
ನಾವು ಎಷ್ಟೇ ಮೇವು, ನೀರು ಹಾಕುತ್ತೇವೆಂದ್ರೂ ಮನೆಯವರು ಬೆನ್ನು ಸವರಿ, ಮುದ್ದು ಮಾಡಿ ಕೊಟ್ಟಂತಾಗುತ್ತದೆಯೇ? ಹೀಗಾಗಿ ಬಾಗಿಲ ಬಳಿ ಹೆಜ್ಜೆ ಸಪ್ಪಳ ಕೇಳಿದರೆ ಸಾಕು ಮಾಲೀಕರೇ ಬಂದರೇನೋ ಎಂಬಂತೆ ಕೂಗುತ್ತವೆ ಎಂದು ಓಣಿಯ ರೈತರೊಬ್ಬರು ಹೇಳುತ್ತಾರೆ.
ಈ ನಡುವೆ ಹತ್ಯೆಗೀಡಾದ ಮಾನ್ಯಾಳಿಗೆ ಇಬ್ಬರು ತಮ್ಮಂದಿರು, ದೊಡ್ಡಪ್ಪನ ನಾಲ್ಕು ಜನ ಮಕ್ಕಳು. ಈ 6 ಜನರಲ್ಲಿ ಇಬ್ಬರು ಕಾಲೇಜಿಗೆ ಹೋಗುತ್ತಿದ್ದರೆ, ನಾಲ್ವರು ಶಾಲೆಗೆ ಹೋಗುವ ಸಣ್ಣ ಮಕ್ಕಳಂತೆ. ಊರು ಬಿಟ್ಟಿದ್ದರಿಂದ ಶಾಲಾ-ಕಾಲೇಜಿಗೆ ಹೋಗಿಯೇ ಇಲ್ಲ. ಹೀಗಾಗಿ ಈ ಮಕ್ಕಳ ವಿದ್ಯಾಭ್ಯಾಸವೂ ಅರ್ಧಕ್ಕೆ ಮೊಟಕಾಗಿದೆ. ಮನೆಯಲ್ಲಿನ ಹೆಣ್ಮಕ್ಕಳಾದರೂ ಮತ್ತೆ ಊರಿಗೆ ಬಂದು ಜಾನುವಾರು, ಹೊಲ ಮನೆ ನೋಡಿಕೊಳ್ಳುವಂತೆ ಆಗಬೇಕ್ರಿ ಎಂಬುದು ಊರಿನಲ್ಲಿನ ಜನರ ಅಂಬೋಣ.