ನವದೆಹಲಿ, ಫೆಬ್ರುವರಿ 24: ನೀತಿ ಆಯೋಗಕ್ಕೆ ಹಂಗಾಮಿ ಸಿಐಒ ಆಗಿ ಹಿರಿಯ ಐಎಸ್ಎಸ್ ಅಧಿಕಾರಿ ನಿಧಿ ಛಿಬ್ಬರ್ (ನಿಧಿ ಛಿಬ್ಬರ್) ಅವರಿಗೆ ಸರ್ಕಾರ ನೇಮಕ ಮಾಡಿದೆ. ಹಾಲಿ ಸಿಐಒ ಬಿ.ವಿ.ಆರ್. ಸುಬ್ರಹ್ಮಣ್ಯಂ ಅವರ ವಿಸ್ತೃತ ಅವಧಿ ಮುಕ್ತಾಯಗೊಳ್ಳುವವರೆಗೆ ಮುಂದಿನ ಸಿಇಒ ನೇಮಕವಾಗುವವರೆಗೂ ಹಂಗಾಮಿ ಸ್ಥಾನಕ್ಕೆ ನಿಧಿ ಅವರನ್ನು ಕೂರಿಸಲಾಗಿದೆ.
ನಿಧಿ ಛೀರ್ ಅವರು ನೀತಿ ಆಯೋಗದಲ್ಲಿ ಅಭಿವೃದ್ಧಿ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಕಚೇರಿಯಲ್ಲಿ ಮಹಾನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಸೇವೆಯ ಜೊತೆಗೆ ಹೆಚ್ಚುವರಿಯಾಗಿ ಸಿಐಒ ಹೊಣೆಗಾರಿಕೆಯನ್ನು ಅವರಿಗೆ ವಹಿಸಲಾಗಿದೆ. ಇವರ ನೇಮಕಾತಿ ಆದೇಶವನ್ನು ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ನೀಡಿದೆ.
ನಿಧಿ ಛೀಬ್ ಅವರ ನೀತಿ ಆಯೋಗದ ಸಿಐಒ ಸ್ಥಾನವನ್ನು ಎದುರಿಸುತ್ತಿರುವ ಎರಡನೇ ಮಹಿಳೆಯಾಗಿದ್ದಾರೆ. 2015ರಲ್ಲಿ ರಚನೆಯಾದ ನೀತಿ ಆಯೋಗದ ಮೊದಲ ಸಿಐಒ ಸ್ಥಾನಕ್ಕೆ ಸಿಂಧುಶ್ರೀ ಖುಲ್ಲರ್ ಅವರನ್ನು ನೇಮಿಸಲಾಯಿತು. ಬಿ.ವಿ.ಆರ್. ಸುಬ್ರಹ್ಮಣ್ಯಂ ಅವರು ನೀತಿ ಆಯೋಗದ ನಾಲ್ಕನೇ ಸಿಐಒ ಆಗಿದ್ದಾರೆ.
ಇದನ್ನೂ ಓದಿ: ಡಿಸೆಂಬರ್ ಕ್ವಾರ್ಟರ್ನಲ್ಲಿ ಜಿಡಿಪಿ ಶೇ. 8.1 ಹಿಗ್ಗಿರುವ ಸಾಧ್ಯತೆ: ಎಸ್ಬಿಐ ವರದಿಯಲ್ಲಿ ಅಂದಾಜು
ನೀತಿ ಆಯೋಗದ ಸಿಇಒಗಳಿವರು…
- ಸಿಂಧುಶ್ರೀ ಖುಲ್ಲರ್: 2015-16
- ಅಮಿತಾಭ್ ಕಾಂತ್: 2016-22
- ಪರಮೇಶ್ವರನ್ ಅಯ್ಯರ್: 2022-23
- ಬಿ.ವಿ.ಆರ್. ಸುಬ್ರಹ್ಮಣ್ಯಂ: 2023-26
ನೀತಿ ಆಯೋಗದ ಸಿಐಒ ಸ್ಥಾನ ಒಂದು ವರ್ಷದ ಅವಧಿಯಲ್ಲಿರುತ್ತದೆ. ಸುಬ್ರಹ್ಮಣ್ಯಂ ಅವರ ಅವಧಿಯನ್ನು ಒಂದು ವರ್ಷ ವಿಸ್ತರಿಸಲಾಗಿದೆ. ಅದು ಫೆಬ್ರುವರಿ 24ಕ್ಕೆ ಮುಗಿದಿದೆ. ಅವರ ಅವಧಿಯನ್ನು ಮತ್ತಷ್ಟು ವಿಸ್ತರಿಸಲಾಗಿಲ್ಲ.
ಇದನ್ನೂ ಓದಿ: ಭಾರತ್ ಟ್ಯಾಕ್ಸಿಗೆ 500 ರೂ ನೀಡಿದರೆ ನೀವೇ ಡ್ರೈವರ್, ನೀವೇ ಒದಗಿಸಿ; ಈ ಕಂಪನಿಯ ಬ್ಯುಸಿನೆಸ್ ಮಾಡಲ್ ಹೇಗೆ?
ಏನಿದು ನೀತಿ ಆಯೋಗ?
ಇದು ಸರ್ಕಾರದ ಅತ್ಯುನ್ನತ ಮಟ್ಟದ ಚಿಂತನಾ ವೇದಿಕೆ. ಸರ್ಕಾರದ ಆರ್ಥಿಕ ನೀತಿ ವಿಚಾರದಲ್ಲಿ ಸಲಹೆ ನೀಡುವ ಗುಂಪಿನದು. ಈ ಹಿಂದೆ ಇದ್ದ ಯೋಜನಾ ಆಯೋಗವನ್ನು ರದ್ದು ಮಾಡಿ ಈ ಸರ್ಕಾರ ನೀತಿ ಆಯೋಗ ರಚಿಸಿದೆ. ಈ ನೀತಿ ಆಯೋಗದ ಪ್ರಧಾನಿಗಳು ಚೇರ್ಮನ್ ಆಗಿರಬೇಕು. ಸದ್ಯ ವೈಸ್ ಚೇರ್ಮನ್ ಆಗಿ ಸುಮನ್ ಕೆ ಬೆರಿ ಅವರಿದ್ದಾರೆ. ಡಾ. ವಿ.ಕೆ. ಸಾರಸ್ವತ್, ಡಾ. ವಿ.ಕೆ. ಪೌಲ್, ಡಾ. ರಾಜೀವ್ ಗೌಬಾ, ರಮೇಶ್ ಚಂದ್ ಮತ್ತು ಅರವಿಂದ್ ವಿರ್ಮಾನಿ ಅವರು ನೀತಿ ಆಯೋಗದ ಪೂರ್ಣ ಸದಸ್ಯರಾಗಿದ್ದಾರೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ