ಚೆನ್ನೈ, ಅಕ್ಟೋಬರ್ 27: ಉತ್ಕೃಷ್ಟ ಜೀವನ ಮತ್ತು ವೃತ್ತಿ ಅಪೇಕ್ಷಿಸಿ ಅಮೆರಿಕಕ್ಕೆ ಹೋದ ಭಾರತೀಯ ಸಮುದಾಯದವರ ಮೇಲೆ ಜನಾಂಗೀಯ ದ್ವೇಷ ತೋರುವ ಪ್ರಕರಣಗಳು ಹೆಚ್ಚುತ್ತಿವೆ. ಭಾರತೀಯರು ಅಮೆರಿಕನ್ನರ ಕೆಲಸಗಳನ್ನು ಕಿತ್ತುಕೊಳ್ಳುತ್ತಿದ್ದಾರೆ ಎಂದು ಹೇಳುವವರ ಸಂಖ್ಯೆ ಹೆಚ್ಚುತ್ತಿದೆ. ವಲಸಿಗರು ಬೇಡ ಎನ್ನುವ ಧೋರಣೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಹೇಳುತ್ತಿದ್ದಾರೆ. ವಲಸಿಗರ ಹೆಚ್ಚಿನ ಅಭಿವೃದ್ಧಿ ತೋರಿರುವ ಭಾರತೀಯ ಸಮುದಾಯದವರ ಮೇಲೆ ದ್ವೇಷವು ಹೆಚ್ಚುತ್ತಿದೆ. ಇದೇ ಸಂದರ್ಭದಲ್ಲಿ ವಿದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಭಾರತಕ್ಕೆ ಬಂದು ತಮ್ಮ ಸೇವೆ ಸಲ್ಲಿಸುವ ಅವಶ್ಯಕತೆ ಹೆಚ್ಚಿದೆ ಎನ್ನುವ ಕರೆಗಳೂ ಕೇಳಿಬರುತ್ತಿವೆ. ಈ ಕರೆಗಳಿಗೆ ಉದ್ಯಮಿ ಶ್ರೀಧರ್ ವೆಂಬು (ಶ್ರೀಧರ್ ವೆಂಬು) ಧ್ವನಿಗೂಡಿಸಿದ್ದಾರೆ.
ಇತ್ತೀಚೆಗೆ ತಮ್ಮ ಎಕ್ಸ್ನಲ್ಲಿ ಒಂದು ಪೋಸ್ಟ್ ಹಾಕಿರುವ ಜೋಹೋ-ಸಂಸ್ಥಾಪಕರಾದ ಶ್ರೀಧರ್ ವೆಂಬು ಅವರು, ಭಾರತಕ್ಕೆ ಈಗ ಅತ್ಯುತ್ತಮ ಪ್ರತಿಭೆಗಳ ಅವಶ್ಯಕತೆಯಿದೆ. ಅನಿವಾಸಿ ಭಾರತೀಯರು ಭಾರತಕ್ಕೆ ಬರಲು ಆಲೋಚಿಸಬೇಕು ಎಂದು ಕರೆ ನೀಡಿದರು.
ಇದನ್ನೂ ಓದಿ: ಬೆಂಗಳೂರಿಗೆ ಹೋಗಿ ಬಂದಾಗೆಲ್ಲಾ ಉತ್ಸಾಹ ಇಮ್ಮಡಿಸುತ್ತೆ: ಮರ್ಸಿಡಸ್ ಬೆಂಜ್ ಸಿಐಒ ಓಲಾ ಕ್ಯಾಲೆನಿಯಸ್
‘ಭಾರತೀಯರು ತಾವು ವಲಸೆ ಹೋದ ದೇಶಕ್ಕೆ ಅತಿಹೆಚ್ಚು ಕೊಡುಗೆ ನೀಡಿದ್ದಾರೆ. ಅತ್ಯುತ್ತಮವಾದವರನ್ನು ಭಾರತ ಹೊರದೇಶಗಳಿಗೆ ಕಳುಹಿಸುತ್ತದೆ. ಮುಂದಿನ ತಲೆಮಾರಿನ ಜನರಲ್ಲಿ ಅತ್ಯುತ್ತಮವಾದವರನ್ನು ಭಾರತ ಉಳಿಸಿಕೊಳ್ಳುತ್ತದೆಂದು ಆಶಿಸಿದ್ದೇನೆ. ಹೊರಗೆ ಹೋದ ಕೆಲ ಪ್ರತಿಭೆಗಳನ್ನು ಭಾರತ ಆಕರ್ಷಿಸಲಿ’ ಎಂದು ಶ್ರೀಧರ್ ವೆಂಬು ತಮ್ಮ ಎಕ್ಸ್ ಪೋಸ್ಟ್ನಲ್ಲಿ ಬರೆದಿದ್ದಾರೆ.
‘ವಲಸಿಗರ ದೃಷ್ಟಿಯಿಂದ ಹೇಳುವುದಾದರೆ, ನಿಮ್ಮನ್ನು ಬೇಡ ಎನ್ನುವ ಕಡೆ ನೀವು ಯಾಕೆ ಇರಬೇಕು? ಭಾರತ ಮಾತೆಗೆ ನಿಮ್ಮ ಅಗತ್ಯ ಇದೆ, ನಿಮ್ಮನ್ನು ಸ್ವಾಗತಿಸುತ್ತದೆ. ತವರಿಗೆ ಬನ್ನಿರಿ… ಸಮೃದ್ಧ ಮತ್ತು ಸುದೃಢ ಭಾರತ ನಿರ್ಮಿಸೋಣ’ ಎಂದು ವೆಂಬು ಕರೆ.
ಶ್ರೀಧರ್ ವೆಂಬು ಅವರ ಎಕ್ಸ್ ಪೋಸ್ಟ್
ಕೆಳಗಿನ ಚಾರ್ಟ್ ತೋರಿಸುವಂತೆ ಭಾರತೀಯ ವಲಸಿಗರು ತಮ್ಮ ಅತಿಥೇಯ ರಾಷ್ಟ್ರಕ್ಕೆ ಹೆಚ್ಚಿನ ಹಣಕಾಸಿನ ಕೊಡುಗೆಯನ್ನು ನೀಡುತ್ತಾರೆ.
ಭಾರತ ಆಕೆಗೆ ಅತ್ಯುತ್ತಮವಾಗಿ ಕಳುಹಿಸಿದೆ.
ಮುಂದಿನ ಪೀಳಿಗೆಯಲ್ಲಿ ಭಾರತವು ತನ್ನ ಅತ್ಯುತ್ತಮತೆಯನ್ನು ಉಳಿಸಿಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ. ಬಿಟ್ಟುಹೋದ ಕೆಲವು ಪ್ರತಿಭೆಗಳನ್ನು ಭಾರತವೂ ಆಕರ್ಷಿಸಬೇಕು.
ವಲಸೆಗಾರರ ದೃಷ್ಟಿಕೋನದಿಂದ, ಏಕೆ ಉಳಿಯಿರಿ… https://t.co/OybctebEjF
– ಶ್ರೀಧರ್ ವೆಂಬು (@svembu) ಅಕ್ಟೋಬರ್ 24, 2025
ಎಲ್ಲಾ ವಲಸಿಗರ ಹೊರಗಿನ ಭಾರತೀಯ ಮೂಲದವರು ಅತಿಹೆಚ್ಚು ಕೊಡುಗೆಗಳನ್ನು ಖಚಿತಪಡಿಸಿದ್ದಾರೆ, ತಾವೇ ನಡೆಸುತ್ತಿರುವ ಹೊಸ ಸಂಶೋಧನೆಯ ಅಂಕಿಅಂಶಗಳು ಡೆನಿಯಲ್ ಡಿ ಮಾರ್ಟಿನೋ ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಅದನ್ನು ಉಲ್ಲೇಖಿಸಿರುವ ಶ್ರೀಧರ್ ವೆಂಬು, ಅನಿವಾಸಿ ಭಾರತೀಯರಿಗೆ ತವರಿಗೆ ಬರಬೇಕೆಂದು ಕರೆ ಕೊಟ್ಟಿದ್ದಾರೆ.
ಇದನ್ನೂ ಓದಿ: ಕರೆನ್ಸಿ ಇಲ್ಲ, ದೊಡ್ಡ ಸೇನೆ ಇಲ್ಲ, ಕಳ್ಳಕಾಕರಿಲ್ಲ; ರಾತ್ರಿ ಮನೆಗಳಿಗೆ ಬೀಗ ಹಾಕಲ್ಲ; ಎಲ್ಲೆಡೆ ಇಂಥದ್ದೂ ಒಂದು ದೇಶ
ಶ್ರೀಧರ್ ವೆಂಬು ಅವರು ತಮ್ಮ ಜೋಹೋ ಕಾರ್ಪೊರೇಶನ್ ಸಂಸ್ಥೆಯನ್ನು ಕಟ್ಟಿ ಅಮೆರಿಕದಲ್ಲಿ ಅದನ್ನು ಬೆಳೆಸಿ, ಕೆಲವು ವರ್ಷಗಳ ಹಿಂದಷ್ಟೇ ಭಾರತಕ್ಕೆ ವಾಪಸ್ಸಾಗಿ ಇಲ್ಲಿಯೇ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ವಾಟ್ಸಾಪ್ಗೆ ಪರ್ಯಾಯವೆಂದು ಪರಿಗಣಿಸಬಹುದಾದ ಅರಟ್ಟೈ ಆಯಪ್ ಸೇರಿದಂತೆ ಹಲವು ರೋಗ ಜೋಹೋ ಸಂಸ್ಥೆ ಹೊರತಂದಿದೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ