Headlines

ಶೀಲ ಶಂಕಿಸಿ ಪತ್ನಿ ಕುತ್ತಿಗೆ ಕೊಯ್ದು ಬರ್ಬರ ಹತ್ಯೆ: ಕಿಂಚಿತ್ತು ಪಶ್ಚಾತ್ತಾಪವಿಲ್ಲದೇ ಪತಿ ಬಿಚ್ಚಿಟ್ಟ ಮರ್ಡರ್ ಕಹಾನಿ

ಶೀಲ ಶಂಕಿಸಿ ಪತ್ನಿ ಕುತ್ತಿಗೆ ಕೊಯ್ದು ಬರ್ಬರ ಹತ್ಯೆ: ಕಿಂಚಿತ್ತು ಪಶ್ಚಾತ್ತಾಪವಿಲ್ಲದೇ ಪತಿ ಬಿಚ್ಚಿಟ್ಟ ಮರ್ಡರ್ ಕಹಾನಿ


ಬೆಂಗಳೂರು, (ನವೆಂಬರ್ 07): ಶೀಲ ಶಂಕಿಸಿ ಪತಿಯೇ (ಗಂಡ) ಪತ್ನಿಯನ್ನ (ಹೆಂಡತಿ) ಕೊಲೆ ಮಾಡಿರುವ ಘಟನೆ ಬೆಂಗಳೂರಿನ (ಬೆಂಗಳೂರು) ಅಮೃತಹಳ್ಳಿಯ ಗಂಗಮ್ಮ ಲೇಔಟ್‌ನಲ್ಲಿ ನಡೆದಿದೆ. ತರಕಾರಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಅಂಜಲಿ (20) ಮೃತ ಮಹಿಳೆ, ಟ್ರಾವೆಲ್ಸ್ ಕಛೇರಿಯಲ್ಲಿ ಡ್ರೈವರ್ ಆಗಿದ್ದ ಆರೋಪಿ ಪತಿ ರವಿಚಂದ್ರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಈ ವೇಳೆ ರವಿಚಂದ್ರ ಕಿಂಚಿತ್ತು ಪಶ್ಚಾತ್ತಾಪವಿಲ್ಲದೇ ಪೊಲೀಸರ ಮುಂದೆ ಮರ್ಡರ್ ಕಹಾನಿ ಬಿಚ್ಚಿಟ್ಟಿದ್ದಾನೆ.

ಕೊಲೆಯಾದ ಅಂಜಲಿ ಮೂಲತಃ ತುಮಕೂರು ಜಿಲ್ಲೆ ಪಾವಗಡದಳು. ಒಂದು ಮದುವೆಯಾಗಿ ಮಗು ಇದ್ದು ದಾಂಪತ್ಯ ಕಲಹದಿಂದ ಮೊದಲ ಪತಿಯಿಂದ ದೂರವಾಗಿದ್ದಳು. ಈ ನಡುವೆ ಯಾದಗಿರಿಯ ಸುರಪುರ ಮೂಲದ ರವಿಚಂದ್ರ ಎಂಬಾತನ ಮೇಲೆ ಲವ್ ಶುರುವಾಗಿತ್ತು.ಆತನಿಗೂ ಮದಿವೆಯಾಗಿ ಹೆಂಡ್ತಿ ಬಿಟ್ಟಿದ್ದ.ಆ ಇಬ್ಬರಿಗೂ ಮದುವೆಯಾಗಿದ್ದು,ಅಮೃತಹಳ್ಳಿಯ ಗಂಗಮ್ಮ ಲೇಟ್ ಮನೆಗೆ ಕಳೆದ ಎರಡು ತಿಂಗಳ ಹಿಂದೆ ಬಾಡಿಗೆಗೆ ಬಂದು ವಾಸವಾಗಿದ್ದರು. ಅಂಜಲಿ, ದಾಸರಹಳ್ಳಿಯಲ್ಲಿ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ರವಿ ಟ್ರಾವೆಲ್ಸ್ ನಲ್ಲಿ ಬಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾನೆ. ಹೀಗಾಗಿ ಈತ ವಾರಕ್ಕೊಮ್ಮೆ ಮನೆಗೆ ಬರುತ್ತಿದ್ದ.

ಇದನ್ನೂ ಓದಿ: ವಿಚ್ಛೇದನ ಕೇಳಿದ್ದಕ್ಕೆ ಪತ್ನಿಯ ಖಾಸಗಿ ಫೋಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ ಪತಿ! ಅಮಲೇನಾಯ್ತು?

ಈ ನಡುವೆ ಅಂಜಲಿ ಬೇರೆ ಯುವಕನ ಜೊತೆ ಅಕ್ರಮ ಸಂಬಂಧ ಇರುವುದಾಗಿ ಶಂಕಿಸಿದ್ದ ಪತಿ ರವಿಚಂದ್ರ ನಿನ್ನೆ (ನವೆಂಬರ್ 06) ರಾತ್ರಿ ರವಿ ಹನ್ನೊಂದು ಗಂಟೆಗೆ ಬಂದಾಗ ಪತ್ನಿ ಮನೆಯಲ್ಲಿದ್ದರು. ಪೋನ್ ಮಾಡಿದ್ರೆ ಸ್ವಿಚ್ ಆಪ್ ಬಂದಿದೆ. ಈ ನಡುವೆ ರವಿಚಂದ್ರ ಹೊರ ಹೋಗಿ ಕುಡಿದು ರಾತ್ರಿ 1ಕ್ಕೆ ಮತ್ತೆ ಮನೆಗೆ ಬಂದಿದ್ದು, ಆ ವೇಳೆ ಪತ್ನಿ ಅಂಜಲಿ ನಿದ್ರೆಗೆ ಜಾರಿದ್ದಳು. ಇದರಿಂದ ಕುಪಿತಗೊಂಡು ಗಲಾಟೆ ಮಾಡಿ ಮನೆಯಲ್ಲಿದ್ದ ಚಾಕುವಿನಿಂದ ಅಂಜಲಿಗೆ ಇದ್ದಿದ್ದಾನೆ. ಕೈಯನ್ನು ಮುಷ್ಟಿ ಮಾಡಿ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಆ ಬಳಿಕ ಆರೋಪಿಯೇ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಅಷ್ಟರಲ್ಲಿ ಅಮೃತಹಳ್ಳಿ ಮಾಹಿತಿ ಆಧರಿಸಿ ಬಂದು ಪರಿಶೀಲಿಸಿದಾಗ ಅಂಜಲಿ ಉಸಿರಾಡುತ್ತಿರೋದು ಗೊತ್ತಾಗಿದೆ. ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಮಾರ್ಗಮಧ್ಯದಲ್ಲಿ ಆಯ್ಕೆಯಾಗಿದ್ದಾಳೆ. ಈ ಮನೆಯಲ್ಲಿ ಯಾವುದಾದರೂ ಜಗಳ ಏನು ಆಗಲಿದೆ. ಏನಾಯ್ತೋ ಗೊತ್ತೇ ಇಲ್ಲ ಅಂತಾರೆ ಪಕ್ಕದ ಮನೆಯವರು.

ಈ ಪ್ರಕರಣದಲ್ಲಿ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಅಂಜಲಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಅಂಬೇಡ್ಕರ್ ಮೆಡಿಕಲ್ ಕಾಲೇಜಿಗೆ ರವಾನೆ ಮಾಡಲಾಗಿದೆ. ಅದೇನೇ ಇರಲಿ ವೈವಾಹಿಕ ಜೀವನದಿಂದ ಮೊದಲೇ ಹೊಸ ಜೀವನ ಶುರುಮಾಡಿದ್ರು. ದಾಂಪತ್ಯ ಜೀವನದಲ್ಲಿ ಒಬ್ಬರಿಗೊಬ್ಬರ ಆಸರೆಯಾಗಿ ಬದುಕು ಕಟ್ಟಿಕೊಳ್ಳುವ ಬದಲು, ಪತಿ ಪತ್ನಿಯ ಶೀಲ ಶಂಕೆಗೆ ಬಲಿ ವಿಪರ್ಯಾಸವೇ ಸರಿ.



Source link

Leave a Reply

Your email address will not be published. Required fields are marked *