ಉಡುಪಿ, ಡಿಸೆಂಬರ್ 26: ಉಡುಪಿಯ ಕಡೆಗೋಲು ಕೃಷ್ಣ ದೇವರನ್ನು ‘ಅನ್ನ ಬ್ರಹ್ಮ’ ಎಂದೂ ಕರೆಯುತ್ತಾರೆ. ಅದೇ ರೀತಿ ‘ಉತ್ಸವ ಬ್ರಹ್ಮ’ ಎಂದೂ ಕಾಣಿಸುವುದಿಲ್ಲ. ಪ್ರತಿದಿನ ಕೃಷ್ಣ ದೇವರಿಗೆ ಉತ್ಸವ ನಡೆಯುತ್ತಿದೆ. ಇನ್ನು ಮುಂದೆ ಕೃಷ್ಣದೇವರ ಉತ್ಸವಕ್ಕೆ ಹೊಸ ಮೆರಗು ಸಿಗಲಿದೆ. ಪರ್ಯಾಯ ಪುತ್ತಿಗೆ ಮಠಾಧೀಶರು ಇದೀಗ ಪಾರ್ಥಸಾರಥಿ ಸುವರ್ಣ ರಥವನ್ನು ಕೃಷ್ಣನಿಗೆ ಅರ್ಪಿಸಲಿದ್ದಾರೆ. ಸನ್ಯಾಸಿಯಾಗಿ 50 ವರ್ಷಗಳ ನಂತರ, ಸುಂದರ ರಥವನ್ನು ನಿರ್ಮಿಸಿ ಕೃಷ್ಣದೇವರಿಗೆ ಅರ್ಪಿಸುತ್ತಿದ್ದಾರೆ. ಉಡುಪಿ ಕೃಷ್ಣ ಮಠದ ಪೂಜಾ ಪರಂಪರೆಯಲ್ಲಿ ಇದೊಂದು ಐತಿಹಾಸಿಕ ಮೈಲಿಗಲ್ಲು. ಮಳೆಗಾಲದ ಕೆಲವು ದಿನಗಳನ್ನು ಪ್ರತಿದಿನವೂ ಉಡುಪಿ ಕೃಷ್ಣನಿಗೆ ರಥೋತ್ಸವವಿದೆ. ಏಳು ರಥಗಳು ಕೃಷ್ಣನ ಸೇವೆಗೆ ಬಳಕೆಯಾಗುತ್ತಿದೆ, ಇದು ಎಂಟನೇ ರಥವಾಗಿದೆ.
ವಿಶ್ವಗೀತಾ ಪರ್ಯಾಯ ವಿಶೇಷ ಈ ಚಿನ್ನದ ರಥ!
ಅಷ್ಟಮಠಗಳು ಅಷ್ಟ ರಥಗಳು ಕೃಷ್ಣ ಸೇವೆಗೆ ಸದಾ ಕಾಲ ಸನ್ನದ್ಧವಾಗಿದೆ. ಪರ್ಯಾಯ ಪುತ್ತಿಗೆ ಶ್ರೀಗಳು ಕೋಟಿಗೀತಾ ಲೇಖನ ಯಜ್ಞದ ಮೂಲಕ ತಮ್ಮ ಪರ್ಯಾಯವನ್ನು ವಿಶ್ವಗೀತಾ ಪರ್ಯಾಯ ಎಂದೆ ಹೇಳಿಕೊಂಡು ಬಂದಿದ್ದಾರೆ. ಅವರ ಈ ಚಿಂತನೆಗೆ ಪೂರಕವಾಗಿ ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿಯವರು ಭಗವದ್ಗೀತೆ ಪಠಿಸಿ ವಿಶ್ವವೇ ಉಡುಪಿ ಎಷ್ಟು ತಿರುಗಿ ನೋಡುವಂತೆ ಮಾಡಿದರು. ಇದೀಗ ಗೀತಾ ಪರ್ಯಾಯ ಭಗವದ್ಗೀತೆಯ ಸಂದೇಶ ಸಾರುವ ರಥದೊಂದಿಗೆ ಸಮಾಪನಗೊಳ್ಳಲಿದೆ.
ಮಠದ ಹೊರ ಭಾಗದ ರಥಬೀದಿಯಲ್ಲಿ ಎಳೆಯುವುದಕ್ಕೆ ಬದಲಾಗಿ ಕೃಷ್ಣಮಠದ ಗರ್ಭಗುಡಿಯ ಸುತ್ತಲೂ ಇರುವ ಪೌಳಿಯಲ್ಲಿ ಆಯ್ಕೆ ಇಲ್ಲ. ಭಕ್ತರಿಗೆ ಹರಕೆ ಸಲ್ಲಿಸಲು ಈ ಮೂಲಕ ಹೊಸ ಅವಕಾಶ ಸಿಗುತ್ತದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ