Headlines

Horoscope Today 29 December : ಇಂದು ಈ ರಾಶಿಯವರಿಗೆ ಸಾಹಸ ಕಾರ್ಯಗಳು ಕಷ್ಟವಾದರೂ ಮಾಡುವರು

Horoscope Today 29 December : ಇಂದು ಈ ರಾಶಿಯವರಿಗೆ ಸಾಹಸ ಕಾರ್ಯಗಳು ಕಷ್ಟವಾದರೂ ಮಾಡುವರು


Horoscope Today 29 December : ಇಂದು ಈ ರಾಶಿಯವರಿಗೆ ಸಾಹಸ ಕಾರ್ಯಗಳು ಕಷ್ಟವಾದರೂ ಮಾಡುವರು

ಮೇಷ ರಾಶಿ:

ನೈತಿಕತೆಯ ರಕ್ಷಣೆ ಅಸಾಧ್ಯ ಎನಿಸಬಹುದು. ಮಾನಸಿಕ ಶಾಂತಿಯನ್ನು ಬಲವಾಗಿ ತಂದುಕೊಳ್ಳಬೇಕು. ಶತ್ರುವಿನ ಸಂಚು ವಿಫಲ. ಭೂಮಿ ವ್ಯವಹಾರದಲ್ಲಿ ಲಾಭ. ಯಾರ ಮೇಲೂ ಸುಮ್ಮನೆ ಸಂಶಯಪಟ್ಟು ಸಂಬಂಧವನ್ನು ದೂರ ಮಾಡಿಕೊಳ್ಳುವಿರಿ. ದಾಂಪತ್ಯದಲ್ಲಿ ನೆಮ್ಮದಿ ಇಲ್ಲದೇ ಪರಸ್ಪರ ಕಲಹವಾಗಬಹುದು. ಸಾಮಾಜಿಕ ಕಾರ್ಯದಿಂದ ಸಮ್ಮಾನವನ್ನು ನಿರೀಕ್ಷಿಸುವಿರಿ. ಎಲ್ಲರನ್ನೂ ತೃಪ್ತಿಪಡಿಸುವ ಸಂಕಲ್ಪವು ಸುಮ್ಮನೇ ವ್ಯರ್ಥವಾಗುತ್ತದೆ. ನಿಮ್ಮ ಗುರಿಯ ಬಗ್ಗೆ ವಿಶ್ವಾಸವು ನಿಮಗಿರಲಿ. ನಿಮ್ಮಿಂದ ಸಹಾಯ ಪಡೆಯಲು ನಿಮ್ಮನ್ನು ಹೊಗಳುವರು. ಧಾರ್ಮಿಕ ಕಾರ್ಯಗಳಲ್ಲಿ ಶ್ರದ್ಧೆಯು ಇಲ್ಲವಾಗುವುದು. ನಿಮ್ಮ ಮೇಲೆ ಹಿತಶತ್ರುಗಳು ಬೇಕಂತಲೇ ಆರೋಪವನ್ನು ಮಾಡಬಹುದು. ಹೊಸ ಉದ್ಯೋಗ ಶುಭಾರಂಭ. ದೈಹಿಕ ಆರೋಗ್ಯ ಸುಧಾರಣೆ, ಹೊಣೆಗಾರಿಕೆ ಸಮತೋಲನ ತಾನಾಗಿಯೇ ಅನುಭವಕ್ಕೆ ಬರುವುದು. ನಿಮ್ಮ ತಿಳಿವಳಿಕೆಯನ್ನು ಇತರರ ಮುಂದೆ ತೋರಿಸಿಕೊಳ್ಳುವುದಿಲ್ಲ. ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಮನೆಯಿಂದ ದೂರ ಕಳಿಸಿರಿ. ಅನಿರೀಕ್ಷಿತ ಸಂದರ್ಭವನ್ನು ಜಾಣ್ಮೆಯಿಂದ ಎದುರಿಸುವಿರಿ.

ವೃಷಭ ರಾಶಿ:

ಉದ್ವೇಗದಿಂದ ನಿರ್ಧಾರ ತಪ್ಪುವ ಸಾಧ್ಯತೆ. ಮಾನಸಿಕ ಪೀಡೆಗೆ ವಿಶ್ರಾಂತಿ ಅಗತ್ಯ. ಶತ್ರುಕಾಟದಲ್ಲಿ ಸ್ನೇಹಿತರ ಸಹಾಯದ ಅನುಮಾನ ಬರಲಿದೆ. ಮಕ್ಕಳ ವಿದ್ಯಾಭ್ಯಾಸದ ಚಿಂತೆಯು ದೂರವಾಗುವುದು. ಉತ್ತಮ ಸ್ಥಳವು ಸಿಕ್ಕಿದ್ದು ನಿಮಗೆ ಖುಷಿಯಾಗುವುದು. ಮನೆಯಿಂದ ಹೊರಗೆ ಹೋಗಿ ಇಡೀ ದಿನವನ್ನು ಕಳೆದುಬರುವಿರಿ. ಅಪರಿಚಿತರ ಜೊತೆ ಜಗಳವಾಡಿ ಸಮಯವನ್ನು ವ್ಯರ್ಥ ಮಾಡುವಿರಿ. ವಿದ್ಯಾಭ್ಯಾಸದ ಪ್ರಗತಿಯಿಂದ ಮನೆಯಲ್ಲಿ ಖುಷಿ ಇರಲಿದೆ. ನಿಮ್ಮ ಒರಟಾದ ಮಾತು ನೌಕರರು ಸಿಟ್ಟಾಗುವಂತೆ ಮಾಡುವುದಹ. ನಿಯಮದ ತಪ್ಪಿಗೆ ದಂಡವನ್ನು ಕೊಡಬೇಕಾದೀತು. ಭೂಮಿ ವ್ಯವಹಾರದಲ್ಲಿ ಹೊಸ ಅವಕಾಶ. ಉದ್ಯೋಗ ಬದಲಾವಣೆ ಸಾಧ್ಯ. ವಂಚನೆಗೆ ಎಚ್ಚರ ವಹಿಸಿದಷ್ಟು ಸಾಲದು. ಅತಿಯಾದ ಉತ್ಸಾಹದಲ್ಲಿರುವ ನಿಮಗೆ ಸಂಗಾತಿಯ ಮಾತು ಉತ್ಸಾಹವನ್ನು ಕೊಟ್ಟಿತು. ಹಳೆಯ ಸ್ನೇಹಿತರು ಉಪಕಾರ ಸ್ಮರಣೆಯಿಂದ ಸಹಾಯ ಮಾಡುತ್ತಾರೆ. ನಿಮ್ಮ ಹೆಜ್ಜೆಗಳೆಲ್ಲ ಗುರುತಾಗಬೇಕು ಎಂದರೆ ಸಾಧ್ಯವಾಗದು.

ಮಿಥುನ ರಾಶಿ:

ಹೊಣೆಗಾರಿಕೆಯಿಂದ ಕೆಲಸದ ಒತ್ತಡ. ದೈಹಿಕ ದಣಿವೂ ತಿಳಿದಿರುವುದು. ಶತ್ರುಗಳ ಮಾತುಗಳಿಗೆ ಸ್ಪಂದಿಸಬೇಡಿ. ಯೋಚನೆಯ ದಿಕ್ಕನ್ನು ಬದಲಿಸಿದರೆ ತೊಂದರೆಗಳಿಗೆ ಉತ್ತರವೂ ಸಿಗಲಿದೆ. ಅಪರಿಚಿತರ ಸಹಾಯದಿಂದ ಪೂರ್ಣ ನಂಬಿಕೆ ಬರದು. ಹೊಸಬರನ್ನು ಸಾಮಾಜಿಕ ತಾಣದಲ್ಲಿ ಪರಿಚಯ ಮಾಡಿಕೊಳ್ಳುವಿರಿ. ತಂದೆಯ ಮಾತು ನಿಮಗೆ ಬೇಸರ ತರಬಹುದು. ಕಲಾವಿದರು ಉತ್ತಮ ಅವಕಾಶದ ನಿರೀಕ್ಷೆಯಲ್ಲಿ ಇದ್ದಾರೆ. ದಾಂಪತ್ಯದಲ್ಲಿ ಸಾಮರಸ್ಯದ ಕೊರತೆ ಬಗೆ ಹರಿಯಬಹುದು. ಕುಟುಂಬದ ನೆಮ್ಮದಿಯು ನಿಮ್ಮ ಮಾತಿನಿಂದ ವಿಚಲಿತವಾಗುವುದು. ಸ್ವಂತ ಶ್ರಮದಿಂದ ಗಳಿಸಿದ್ದು ನಿಮಗೆ ಆಪ್ತವೆನಿಸುತ್ತದೆ. ಭೂಮಿ ವ್ಯವಹಾರದಲ್ಲಿ ವಿಳಂಬ. ಉದ್ಯೋಗದಲ್ಲಿ ಸ್ಥಿರತೆಯನ್ನು ಕಾಪಾಡಿ. ನೈತಿಕ ನಡೆ ಮುಂದಿನ ಲಾಭಕ್ಕೆ ಕಾರಣ. ಮಾಡಬೇಕೆಂದುಕೊಂಡ ಕಾರ್ಯಕ್ಕೆ ತೊಂದರೆ ಬಂದರೂ ಬಿಡದೇ ಮುಂದುವರಿಸಿ. ಆದಾಯದ ಹೆಚ್ಚಿಸಿಕೊಳ್ಳು ವಿಚಾರದಲ್ಲಿ ನೀವು ಬಹಳ ಹಿಂದೆ.

ಕರ್ಕಾಟಕ ರಾಶಿ:

ಮಾನಸಿಕ ಉತ್ಸಾಹ ಹೆಚ್ಚಾದರೂ ಉದ್ವೇಗ ನಿಯಂತ್ರಿಸಿ. ಶತ್ರುಕಾಟ ತಾನಾಗಿಯೇ ದೂರವಾಗುತ್ತದೆ. ಭೂಮಿ ವ್ಯವಹಾರದಲ್ಲಿ ಪ್ರಯಾಣ ಸಾಧ್ಯ. ನಿರೀಕ್ಷಿತ ಸಂದರ್ಭವು ಇಂದು ಬರಲಿದೆ ಅದನ್ನು ಬಳಸಿಕೊಳ್ಳಿ. ಆಕಸ್ಮಿಕವಾಗಿ ಧನಲಾಭದಿಂದ ನಿಮಗೆ ಆಶ್ಚರ್ಯವಾಗಬಹುದು. ಮನಸ್ಸಿನ ಸ್ಥಿರತೆಯಲ್ಲಿ ಅಭಾವವಿದ್ದು ನಿಮ್ಮ ಗುರಿಯು ಬದಲಾಗುವುದು. ಜಾಣ್ಮೆಯಿಂದ ನಿಮ್ಮ ಕಾರ್ಯವನ್ನು ಸಾಧಿಸಿ. ನಿಮ್ಮವರನ್ನು ಕಳೆದುಕೊಳ್ಳುವ ಸಂದರ್ಭ ಬರುವುದು. ಪ್ರೇಮವು ಕೊನೆಗೂ ಅಂದುಕೊಂಡಂತೆ ಆಗಲಿದೆ. ಇಂದು ಖುಷಿಯಿಂದ ಹಣವನ್ನು ಖರ್ಚು ಮಾಡಿರಿ. ವಂಚನೆ ಪರರ ಕಾರಣದಿಂದ ತಪ್ಪುತ್ತದೆ. ಹೊಣೆಗಾರಿಕೆ ಸಮರ್ಪಕವಾಗಿ ನಿಭಾಯಿಸಿದರೆ ನೈತಿಕ ಗೌರವ. ನಿಮ್ಮ ಕೆಲಸಗಳನ್ನು ಮೇಲಧಿಕಾರಿಗಳು ಪರಿಶೀಲಿಸುತ್ತಾರೆ. ವ್ಯಾಪಾರದಲ್ಲಿ ನೀವು ಇದ್ದರೆ ಅಧಿಕ ಲಾಭವನ್ನು ಗಳಿಸುವಿರಿ. ಸಂತೋಷದ ವಿಚಾರವನ್ನು ಹೇಳಲು ಸಂಕೋಚವಾಗುವುದು. ಯಾವುದನ್ನೇ ಆದರೂ ಮಿತಿಯಲ್ಲಿ ಬಳಸಿದರೆ ಉತ್ತಮ.

ಸಿಂಹ ರಾಶಿ:

ಈ ದಿನ ವಂಚನೆಯ ಸೂಚನೆ ನಿಮಗೆ ಗಟ್ಟಿಯಾಗಿ ಕಾಣಿಸಿಕೊಂಡಿದೆ, ಎಚ್ಚರಿಕೆ ಅಗತ್ಯ. ದೈಹಿಕ ಶಕ್ತಿ ಉತ್ತಮವಾಗುತ್ತ ಹೋಗುವುದು. ಶತ್ರು ಸಂಹಾರಕ್ಕೆ ಸಮಾನವಾದ ಫಲ ಸಿಗುವ ದಿನ. ಪರರ ಕಷ್ಟಕ್ಕೆ ಸುಮ್ಮನೆ ಕಿವಿಯಾಗಿ ಸಾಕು. ಆಪ್ತರ ಭೇಟಿಯು ನಿಮಗೆ ಸಂತೋಷವನ್ನು ಕೊಡುವುದು. ವ್ಯವಹಾರವು ಅಧಿಕ ಲಾಭವನ್ನು ತಂದುಕೊಡುವುದು. ಪ್ರವಾಸ ಹೋಗುವ ಮನಸ್ಸಾದಿತು. ಅಧಿಕಾರಿಗಳು ನಿಮ್ಮ ಉದ್ಯಮವನ್ನು ಪರಿಶೀಲಿಸಬಹುದು. ನಿಮಗೆ ಬೇಡ ಎನಿಸಿದ ವಿಚಾರವೇ ಮತ್ತೆ ಕೇಳಿ ಬಂದು ಮಾನಸಿಕ ಹಿಂಸೆಯಾದೀತು. ಮನೆಯಲ್ಲಿ ಜಗಳವಾಡಿ ನೀವು ಮನಸ್ಸನ್ನು ಹಾಳುಮಾಡಿಕೊಳ್ಳುತ್ತೀರಿ. ಭೂಮಿಯ ವ್ಯವಹಾರದಲ್ಲಿ ಲಾಭ. ಹೊಸ ಉದ್ಯೋಗದಲ್ಲಿ ಹೊಣೆಗಾರಿಕೆ ಹೆಚ್ಚುತ್ತಿದೆ. ನೈತಿಕತೆ ಕಾಯ್ದುಕೊಳ್ಳಲು ಅತಿಯಾದ ಪರೀಕ್ಷೆ. ಮಕ್ಕಳ ತಪ್ಪನ್ನು ನೀವು ಸಮರ್ಥಿಸಿಕೊಳ್ಳಬೇಕಾದೀತು. ನಿಮ್ಮ ಆಯ್ಕೆಯನ್ನು ಪೂರೈಸಲು ಇಂದು ಸಾಧ್ಯವಾಗಿಲ್ಲ. ಕೊಟ್ಟ ಹಣವನ್ನು ವಾಪಾಸು ಪಡೆಯಲು ಓಡಾಟ ಮಾಡುವಿರಿ.

ಕನ್ಯಾ ರಾಶಿ:

ಉದ್ವೇಗ ಮತ್ತು ಕುಟುಂಬದ ನಿರ್ಧಾರದಲ್ಲಿ ದ್ವಂದ್ವ. ನೈತಿಕತೆಯನ್ನು ಕೈ ಬಿಡದಿರಿ. ಶತ್ರುಕಾಟದಲ್ಲಿ ಮಾತುಗಳಿಂದಲೇ ಜಯ. ಇಂದು ಮಾಡುವ ಕಾರ್ಯವು ನಿಮ್ಮ ಕುಟುಂಬಕ್ಕೆ ಯೋಗ್ಯವಾದ ಹೆಸರನ್ನು ತಂದುಕೊಡುವುದು. ಬಂಧುಗಳ ಒಡನಾಟವು ಹೆಚ್ಚಿರಲಿದೆ. ಹಣಕಾಸಿನ ವಿಚಾರಕ್ಕೆ ಸಂಗಾತಿಯ ಜೊತೆ ಮಾತನಾಡಬಹುದು. ನುಡಿಯಿಂದ ಆಪ್ತರು ದೂರ ಸರಿಯಬಹುದು. ಇಂದು ನೀವು ಅಂದುಕೊಂಡ ವಿಚಾರದಲ್ಲಿ ಜಯವು ಸಿಗುವುದು. ಕೆಟ್ಟವರ ಸಹವಾಸದಿಂದ ಅಪಕೀರ್ತಿ ಬರಬಹುದು. ಕೆಲವು ವಿಚಾರಗಳಿಗೆ ಸುಮ್ಮನೆ ಪ್ರತಿಕ್ರಿಯೆ ನೀಡಬೇಕಿಲ್ಲ. ಕೃಷಿಯ ಮಾರಾಟ ಮಾಡುವಿರಿ. ಭೂಮಿ ವ್ಯವಹಾರದಲ್ಲಿ ಮಧ್ಯಮ ಫಲ. ಉದ್ಯೋಗ ಬದಲಾವಣೆ ಯೋಚನೆ. ಮಾನಸಿಕ ಪೀಡೆಗೆ ಧ್ಯಾನ ಸಹಾಯಕ. ಕೋಪವನ್ನು ತಾನಾಗಿಯೇ ಕಡಿಮೆ ಆಗಿದ್ದು ನಿಮಗೆ ಆಶ್ಚರ್ಯವಾಗಬಹುದು. ನಿಮ್ಮ ಮನಸ್ಸಿಗೆ ಬಾರದೇ ಯಾರಿಗೂ ಏನನ್ನೂ ಕೊಡುವುದು ಬೇಡ. ನಿಮ್ಮ ಹೊಸ ವಸ್ತುಗಳನ್ನು ಬಳಸಲು ಮನಸ್ಸು ಹಿಂಜರಿಯುತ್ತದೆ.

ತುಲಾ ರಾಶಿ:

ದೈಹಿಕ ಪೀಡೆ ತಾತ್ಕಾಲಿಕವಾಗಿ ಉಪಶಮನ ಪ್ರದರ್ಶನ. ಮಾನಸಿಕ ಸ್ಪಷ್ಟತೆ ಹೆಚ್ಚಲಿದೆ. ಶತ್ರುಗಳ ಸಂಚು ಬಹಿರಂಗ. ಇಂದು ನಿಮಗೆ ಒಳ್ಳೆಯತನಕ್ಕೆ ಯಾವ ಫಲವಿಲ್ಲ ಎಂಬ ಬೇಸರವಾಗಬಹುದು. ಸಾಮಾಜಿಕ ಕೆಲಸಗಳು ನಿಮಗೆ ಇನ್ನಷ್ಟೂ ಉತ್ಸಾಹವನ್ನು ಕೊಡುವುದು. ವೈದ್ಯರು ಇಂದು ಒತ್ತಡದಿಂದ ಇರುವರು. ಅನಿವಾರ್ಯ ನೀವು ಪ್ರಯಾಣವನ್ನು ಮಾಡಬೇಕಾಗಬಹುದು. ನೀವು ಕಷ್ಟವನ್ನು ಆನಂದದಿಂದ ಕಳೆಯಿರಿ, ಅದಕ್ಕೆ ಕಾರಣ ಸುಖವಿದೆ ಎಂಬುಸ. ಸಿಗಬೇಕಾದ ವಸ್ತುವನ್ನು ನೀವು ಬಹಳ ಪ್ರಯತ್ನದಿಂದ ಉಳಿಸಿಕೊಳ್ಳುವುದು ಕಷ್ಟವಾದೀತು. ಭೂಮಿ ದಾಖಲೆಗಳು ಸರಿಯಾಗುತ್ತವೆ. ಹೊಸ ಉದ್ಯೋಗದ ಆಹ್ವಾನ ಸಾಧ್ಯ. ಹೊಣೆಗಾರಿಕೆ ಸ್ವೀಕಾರದಿಂದ ಗೌರವ. ಯಾರ ಜೊತೆಯೂ ನಿಮ್ಮ ಮಾತು ಸರಿಯಾಗಿ ಇರದು. ಇಂದು ಮನೋರಂಜನೆಯಿಂದ ನಿಮಗೆ ಸಮಾಧಾನ ಸಿಗಲಿದೆ. ಕೆಲವು ವಿಚಾರಗಳಿಗೆ ಸುಮ್ಮನೆ ಪ್ರತಿಕ್ರಿಯೆ ನೀಡಬೇಕಿಲ್ಲ. ನಿಮ್ಮ ನಿರ್ಧಾರಗಳಿಂದ ನಿಮಗೇ ಅಸಮಾಧಾನ.

ವೃಶ್ಚಿಕ ರಾಶಿ:

ಹೊಣೆಗಾರಿಕೆ ಹೆಚ್ಚಾಗಿ ಉದ್ವೇಗ ಉಂಟಾಗಬಹುದು. ವಂಚನೆಗೆ ಒಳಗಾಗದಂತೆ ಎಚ್ಚರ. ಶತ್ರುಕಾಟದಲ್ಲಿ ಧೈರ್ಯದಿಂದ ಗೆಲುವು. ಭವ್ಯ ಗೃಹದ ಕನಸನ್ನು ಯಾರ ಬಳಿಯಾದರೂ ಹೇಳಿಕೊಳ್ಳಿ. ಉನ್ನತ ವಿದ್ಯಾಭ್ಯಾಸದ ಕನಸು ಬಂಧುಗಳ ಸಹಕಾರದಿಂದ ಆಗಲಿದೆ. ಧಾರ್ಮಿಕ ಸ್ಥಳಗಳ ಭೇಟಿಯೂ ಆಗಲಿದೆ. ಸಾಲದ ಮೊತ್ತವನ್ನು ಕಡಿಮೆ ಮಾಡಿಕೊಂಡು ಸಮಾಧಾನವಾಗುವುದು. ಪ್ರೇಮವು ನಿಮಗೆ ಬಂಧನದಂತೆ ಕಾಣಿಸುವುದು. ಸಹೋದರರ ನಡುವೆ ವಿನಾಕಾರಣ ಆರಂಭವಾದ ವಾಗ್ವಾದವು ಗಂಭೀರ ಸ್ವರೂಪವನ್ನು ಪಡೆದುಕೊಳ್ಳುವುದು. ನಿಮ್ಮ ಸೋಲನ್ನು ನೀವು ಒಪ್ಪಿಕೊಳ್ಳಲಾರಿರಿ. ನಿಮ್ಮ ಎಲ್ಲ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮುಗಿಸಲು ಆಗದು. ಯಾರದೋ ಒತ್ತಾಯಕ್ಕೆ ಹೂಡಿಕೆಯನ್ನು ಮಾಡಿರಿ. ಭೂಮಿ ವ್ಯವಹಾರದಲ್ಲಿ ಲಾಭದ ಸೂಚನೆ. ಉದ್ಯೋಗದಲ್ಲಿ ಹೊಸ ಪಾತ್ರ. ನೈತಿಕತೆ ನಿಮ್ಮ ಶಕ್ತಿ. ಪಕ್ಷಪಾತ ಮಕ್ಕಳ ವಿಚಾರದಲ್ಲಿ ಮಾಡುವುದು ಬೇಡ. ನಿಮ್ಮನ್ನು ನೋಡುವ ದೃಷ್ಟಿಯು ಬದಲಾದೀತು. ಪ್ರವಾಸ ಹೋಗುವ ಮನಸ್ಸಾದಿತು. ಅಧಿಕಾರಿಗಳು ನಿಮ್ಮ ಉದ್ಯಮವನ್ನು ಪರಿಶೀಲಿಸಬಹುದು.

ಧನು ರಾಶಿ:

ಮಾನಸಿಕ ಒತ್ತಡ ಹೆಚ್ಚಾದರೂ ಕುಟುಂಬ ಬೆಂಬಲ ಸಿಗುತ್ತದೆ. ನೈತಿಕತೆಯಿಂದ ನಡೆದುಕೊಳ್ಳುವುದರಿಂದ ಶತ್ರುಸಂಹಾರ. ಇಂದು ನಿಮ್ಮ ನಡತೆಯು ಸಾಮಾನ್ಯರಂತೆ ಕಂಡರೂ ಪ್ರಭಾವವು ಅಧಿಕವಾಗಿದೆ. ಆತ್ಮೀಯರನ್ನು ನೀವು ಕಳೆದುಕೊಳ್ಳಬೇಕಾಗುವುದು. ಪ್ರಯತ್ನಕ್ಕೆ ಸರಿಯಾಗಿ ಫಲವು ಸಿಗದು. ವಸ್ತುಗಳ ಖರೀದಿಯನ್ನು ಹೆಚ್ಚು ಮಾಡುವುದು. ನಿಮ್ಮವರ ಬಗ್ಗೆ ಯಾರಾದರೂ ಕಿವಿ ಚುಚ್ಚಬಹುದು. ಹೊಂದಾಣಿಕೆಯ ಮನೋಭಾವವು ನಿಮ್ಮಲ್ಲಿ ಇರದು. ಯಾರ ಜೊತೆಗೂ ನಿಮ್ಮ ವರ್ತನೆಯು ಸಹಜತೆಯಾಗಿ ಇರದು. ಆಸ್ತಿಯ ವಿಚಾರದಲ್ಲಿ ಆಕಸ್ಮಿಕ ತಿರುವು ಬರಬಹುದು. ಸಂಗಾತಿಯ ಮಾತಿನಿಂದ ಕೆಲವು ಮಾರ್ಪಾಡು ಮಾಡಿಕೊಳ್ಳುವಿರಿ. ಭೂಮಿ ಯೋಚನೆ ಖರೀದಿಸಿ. ಹೊಸ ಉದ್ಯೋಗದ ಪ್ರಯತ್ನ ಶುಭ. ದೈಹಿಕ ವಿಶ್ರಾಂತಿ ಅಗತ್ಯ. ನಾಲ್ಕಾರು ಕಾರ್ಯಗಳನ್ನು ಒಟ್ಟಿಗೇ ವಹಿಸಿಕೊಂಡು ಯಾವುದನ್ನೂ ಮಾಡಲಾರಿರಿ. ಪ್ರಯಾಣದಲ್ಲಿ ನಿಮಗೆ ಜಾಗರೂಕರಾಗಿರಿ.

ಮಕರ ರಾಶಿ:

ವಂಚನೆಯ ಪ್ರಯತ್ನಗಳು ಗೋಚರಿಸಬಹುದು, ದಾಖಲೆಗಳ ಪರಿಶೀಲನೆ ಅಗತ್ಯ. ಉದ್ವೇಗದಿಂದ ದೈಹಿಕ ಸಮಸ್ಯೆ. ಶತ್ರುಕಾಟದಿಂದ ದೂರವಿರಿ. ನಿಮ್ಮ ಕಾರ್ಯದ ದಕ್ಷತೆಯಿಂದ ಉನ್ನತ ಸ್ಥಾನವು ಸಿಗುವುದು. ಹಿತಶತ್ರುಗಳ ಕಿರುಕುಳವನ್ನು ನೀವು ಸಹಿಸಲಾರಿರಿ. ಮಕ್ಕಳ ಬಗ್ಗೆ ಕನಿಕರ ಬರಬಹುದು. ಹೊರಗಿನ ಆಹಾರದಿಂದ ತೊಂದರೆಯಾಗುವ ಸಾಧ್ಯತೆಯಿದೆ. ಮನೆಯ ವಾತಾವರಣವು ಸಂತೋಷವನ್ನು ಕೊಟ್ಟಿತು. ಎಲ್ಲ ವಿಚಾರಕ್ಕೂ ಸಿಟ್ಟು ಉಪಯೋಗಕ್ಕೆ ಬಾರದು. ಪ್ರಾಪಂಚಿಕ ಸುಖದಲ್ಲಿ ಆಸಕ್ತಿ ಕಡಿಮೆಯಾಗುವುದು. ಅಧ್ಯಾತ್ಮದ ವಿಚಾರವು ಹೆಚ್ಚು ಇಷ್ಟವಾಗುವುದು. ಇತರರಕ್ಕೆ ಸ್ಪಂದಿಸಿ. ಎಲ್ಲರ ಜೊತೆ ಉತ್ಸಾಹದಿಂದ ಮಾತನಾಡುವಿರಿ. ನಿಮ್ಮ ಭಾವನೆಗಳಿಗೆ ಬೆಲೆ ಕೊಡಬೇಕು ಎಂದುಕೊಳ್ಳಿರಿ. ಹೊಸ ಉದ್ಯೋಗದ ಮಾತುಕತೆ. ಭೂಮಿ ವ್ಯವಹಾರದಲ್ಲಿ ತಾಳ್ಮೆ. ಹೊಣೆಗಾರಿಕೆಯನ್ನು ಹಂಚಿಕೊಳ್ಳುವುದು ಉತ್ತಮ.

ಕುಂಭ ರಾಶಿ:

ಹೊಣೆಗಾರಿಕೆ ಭಾರವಾಗುತ್ತದೆ, ಆದರೆ ಅದನ್ನು ನಿಭಾಯಿಸುವ ಶಕ್ತಿ ನಿಮ್ಮಲ್ಲಿದೆ. ಮಾನಸಿಕ ಪೀಡೆ ಕಡಿಮೆಯಾಗಲಿದೆ. ಶತ್ರುಗಳ ಯುಕ್ತಿ ವಿಫಲ. ಇಷ್ಟವಾಗದವರ ಜೊತೆ ವೃಥಾ ಕಾಲಹರಣ ಮಾಡುವುದು ಬೇಡ. ನಿಮ್ಮಷ್ಟಕ್ಕೆ ನೀವು ಇದ್ದುಬಿಡಿ. ಅಹಿತಕರ ಆಹಾರದಿಂದ ಆರೋಗ್ಯವು ಕೆಡಬಹುದು. ನೀರಿನ ಭೀತಿಯು ಇರಲಿದೆ. ಅತಿಯಾದ ಮನೆಯ ಕೆಲಸದಿಂದ ಆಯಾಸವಾಗಬಹುದು. ಅನಿರೀಕ್ಷಿತ ವಾರ್ತೆಯನ್ನು ನೀವು ನಂಬಲಾರಿರಿ. ಮಕ್ಕಳ ಜೊತೆ ಹೆಚ್ಚು ಸಮಯವನ್ನು ಕಳೆಯಲು ಇಷ್ಟವಾಗುವುದು. ನಿಮಗೆ ಯಾರಾದರೂ ಬೇಜಾರು ಮಾಡುವರು. ನೀವು ಇಂದು ಮೌನವನ್ನೇ ಹೆಚ್ಚು ಇಷ್ಟಪಡುತ್ತೀರಿ. ಭೂಮಿ ಸಂಬಂಧಿತ ಲಾಭ ಸಾಧ್ಯ. ಉದ್ಯೋಗ ಬದಲಾವಣೆಯ ಅವಕಾಶ. ನೈತಿಕ ನಿರ್ಧಾರಗಳು ಗೌರವ ತರುತ್ತವೆ. ವೈದ್ಯ ವೃತ್ತಿಯವರಿಗೆ ಅಪವಾದವು ಬರಬಹುದು. ಮಾನಸಿಕ ಕಿರಿಕಿರಿಯಿಂದ ಸ್ವಲ್ಪ ನೆಮ್ಮದಿ ಸಿಗಲಿದೆ. ಅಪರಿಚಿತರ ಜೊತೆ ಜಗಳವಾಡಿ ಸಮಯ ವ್ಯರ್ಥ ಮಾಡುವಿರಿ

ಮೀನ ರಾಶಿ:

ಉದ್ವೇಗ ಹೆಚ್ಚಾಗಿ ಮನಸ್ಸು ಅಶಾಂತಿಯಾಗಬಹುದು. ಶತ್ರುಕಾಟಕ್ಕೆ ಪ್ರತಿಕ್ರಿಯೆ ನೀಡುವಲ್ಲಿ ನೈತಿಕತೆ ಕಾಪಾಡಿ. ಭೂಮಿ ವ್ಯವಹಾರದಲ್ಲಿ ವಿಳಂಬ. ದೈಹಿಕ ದೌರ್ಬಲ್ಯವನ್ನು ಹೊಂದಿರುವುದು. ಇಂದು ನೀವು ಭೂಮಿಯ ವಿಚಾರವಾಗಿ ಕಲಹವನ್ನು ಮಾಡುತ್ತೀರಿ. ವಿವಾಹಿತರಿಗೆ ವಿವಾಹದ ಸಂತೋಷವು ಇರಲಿದೆ. ಕೃಷಿಯ ಕುರಿತು ಕುತೂಹಲ ಹಾಗೂ ಆಸೆಯು ಬರಬಹುದು. ಕಳೆದುಕೊಂಡಿದ್ದು ನಿಮ್ಮ ಕೈಸೇರಬಹುದು. ಸಣ್ಣ ಕಲಾವಿದರಿಗೆ ಪ್ರೋತ್ಸಾಹವು ಸಿಗಲಿದೆ. ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಮನೆಯಿಂದ ದೂರ ಕಳಿಸಿರಿ. ಸ್ಥಾನಮಾನವನ್ನು ಪಡೆಯಲು ಏನಾದರೂ ಮಾಡಿರಿ. ಹೊಸ ಉದ್ಯೋಗದ ಸೂಚನೆ ಇದ್ದರೂ ಹೊಣೆಗಾರಿಕೆಯೂ ಹೆಚ್ಚಲಿದೆ. ವಂಚನೆಯಿಂದ ಎಚ್ಚರ ವಹಿಸುವಿರಿ. ಸಂಗಾತಿಯು ನಿಮ್ಮ ಹಳೆಯ ವಿಚಾರವನ್ನು ನೆನಪಿಸಿ ಜಗಳವಾಡಬಹುದು. ಹೂಡಿಕೆ ಯಾರಾದರೂ ಒತ್ತಾಯ ಮಾಡಬಹುದು. ಇಂದು ನಿಮಗೆ ಇಷ್ಟವಾದ ಕೆಲಸವನ್ನು ಮಾತ್ರ ಮಾಡಿ. ಬೇರೆಯವರ ಬಗ್ಗೆ ಚಿಂತೆ ಬೇಡ. ಮನೆಯ ಸಮಸ್ಯೆಗೆ ಪರಿಹಾರ ಕಾಣುವಲ್ಲಿ ಸಂಗಾತಿಯು ಸಂಪೂರ್ಣ ಬೆಂಬಲ.

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು: ಹೇಮಂತ, ಚಾಂದ್ರ ಮಾಸ : ಪೌಷ, ಸೌರ ಮಾಸ : ಧನು, ಮಹಾನಕ್ಷತ್ರ : ಮೂಲ, ವಾರ : ಸೋಮ, ಪಕ್ಷ : ಶುಕ್ಲ, ತಿಥಿ : ನವಮೀ ನಿತ್ಯ ಸೂರ್ಯನಕ್ಷತ್ರ : ರೇವತೀ, ಯೋಗ : ಶುಕ್ಲ, – ಕರ್ಣ – 8 – 8 ಕೌಲವ, – 8 – 8 ಕೌಲವ, – ೬ಸ್ತ, – ೬. 04 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 08:13 – 09:38, ಯಮಗಂಡ ಕಾಲ 11:02 – 12:27, ಗುಳಿಕ ಕಾಲ 13:51 – 15:15

-ಲೋಹಿತ ಹೆಬ್ಬಾರ್ – 8762924271 (What’s app ಮಾತ್ರ)



Source link

Leave a Reply

Your email address will not be published. Required fields are marked *