
ಅಥರ್ವ ಅವರನ್ನು ಕನ್ನಡ ಕಿರುತೆರೆಯ ಹ್ಯಾಂಡ್ಸಮ್ ವಿಲನ್ ಅಂತಾನೆ ಕರೆಯಬಹುದು. ಯಾಕಂದರೆ, ಹೈಟ್, ವೈಟ್ ಪರ್ಸನಾಲಿಟಿ, ಚಿಗುರು ಮೀಸೆ, ಕಣ್ಣಲ್ಲಿನ ಆ ಖಡಕ್ ಲುಕ್ ಎಲ್ಲವೂ ವಿಲನ್ ಪಾತ್ರಕ್ಕೆ ಹೇಳಿ ಮಾಡಿಸಿದಂತಿದೆ. ಹಾಗಾಗಿಯೇ ಅಥರ್ವ ಇಲ್ಲಿವರೆಗೂ ಶ್ರಾವಣಿ ಸುಬ್ರಹ್ಮಣ್ಯ ಅಲ್ಲದೇ, ನೀನಾದೆ ನಾ, ಗೌರಿ ಶಂಕರ ಧಾರಾವಾಹಿಗಳಲ್ಲೂ ವಿಲನ್ ಆಗಿ ಮಿಂಚಿದ್ದರು.