಂಗಳೂರು ಹಾಗೂ ನಗರ ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ, ನಿತ್ಯವೂ 25 ಸಾವಿರಕ್ಕೂ ಅಧಿಕ ಸಂಖ್ಯೆಯ ವಾಹನಗಳು ಸಂಚರಿಸುವ ರಾಜ್ಯದ ಜೀವನಾಡಿ ರಸ್ತೆಗೆ ಕರೆಸಿಕೊಳ್ಳುವ ಶಿರಾಡಿ ಘಾಟ್ ಮಾರ್ಗದ ರಾಷ್ಟ್ರೀಯ ಹೆದ್ದಾರಿ 75ರ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಹಾಸನದಿಂದ (ಹಾಸನ) ಬೆಂಗಳೂರು ನಡುವಿನ ಚತುಷ್ಪತ ರಸ್ತೆ ಕಾಮಗಾರಿ ಮುಗಿದು ದಶಕವೇ ಕಳೆದಿದೆ. ಆದರೆ, ಸಕಲೇಶಪುರ ತಾಲೂಕಿನ ಶಿರಾಡಿ ಘಾಟ್ ವ್ಯಾಪ್ತಿಯ ಮಾರನಹಳ್ಳಿ 45 ಕಿಲೋಮೀಟರ್ ರಸ್ತೆ ಕಾಮಗಾರಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ.
ಸದ್ಯ ಹಾಸನದಿಂದ ಸಕಲೇಶಪುರದ ಕಾಮಗಾರಿ ಮುಗಿದಿದೆ. ಆದರೆ ಸಕಲೇಶಪುರದಿಂದ ಮಾರನಹಳ್ಳಿ ಕಾಮಗಾರಿಗೆ ನೂರೆಂಟು ವಿಘ್ನಗಳು. ಮಳೆಗಾಲದಲ್ಲಿ ಮಳೆ ನೆಪವೊಡ್ಡಿ ಕಾಮಗಾರಿ ವಿಳಂಬವಾಗುತ್ತಿರುವ ಅಧಿಕಾರಿಗಳು ಮಳೆ ನಿಂತ ಮೇಲಾದರೂ ಕಾಮಗಾರಿ ಚುರುಗೊಳಿಸುತ್ತಿಲ್ಲ. ಸದ್ಯದಲ್ಲಿ ಅಲ್ಲಲ್ಲಿ ಸ್ವಲ್ಪ ಕಾಮಗಾರಿ ನಡೆಯುತ್ತಿದೆ. ದೊಡ್ಡ ದೊಡ್ಡ ಹೊಂಡ ಗುಂಡಿಗಳ ನಡುವೆ ಸವಾರರು ಪರದಾಡುತ್ತಾ ಧೂಳುಮಯವಾದ ರಸ್ತೆಯಲ್ಲಿ ಪ್ರಯಾಣ ಮಾಡುತ್ತಾ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

ಬಂದರು ನಗರ ಮಂಗಳೂರು ಮತ್ತು ರಾಜಧಾನಿ ನಡುವೆ ವ್ಯಾಪಾರ ವಾಣಿಜ್ಯಸರಕು ಸಾಗಣೆ, ಜೊತೆಗೆ ಎರಡೂ ಕಡೆಯಿಂದ ಅಪಾರ ಸಂಖ್ಯೆಯ ಜನರ ಸಂಚಾರವೂ ಇದೆ. ಜೊತೆಗೆ ರಾಜ್ಯದ ಪ್ರಸಿದ್ದ ಧಾರ್ಮಿಕ ಕ್ಷೇತ್ರಗಳಾದ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಗಳಿಗೆ ನಿತ್ಯವೂ ಸಹಸ್ರಾರು ಜನರು ಭೇಟಿ ನೀಡುತ್ತಾರೆ. ಸರ್ಕಾರವೇನೋ ಎಂಟು ವರ್ಷಗಳ ಹಿಂದೆ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿತ್ತು. ಆದರೆ ಕಾಮಗಾರಿ ಮಾತ್ರ ಇನ್ನೂ ಮುಗಿದಿಲ್ಲ.
ಇದನ್ನೂ ಓದಿ: ಇದು ಅಪ್ಪಟ ಕನ್ನಡದ ಅಂಗಡಿ; ಇಲ್ಲಿ ಸಿಗೋ ವಸ್ತುಗಳೆಲ್ಲ ಹಳದಿ, ಕೆಂಪು ಬಣ್ಣದ್ದೇ
ಒಟ್ಟಿನಲ್ಲಿ ಮಳೆಗಾಲದಲ್ಲಿ ಸರಣಿ ಭೂ ಕುಸಿತದಿಂದ ಗಮನ ಸೆಳೆಯುವ ಶಿರಾಡಿ ಘಾಟ್ ರಸ್ತೆ, ಮಳೆ ನಿಂತಮೇಲೂ ಪ್ರಯಾಣಿಕರಿಗೆ ಇನ್ನಿಲ್ಲದ ಕಿರಿಕಿರಿ ಉಂಟಾಗುತ್ತಿದೆ. ಪ್ರತೀ ವರ್ಷ ಜೂನ್, ಡಿಸೆಂಬರ್ ಎಂದು ಗಡುವು ನಿಗದಿ ಮಾಡಲಾಗುತ್ತಿದೆ. ಆದರೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನಿರ್ಲಕ್ಷ್ಯ ಪ್ರಯಾಣಿಕರ ಪಾಲಿಕೆ ನರಕಮಯ ಪ್ರಯಾಣ ಬದಲಾಗಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ