ತಿರುಮಲ ಭಕ್ತರಿಗೆ ಗುಡ್ ನ್ಯೂಸ್; ತಿರುಪತಿ ಸುತ್ತಮುತ್ತಲಿನ ಸ್ಥಳಗಳ ಭೇಟಿಗೆ ವಿಶೇಷ ಪ್ಯಾಕೇಜ್! ಈ ಅವಕಾಶ ಮಿಸ್ ಮಾಡ್ಕೋಬೇಡಿ

ತಿರುಮಲ ಭಕ್ತರಿಗೆ ಗುಡ್ ನ್ಯೂಸ್; ತಿರುಪತಿ ಸುತ್ತಮುತ್ತಲಿನ ಸ್ಥಳಗಳ ಭೇಟಿಗೆ ವಿಶೇಷ ಪ್ಯಾಕೇಜ್! ಈ ಅವಕಾಶ ಮಿಸ್ ಮಾಡ್ಕೋಬೇಡಿ



ತಿರುಮಲ ಭಕ್ತರಿಗೆ ಗುಡ್ ನ್ಯೂಸ್; ತಿರುಪತಿ ಸುತ್ತಮುತ್ತಲಿನ ಸ್ಥಳಗಳ ಭೇಟಿಗೆ ವಿಶೇಷ ಪ್ಯಾಕೇಜ್! ಈ ಅವಕಾಶ ಮಿಸ್ ಮಾಡ್ಕೋಬೇಡಿ
<p>ತಿರುಪತಿ: ತಿರುಮಲ ಶ್ರೀವಾರಿಯ ದರ್ಶನ ಪಡೆದ ಭಕ್ತರು ತಿರುಪತಿಯ ಸಮೀಪದ ಪ್ರದೇಶಗಳಿಗೆ ಭೇಟಿ ನೀಡುತ್ತಾರೆ. ಆದರೆ, ಸರಿಯಾದ ಮಾಹಿತಿ ಇಲ್ಲದೆ ತೊಂದರೆ ಅನುಭವಿಸುತ್ತಾರೆ. ಅಂತಹವರಿಗಾಗಿಯೇ ಆಂಧ್ರ ಪ್ರದೇಶ ಪ್ರವಾಸೋದ್ಯಮ ಇಲಾಖೆ ಉತ್ತಮ ಪ್ಯಾಕೇಜ್ ಒಂದನ್ನು ತಂದಿದೆ.</p><p>&nbsp;</p><img><p>ದೇಶದ ನಾನಾ ಭಾಗಗಳಿಂದ ತಿರುಮಲಕ್ಕೆ ಬರುವ ಭಕ್ತರು, ತಿರುಪತಿ ಸುತ್ತಮುತ್ತಲಿನ ದೇವಾಲಯಗಳನ್ನು ಒಂದೇ ದಿನದಲ್ಲಿ ನೋಡಲು ಬಯಸುತ್ತಾರೆ. ಆದರೆ ಮಾಹಿತಿ ಕೊರತೆಯಿಂದ ಇದು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಆಂಧ್ರ ಪ್ರದೇಶ ಪ್ರವಾಸೋದ್ಯಮ ಮತ್ತು ಟಿಟಿಡಿ ವಿಶೇಷ ಪ್ಯಾಕೇಜ್‌ಗಳನ್ನು ತಂದಿವೆ.</p><img><p>ಈ ಟೂರ್‌ಗಳಲ್ಲಿ ದೇವಾಲಯ ದರ್ಶನದ ಸಮಯ ಮೊದಲೇ ನಿಗದಿಯಾಗಿರುತ್ತದೆ. ಭಕ್ತರು ಹೆಚ್ಚು ಹೊತ್ತು ಸರತಿ ಸಾಲಿನಲ್ಲಿ ಕಾಯಬೇಕಿಲ್ಲ. ಬಸ್ ಪ್ರಯಾಣದ ವೇಳೆ ದೇವಾಲಯಗಳ ಇತಿಹಾಸ ವಿವರಿಸಲು ಅನುಭವಿ ಗೈಡ್‌ಗಳಿರುತ್ತಾರೆ. ಕಡಿಮೆ ಖರ್ಚಿನಲ್ಲಿ ಒಂದೇ ದಿನ ಹಲವು ದೇವಾಲಯ ನೋಡಬಹುದು.</p><img><p>ಈ ಪ್ಯಾಕೇಜ್‌ನಲ್ಲಿ ಕಾರ್ವೇಟಿನಗರ, ನಾಗಲಾಪುರ, ನಾರಾಯಣವನ, ಅಪ್ಪಲಾಯಗುಂಟ, ನಗರಿ, ಬುಗ್ಗ ಮತ್ತು ಸುರುಟುಪಲ್ಲಿಯಲ್ಲಿರುವ ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡಿ ತಿರುಪತಿಗೆ ವಾಪಸ್ ಬರಬಹುದು. <strong>ಬಸ್ ಸಮಯ: ಬೆಳಗ್ಗೆ 8.30 ರಿಂದ 9.30. ಟಿಕೆಟ್ ದರ: ಪ್ರತಿ ವ್ಯಕ್ತಿಗೆ ₹550.</strong></p><img><p>ತಿರುಪತಿ ವ್ಯಾಪ್ತಿಯ ಪ್ರಮುಖ ದೇವಾಲಯಗಳನ್ನು ಈ ಪ್ಯಾಕೇಜ್‌ನಲ್ಲಿ ಸೇರಿಸಲಾಗಿದೆ. ತಿರುಚಾನೂರು, ಶ್ರೀನಿವಾಸಮಂಗಾಪುರ, ಕಪಿಲೇಶ್ವರ ಸ್ವಾಮಿ, ವಕುಳಾಮಾತೆ ಮತ್ತು ಗೋವಿಂದರಾಜಸ್ವಾಮಿ ದೇವಾಲಯಗಳಿಗೆ ಭೇಟಿ ನೀಡಬಹುದು.&nbsp;</p><p><strong>ಬಸ್ ಸಮಯ: ಬೆಳಗ್ಗೆ 6 ರಿಂದ ಮಧ್ಯಾಹ್ನ 2. ಟಿಕೆಟ್ ದರ: ಪ್ರತಿ ವ್ಯಕ್ತಿಗೆ ₹250.</strong></p><img><p>ಶ್ರೀಕಾಳಹಸ್ತಿ ದರ್ಶನಕ್ಕೆ ₹450, ಕಾಣಿಪಾಕಂಗೆ ₹550 ಶುಲ್ಕವಿದೆ. ತಿರುವಣ್ಣಾಮಲೈ, ವೆಲ್ಲೂರು ಗೋಲ್ಡನ್ ಟೆಂಪಲ್, ಕಾಣಿಪಾಕಂಗೆ ಎಸಿ ಬಸ್‌ನಲ್ಲಿ ಹೋಗಲು ₹1200. ಹೆಚ್ಚಿನ ಮಾಹಿತಿಗಾಗಿ ತಿರುಪತಿಯ ಶ್ರೀನಿವಾಸಂ, ವಿಷ್ಣುನಿವಾಸಂನಲ್ಲಿರುವ ಪ್ರವಾಸೋದ್ಯಮ ಕಚೇರಿ ಅಥವಾ <strong>9848007033, 0877–2289123</strong> ಸಂಪರ್ಕಿಸಿ.</p>



Source link

Leave a Reply

Your email address will not be published. Required fields are marked *