
ಈ ಬೆಳವಣಿಗೆಯಿಂದ ಬೆಂಗಳೂರು ನಗರದ ಸುಮಾರು 35,000 ಹೋಟೆಲ್ಗಳು ಸಂಕಷ್ಟಕ್ಕೆ ಸಿಲುಕಿವೆ. ನಗರಕ್ಕೆ ತಿಂಗಳಿಗೆ 3 ಲಕ್ಷ ಸಿಲಿಂಡರ್ಗಳ ಅಗತ್ಯವಿದೆ. ಪ್ರತಿದಿನ 22,000 ಸಿಲಿಂಡರ್ಗಳು ಬೇಕಾಗಿದ್ದು, ಸದ್ಯ ಕೇವಲ 11,000 ಸಿಲಿಂಡರ್ಗಳನ್ನು ಮಾತ್ರ ವಿತರಿಸಲಾಗುತ್ತಿದೆ. ಈಗಿರುವ ಸ್ಟಾಕ್ ಖಾಲಿಯಾದರೆ ಹೋಟೆಲ್ಗಳನ್ನು ಮುಚ್ಚಬೇಕಾದ ಪರಿಸ್ಥಿತಿ ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಹೋಟೆಲ್ ಮಾಲೀಕರ ಸಂಘ ಮುಖ್ಯಮಂತ್ರಿಯನ್ನು ಭೇಟಿಯಾಗಲು ತೀರ್ಮಾನಿಸಿದೆ.
ಇದನ್ನೂ ಓದಿ: ಎರಡು ದಿನದ ಬಳಿಕ ಮತ್ತೆ ಕುಸಿತವಾಯ್ತು ಚಿನ್ನದ ಬೆಲೆ; ಯುಗಾದಿ, ರಂಜಾನ್ಗೆ ಖರೀದಿಸಿ ಬಂಗಾರ