ಕೋಲಾರ, (ಫೆಬ್ರವರಿ 26): ಕೋಲಾರ (ಕೋಲಾರ) ಹಾಲಿನ ಕಾಂತ್ರಿ ರಾಜ್ಯದಲ್ಲೇ ಹೆಸರು ಮಾಡಿದ ಜಿಲ್ಲೆ, ರಾಜ್ಯದಲ್ಲೇ ಹಾಲು ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದೆ. ನೀರಿಗಿಂತ ಹೆಚ್ಚಾಗಿ ಹಾಲಿನ ಹೊಳೆಯ ಹರಿಯುತ್ತದೆ. ಇಂಥ ಜಿಲ್ಲೆಯಲ್ಲಿ ಈಗ ಕಲಬೆರೆಗೆ ಹಾಲಿನ (ಹಾಲಿನ ಕಲಬೆರಕೆ)ದಂಧೆ ಶುರುವಾಗಿದ್ದು, ಉತ್ತರ ಕಲಬೆರಕೆ ಹಾಲಿನ ವಿರುದ್ಧ ಸಮತ ಸಾರಿದೆ.ಕೋಲಾರ ಜಿಲ್ಲೆಯ ಮುಳಬಾಗಿಲು, ಕೆಜಿಎಫ್, ಶ್ರೀನಿವಾಸಪುರ ತಾಲೂಕಿನಲ್ಲಿ ಕಲಬೆರಕೆ ದಂಧೆಯಲ್ಲಿ ಅವ್ಯಾಹತವಾಗಿದೆ. ಸುಮಾರು 32 ಸ್ಥಳದಲ್ಲಿ ಕಲಬೆರಕೆ ಹಾಲಿನ ಬಗ್ಗೆ ದೂರು ಜೊತೆಗೆ KGF ತಾಲೂಕಿನಲ್ಲಿ ಎಸ್ಪಿ ಶಿವಾಂಶು ರಾಜಪೂತ್ ನೇತೃತ್ವದಲ್ಲಿ ದಾಳಿ ನಡೆದಿದ್ದು, 8 ಜನರನ್ನು ಬಂಧಿಸಿದ್ದಾರೆ. ಸದ್ಯ ಕಲಬೆರಕೆ ಹಾಲಿನ ಮಾದರಿಯನ್ನು ಸಂಗ್ರಹಿಸಿ ಲ್ಯಾಬ್ಗೆ ಕಳುಹಿಸಲಾಗಿದೆ, ವರದಿ ಆಧಾರದ ಮೇಲೆ ಖಾಸಗಿ, ಅನಧಿಕೃತ ಡೇರಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿದೆ.