ಬೆಂಗಳೂರು, ನವೆಂಬರ್ 21: ಈಗಂತೂ ಎಲ್ಲರಿಗೂ ಬ್ಯುಟಿ (ಸೌಂದರ್ಯ) ಬಗ್ಗೆ ಸಿಕ್ಕಾಪಟ್ಟೆ ಕಾನ್ಶಿಯಸ್. ಸ್ಕಿನ್, ತಲೆ ಕೂದಲು ಚೆನ್ನಾಗಿ ಇರಬೇಕು, ಮುಖದಲ್ಲಿ ಪಿಂಪಲ್ಸ್ ಇರಬಾರದು ಅಂತಾ ಸದಾ ಬ್ಯುಟಿ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಾರೆ. ಇನ್ನು ಕೆಲವರಂತೂ ಒಂದು ಹೆಜ್ಜೆ ಮುಂದೆ ಹೋಗಿ ಬ್ಯೂಟಿ ಟ್ರೀಟ್ಮೆಂಟ್ ಕೂಡ ಪಡೆಯುತ್ತಾರೆ. ಅಂತವರು ಇನ್ಮುಂದೆ ಸ್ವಲ್ಪ ಎಚ್ಚರ ವಹಿಸುವುದು ಒಳ್ಳೆಯದು. ತೆಳ್ಳಗೆ, ಬೆಳಗ್ಗೆ ಕಾಣಬೇಕು ಅಂತ ನಿಮಗೆ ರೂ. ಖರ್ಚು ಮಾಡಿ ತೋರಿಸಿಕೊಳುವ ಆಸ್ಪತ್ರೆಗಳೇ (ಚಿಕಿತ್ಸಾಲಯಗಳು) ಜನರ ಜೀವ ತೆಗೆಯುತ್ತಿವೆ. ಹೀಗಾಗಿ ಸರ್ಕಾರ ಇದಕ್ಕೆಲ್ಲಾ ಕಡಿವಾಣ ಹಾಕುವುದಕ್ಕೆ ಮುಂದಾಗಿದೆ.
ಬ್ಯೂಟಿ ಟ್ರೀಟ್ಮೆಂಟ್ ಪಡೆಯುವವರ ಸಂಖ್ಯೆ ಸಂಖ್ಯೆ
ಸುಂದರವಾಗಿ ಕಾಣಬೇಕು ಪ್ರತಿಯೊಬ್ಬರ ಆಸೆ. ಕೆಲವು ನ್ಯಾಚುರಲ್ ಬ್ಯೂಟಿ, ಮತ್ತೆ ಕೆಲವು ಬ್ಯುಟಿ ಟ್ರೀಟ್ಮೆಂಟ್ ತಗೊಂಡು, ಮತ್ತಷ್ಟು ಚೆನ್ನಾಗಿ ಕಾಣಲು ಯತ್ನಿಸ್ತಾರೆ. ಕೆಲವು ಬಾಡಿ ಸ್ಪಾ ಮೊರೆ ಹೋದರೆ ಇತ್ತೀಚಿಗೆ ಬ್ಯುಟಿ ಟ್ರೀಟ್ಮೆಂಟ್ ಪಡೆಯುವವರ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಇದಕ್ಕೆ ತಕ್ಕಂತೆ ವೈದ್ಯರ ಹಾವಳಿ ಕೂಡ ಇರುತ್ತದೆ.
ಇದನ್ನೂ ಓದಿ: ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಆತಂಕ: ಅಯ್ಯಪ್ಪ ಭಕ್ತರಿಗೆ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ
ಯಾವುದೇ ಎಂಬಿಬಿಎಸ್ ಪಡೆಯದೇ, ಡರ್ಮಟಾಲಜಿ ಪ್ರಾಕ್ಟೀಸ್ ಮಾಡದೇ ಬ್ಯುಟಿ ಕ್ಲಿನಿಕ್ ನಡೆಸಿ ಲಕ್ಷ ಲಕ್ಷ ಹಣ ಪೀಕಿದ್ದಾರೆ. ಹೇರ್ ಟ್ರಾನ್ಸ್ ಪ್ಲಾಂಟ್ ಬೋರ್ಡ್ ಹಾಕಿಕೊಂಡು ವಂಚಿಸುತ್ತಿದ್ದಾರೆ. ಹೀಗಾಗಿ ಆರೋಗ್ಯ ಇಲಾಖೆ ಕಡಿವಾಣಕ್ಕೆ ಮುಂದಾಗಿದೆ. ಈ ಎಲ್ಲಾ ಚಿಕಿತ್ಸಾ ಕೇಂದ್ರಗಳನ್ನ ಆರೋಗ್ಯ ಇಲಾಖೆ ಅಡಿಯಲ್ಲಿ ತರಲು ಆರೋಗ್ಯ ಇಲಾಖೆ ಮುಂದಾಗಿದೆ.
ಬಾಡಿ ಸ್ಪಾಪ್, ಚರ್ಮದ ಥೆರಪಿ ಸೆಂಟರ್, ಸ್ಕಿನ್ ಕೇರ್ ಸಲೂನ್ ಶಾಪ್, ಲೇಸರ್ ಟ್ರೀಟ್ಮೆಂಟ್, ಸ್ಕಿನ್ ಥೆರಪಿ ಹಾಗೂ ವಿವಿಧ ಲ್ಯಾಬ್ ಹಾಗೂ ಕ್ಲಿನಿಕ್ ಗಳಿಗೆ ಶಾಕ್ ಕೊಡಲು ಆರೋಗ್ಯ ಇಲಾಖೆ ಮುಂದಾಗಿದೆ. ಆ ಮೂಲಕ ಸಲೂನ್ ಶಾಪ್, ಥೆರಪಿ ಕ್ಲಿನಿಗಳು ಸೇರಿ ಎಲ್ಲರೂ ಕಡ್ಡಾಯವಾಗಿ ಕೆಪಿಎಂಐ ಅಡಿಯಲ್ಲಿ ಲೈಸನ್ಸ್ ಪಡೆಯಬೇಕು. ಇಲ್ಲವಾದರೆ ಆಸ್ಪತ್ರೆ ಅಥವಾ ನರ್ಸಿಂಗ್ ಹೋಂಗಳು ಕ್ಲೋಸ್ ಆಗೋದು ಪಕ್ಕಾ. ಈ ಕುರಿತು ಆರೋಗ್ಯ ಇಲಾಖೆ ಹೊಸ ಆದೇಶ ಹೊರಡಿಸಿದೆ.
ಲೈಸೆನ್ಸ್ ಕಡ್ಡಾಯ
ಯಾವುದೇ ಥರಪಿ ಕ್ಲಿನಿಕ್ಗಳಲ್ಲಿ ಯಾವುದೇ ಸೂಚನೆ ಇಲ್ಲದೆ ಬೇಕಾಬಿಟ್ಟಿ ಚಿಕಿತ್ಸೆ ನೀಡಲಾಗಲಿಲ್ಲ. ಅನೇಕರಿಗೆ ಮುಖದ ಚರ್ಮ, ಕೂದಲು ಸೇರಿದಂತೆ ಜೀವಕ್ಕೆ ಕುತ್ತು ತಂದಿತ್ತು. ಈ ಬಗ್ಗೆ ಅನೇಕ ದೂರುಗಳು ಬಂದ ಹಿನ್ನಲೆ, ಇನ್ಮುಂದೆ ಆರೋಗ್ಯ ಇಲಾಖೆಯಿಂದ ಲೈಸೆನ್ಸ್ ಕಡ್ಡಾಯಗೊಳಿಸಿ ಆದೇಶ ನೀಡಿದೆ. 2007 ಕರ್ನಾಟಕ ಖಾಸಗಿ ವೈದ್ಯಕೀಯ ಪ್ರತಿಷ್ಠಾನಗಳ ಅಧಿನಿಯಮ ಜಾರಿಯಾಗಿದೆ. ಲೈಸೆನ್ಸ್ ಪಡೆಯದೆ ಹೋದರೆ, ಕಾನೂನಾತ್ಮಕ ಶಿಕ್ಷೆಗೆ ಒಳಪಡಿಸಲು ಇಲಾಖೆ ಮುಂದಾಗಿದೆ.
ಇದನ್ನೂ ಓದಿ: Dog Bite Relief Fund: ನಾಯಿ ಕಚ್ಚಿ ಸಾವನ್ನಪ್ಪಿದವರಿಗೆ 5 ಲಕ್ಷ ರೂ.ಪರಿಹಾರ ಘೋಷಿಸಿದ ರಾಜ್ಯ ಸರ್ಕಾರ
ಒಟ್ಟಿನಲ್ಲಿ ಇಷ್ಟು ದಿನ ಎಸ್ಥೆಟಿಕ್ ಸೆಂಟರ್ ಅಂತ ತೆರೆದು ಗ್ರಾಹಕರು ಮಕಮಲ್ ಟೋಪಿ ಹಾಕಿದ್ದಾರೆ. ಒಂದು ಕಡೆ ಮೋಸ ಹೋದರೆ, ಏಥಿಕಲ್ ಪ್ರಾಕ್ಟೀಸ್ ಜೀವಕ್ಕೆ ಮಾರಕವಾಗುತ್ತಿತ್ತು. ಕೆಪಿಎಂಐ ಅಂಡರ್ನಲ್ಲಿ ಈ ಕ್ಲಿನಿಕ್ ಥೆರಪಿ ಸೆಂಟರ್ಗಳಿಲ್ಲದೆ ಆರೋಗ್ಯ ಇಲಾಖೆಗೆ ಸೂಕ್ತ ಕ್ರಮಕ್ಕೂ ಸಾಧ್ಯವಾಗಿಲ್ಲ ಈಗ ಆದೇಶ ಮಾಡಿದ್ದು ಕಡಿವಾಣಕ್ಕೆ ಮುಂದಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.