ರೈಲ್ವೆಯ ಹೊಸ OTP ಯೋಜನೆ, ಪ್ರಯಾಣಿಕರು ಇನ್ಮುಂದೆ ಇದನ್ನು ಮಾಡಲೇಬೇಕು!

ರೈಲ್ವೆಯ ಹೊಸ OTP ಯೋಜನೆ, ಪ್ರಯಾಣಿಕರು ಇನ್ಮುಂದೆ ಇದನ್ನು ಮಾಡಲೇಬೇಕು!



ರೈಲ್ವೆಯ ಹೊಸ OTP ಯೋಜನೆ, ಪ್ರಯಾಣಿಕರು ಇನ್ಮುಂದೆ ಇದನ್ನು ಮಾಡಲೇಬೇಕು!
ಭಾರತೀಯ ರೈಲ್ವೆಯು ತತ್ಕಾಲ್ ಟಿಕೆಟ್ ಬುಕಿಂಗ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತಂದಿದೆ. ಡಿಸೆಂಬರ್ 1 ರಿಂದ, ಟಿಕೆಟ್ ಖಚಿತಪಡಿಸಲು ಮೊಬೈಲ್‌ಗೆ ಬರುವ OTP ನಮೂದಿಸುವುದು ಕಡ್ಡಾಯವಾಗಿದೆ. ಅಲ್ಲದೆ, ಐಆರ್‌ಸಿಟಿಸಿ ಖಾತೆಗೆ ಆಧಾರ್ ಲಿಂಕ್ ಮಾಡುವುದು ಸಹ ತತ್ಕಾಲ್ ಬುಕಿಂಗ್‌ಗೆ ಅವಶ್ಯಕವಾಗಿದೆ.<img><p>ಭಾರತೀಯ ರೈಲ್ವೆ, ತತ್ಕಾಲ್ ಟಿಕೆಟ್ ಬುಕಿಂಗ್‌ನಲ್ಲಿ ಮಹತ್ವದ ಬದಲಾವಣೆ ತಂದಿದೆ. ಡಿಸೆಂಬರ್ 1 ರಿಂದ, ತತ್ಕಾಲ್ ಬುಕಿಂಗ್‌ಗೆ OTP ಕಡ್ಡಾಯವಾಗಿದೆ. ಮೊಬೈಲ್‌ಗೆ ಬರುವ OTP ನಮೂದಿಸಿದರೆ ಮಾತ್ರ ಟಿಕೆಟ್ ಖಚಿತವಾಗುತ್ತದೆ.</p><img><p>ರೈಲ್ವೆ ಮಾಹಿತಿ ಪ್ರಕಾರ, ಈ OTP ಆಧಾರಿತ ತತ್ಕಾಲ್ ವ್ಯವಸ್ಥೆ ಡಿಸೆಂಬರ್ 1 ರಿಂದ ಮುಂಬೈ-ಅಹಮದಾಬಾದ್ ಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಆರಂಭವಾಗಲಿದೆ. ತುರ್ತು ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವುದು ಇದರ ಉದ್ದೇಶ.</p><img><p>ಟಿಕೆಟ್ ಬುಕ್ ಮಾಡುವಾಗ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ಅದನ್ನು ನಮೂದಿಸಿದರೆ ಮಾತ್ರ ಟಿಕೆಟ್ ಖಚಿತವಾಗುತ್ತದೆ. ನಕಲಿ ಮೊಬೈಲ್ ಸಂಖ್ಯೆಗಳ ಮೂಲಕ ಬುಕಿಂಗ್ ಇನ್ನು ಸಾಧ್ಯವಿಲ್ಲ. ಸಕ್ರಿಯ ಸಂಖ್ಯೆ ಇದ್ದರೆ ಮಾತ್ರ ಬುಕಿಂಗ್ ಆಗಲಿದೆ.</p><p><strong>ಇದನ್ನೂ ಓದಿ:</strong><strong> ರೈಲಿನ ಲೋವರ್ ಬರ್ತ್ ಟಿಕೆಟ್ ಬೇಕಿದ್ದರೆ ಈ ತಪ್ಪು ಮಾಡಬೇಡಿ, ಬುಕಿಂಗ್ ಟಿಪ್ಸ್ ನೀಡಿದ ಟಿಟಿಇ</strong></p><img><p>ಐಆರ್‌ಸಿಟಿಸಿ ಖಾತೆಯಲ್ಲಿ ತತ್ಕಾಲ್ ಟಿಕೆಟ್ ಬುಕ್ ಮಾಡಲು ಗ್ರಾಹಕರು ಖಾತೆಗೆ ಆಧಾರ್ ಕಾರ್ಡ್ ನಂಬರ್ ಲಿಂಕ್ ಮಾಡಬೇಕು. ಆಧಾರ್ ಲಿಂಕ್ ಆಗದ ಖಾತೆಗಳಿಂದ ತತ್ಕಾಲ್ ಟಿಕೆಟ್ ಬುಕ್ ಮಾಡಲು ಆಗಲ್ಲ.</p><p><strong>ಇದನ್ನೂ ಓದಿ:</strong><strong> Indian Railways: ಆಹಾರ ಪ್ರಿಯ ಪ್ರಯಾಣಿಕರಿಗೆ ಭಾರತೀಯ ರೈಲ್ವೆಯಿಂದ ಸಿಹಿಯಾದ ಸುದ್ದಿ</strong></p>



Source link

Leave a Reply

Your email address will not be published. Required fields are marked *