ನಮಸ್ತೆ ವೀಕ್ಷಕರೇ.. ಜಗತ್ತನ್ನ ಆಳೋ ಜನಕ್ಕೆ ಚಿನ್ನದ ಸಿಂಹಾಸನದ ಮೇಲೆ ಕೂರಬೇಕು ಅನ್ನೋ ಹಪಾಹಪಿ ಇರುತ್ತೆ.. ಆದ್ರೆ ಈಗ ಏನಾಗಿದೆ ಗೊತ್ತಾ? ಚಿನ್ನವೇ ಸಿಂಹಾಸನದ ಮೇಲೆ ಕೂತು, ಜಗತ್ತನ್ನ ಆಳೋಕೆ ಹೊರಟಂತಿದೆ.. ನೆಲದಾಳದಲ್ಲಿ ಸಿಗೋ ಬಂಗಾರ, ಈಗ ಅಂಬರವನ್ನೂ ಮೀರಿ, ಕೈಗೆಟುಕದಷ್ಟು ದೂರಕ್ಕೆ ಸರಿದು ಹೋಗಿದೆ.. ಬಡವರು ಬಂಗಾರ ಕಂಡುಕೊಳ್ಳೋದು, ಅಸಾಧ್ಯ ಅನ್ನೋ ಸ್ಥಿತಿ ನಿರ್ಮಾಣವಾಗಿದೆ.. ಯಾಕಂದ್ರೆ, ತನ್ನೆಲ್ಲಾ ಹಳೇ ರೆಕಾರ್ಡುಗಳೇ ಛಿದ್ರವಾಗೋ ಹಾಗೆ, ಹುಚ್ಚು ಕುದುರೆಯ ಹಾಗೆ, ಓಡೋಡಿ ಹೋಗ್ತಿದೆ ಬಂಗಾರ.. ಅದಕ್ಕೆ ಕಾರಣ ಏನು? ಪರಿಣಾಮ ಏನು? ನಮಗೂ ನಿಮಗೂ ಸಿಕ್ತಾ ಇರೋ ಎಚ್ಚರಿಕೆ ಏನು? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್..