ಅಯೋಧ್ಯೆಯ ಭವ್ಯ ಶ್ರೀ ರಾಮ ಮಂದಿರದ ನಿರ್ಮಾಣಕಾರ್ಯ ಮುಕ್ತಾಯವಾಗಿರುವ, ಇಂದು ಪ್ರಧಾನಿ ನರೇಂದ್ರ ಮೋದಿಯವರು ಅಯೋಧ್ಯೆಗೆ ಆಗಮಿಸಿ, ದೇಗುಲದ ಶಿಖರದ ಮೇಲೆ 10 ಅಡಿ ಎತ್ತರದ ಭಗವಾಧ್ವಜವನ್ನು ಹಾರಿಸಿದರು. ಇಂದು ಬೆಳಿಗ್ಗೆ 11:58 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಶುಭ ಮುಹೂರ್ತದಲ್ಲಿ ಧ್ವಜಾರೋಹಣ ನೆರವೇರಿದೆ. ಇನ್ನು ಈ ಸಮಾರಂಭದ ಸಂಬಂಧ ರಾಮಮಂದಿರಕ್ಕೆ ಲೈಟಿಂಗ್ಸ್ ಅಲಂಕಾರ ಮಾಡಿದ್ದ ಕರ್ನಾಟಕ ರಾಜೇಶ್ ಶೆಟ್ಟಿ. ಇನ್ನು ಈ ಧರ್ಮ ಧ್ವಜಾರೋಹಣ ಕಾರ್ಯಕ್ರಮಕ್ಕೆ ಬಂದ ನರೇಂದ್ರ ಮೋದಿ ಸೇರಿದಂತೆ ಇತರ ಗಣ್ಯರಿಗೆ ಆಹಾರದ ವ್ಯವಸ್ಥೆ ಮಾಡಿದ್ದು ಸಹ ಕನ್ನಡಿಗರು ವಿಶೇಷ. ಹೌದು… ಮೋದಿ ಸೇರಿದಂತೆ ಇತರೇ ವಿಐಪಿ, ವಿವಿಐಪಿಗಳಿಗೆ ಕರ್ನಾಟಕದ ಆಹಾರಗಳು. ಇನ್ನು ರಾಮಮಂದಿರದಲ್ಲಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಕನ್ನಡಿಗ ಸುರೇಂದ್ರ ಕಾಂಚಣ್ ಪ್ರತಿಕ್ರಿಯೆ, ವಿಐಪಿ ವಿವಿಐಪಿಗೆ ಕರ್ನಾಟಕ ಅಯೋಧ್ಯೆಯಲ್ಲಿ ನೀಡಲಾಗುತ್ತಿದೆ. ಇದು ನಮಗೆ ಸಂತಸದ ಕ್ಷಣ ಎಂದು ಹರ್ಷ ವ್ಯಕ್ತಪಡಿಸಿದರು.