
<p>Anchor Anushree: ನಿರೂಪಕಿ ಅನುಶ್ರೀ ಅವರು ನಿರೂಪಣೆ ಶುರು ಮಾಡಿ 20 ವರ್ಷಗಳಾಗಿವೆ. ಜೀ ಕನ್ನಡ ವಾಹಿನಿಯು ಈ ಖುಷಿಯನ್ನು ಸಂಭ್ರಮಿಸಿದೆ. ಈ ವೇಳೆ ಎಲ್ಲೂ ಹೇಳಿರದ ವಿಷಯವನ್ನು ಅವರು ಮಾತನಾಡಿದ್ದಾರೆ.</p><p> </p><img><p>ಅಕುಲ್ ಬಾಲಾಜಿ, ಗಾಯಕ ಗುರುಕಿರಣ್, ಸೃಜನ್ ಲೋಕೇಶ್, ಅನುಪಮಾ ಗೌಡ ಹಾಗೂ ತಮಿಳು ತೆಲುಗು ರಿಯಾಲಿಟಿ ಶೋ ನಿರೂಪಕರಾದ ಪ್ರಿಯಾಂಕಾ, ಅರ್ಚನಾ, ರೀನಾ ಕೂಡ ಅನುಶ್ರೀ ಬಗ್ಗೆ ಹೊಗಳಿ ಮಾತನಾಡಿದ ವಿಡಿಯೋವನ್ನು ಇದೇ ಸಂದರ್ಭದಲ್ಲಿ ಪ್ಲೇ ಮಾಡಲಾಯಿತು.</p><img><p>ಅನುಶ್ರೀ ಅವರು, “ನಾನು ಹೀರೋ, ಹೀರೋಯಿನ್ಗಳಿಗೆ ಬಕೆಟ್ ಹಿಡಿಯುತ್ತೇನೆ ಎಂದು ಹೇಳೋದುಂಟು. ಇವಳಿಗೆ ಬೇರೆ ಗತಿಯಿಲ್ಲ, ಜೀ ಚಾನೆಲ್ ಆಗಬೇಕು ಎಂದು ಹೇಳಿದವರೂ ಇದ್ದಾರೆ. ನಮ್ಮ ಕನ್ನಡ ಹೀರೋ, ಹೀರೋಯಿನ್ಗಳನ್ನು ನಾವು ಹೊಗಳದೆ ಇನ್ಯಾರು ಹೊಗಳ್ತಾರೆ? ನಮಗೆ ನಮ್ಮ ಕನ್ನಡ ಕಲಾವಿದರ ಮೇಲೆ ಅಭಿಮಾನ ಇದೆ. ನಾನು ಅಳೋದು, ನಗೋದು ವೇದಿಕೆ ಮೇಲೆ, ನಾಳೆ ಸತ್ತರೂ ಕೂಡ ವೇದಿಕೆ ಮೇಲೆ ಆಗಬೇಕು. ನಾನು ಅಷ್ಟು ನಿರೂಪಣೆಯನ್ನು ಇಷ್ಟಪಡ್ತೀನಿ” ಎಂದು ಹೇಳಿದ್ದಾರೆ.</p><p>ನಿರೂಪಕಿ ಅನುಶ್ರೀ ಸಾವಿನ ಮಾತು ಆಡಿದ್ದು ಶಿವರಾಜ್ಕುಮಾರ್ಗೆ ಬೇಸರ ತಂದಿದೆ. ವೀಕ್ಷಕರು ಕೂಡ ಈ ಮಾತು ಆಡಿದ್ದಕ್ಕೆ ಬೇಸರಗೊಂಡಿದ್ದಾರೆ. ಈ ಮಾತು ಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ.</p><img><p>ಯಾರೋ ಒಬ್ಬರು ಬೆಂಗಳೂರಿನಲ್ಲಿ ಕೆಲಸ ಮಾಡಬಹುದು ಎಂದರು. ನನ್ನ ತಾಯಿಗೆ ಬೇರೆ ಮನೆ ಮಾಡಬಹುದು ಎನ್ನೋದಷ್ಟೇ ನನ್ನ ಉದ್ದೇಶ ಆಗಿತ್ತು. ಹೀಗಾಗಿ ನಾನು ಮಂಗಳೂರಿನಿಂದ ಬೆಂಗಳೂರಿಗೆ ಬಂದೆ ಎಂದು ಅನುಶ್ರೀ ಹೇಳಿದ್ದಾರೆ.</p><img><p>ನನಗೆ ಮಂಗಳೂರು ಭಾಷೆ ಬರುತ್ತಿತ್ತು, ಆದರೆ ಬೆಂಗಳೂರು ಭಾಷೆ ಬರುತ್ತಿರಲಿಲ್ಲ. ಬೆಂಗಳೂರು ಭಾಷೆಗೂ, ಮಂಗಳೂರು ಭಾಷೆಗೂ ವ್ಯತ್ಯಾಸ ಇದೆ, ನನಗೆ ಭಾಷೆ ಕಲಿಯೋದು ಸುಲಭ ಇರಲಿಲ್ಲ ಎಂದು ಅನುಶ್ರೀ ಹೇಳಿದ್ದಾರೆ.</p><img><p>ನನ್ನ ಮೊದಲ ರಿಯಾಲಿಟಿ ಶೋನಿಂದ ನನ್ನ ಜೊತೆಗೆ ಶ್ರೀಕಾಂತ್ ಸರ್ ಇದ್ದರು. ಮನೆಯಲ್ಲಿ ಅಡುಗೆ ಮಾಡುವಾಗ, ನೆಲ ಒರೆಸುವಾಗ, ಕಸ ಗುಡಿಸುವಾಗ ನನ್ನ ತಾಯಿ ನನ್ನ ಜೊತೆಗೆ ಮಾತನಾಡಿ, ಮಾತು ಹೇಳಿಕೊಟ್ಟಿದ್ದರು. ನನ್ನ ತಾಯಿ ಧೈರ್ಯ ಕೊಟ್ಟಿದ್ದಕ್ಕೆ ನಾನು ಇಲ್ಲಿಗೆ ಬಂದಿದ್ದು, ಬೇರೆ ಮನೆ ಮಾಡಿದ್ದೀನಿ ಎಂದು ಅನುಶ್ರೀ ಹೇಳಿದ್ದಾರೆ.</p><img><p>ನಮ್ಮದು ಮಣ್ಣಿನ ಮನೆ, ಮಳೆ ಬಂದಾಗ ಮನೆಯೊಳಗೆ ಕೆಸರು ಬರೋದು ಸಹಜ. ನಮ್ಮ ಮನೆ ಹಿಂದೆ ಗುಡ್ಡ ಇತ್ತು. ಅಷ್ಟೇ ಅಲ್ಲದೆ ಬೇರೆ ಬೇರೆ ಮನೆಗಳು ಇರುತ್ತಿದ್ದವು. ಹೀಗಾಗಿ ಕೆಸರು ಬರುತ್ತಿತ್ತು. ಆದರೆ ಬಾತ್ರೂಮ್ ನೀರು, ಗಲೀಜು ಬರುತ್ತಿತ್ತು. ಇದನ್ನು ನಾನು ಎಲ್ಲಿಯೂ ಹೇಳಿರಲಿಲ್ಲ. ಅಲ್ಲಿಂದ ನಮ್ಮ ತಾಯಿಯನ್ನು ಹೊರಗಡೆ ಕರೆದುಕೊಂಡು ಬರಬೇಕು ಎನ್ನೋದಿತ್ತು ಎಂದಿದ್ದಾರೆ.</p>
Source link
20 ವರ್ಷದಲ್ಲಿ ಫಸ್ಟ್ ಟೈಮ್ ಎಲ್ಲೂ ಹೇಳದ ಆ ಕಹಿಸತ್ಯ ತೆರೆದಿಟ್ಟ Anchor Anushree ! ಆ ಮಾತೆಲ್ಲ ಆಡಬೇಕಾ?